ಹಾಗೆ ವಚನ ಚಳವಳಿಯಲ್ಲಿ ಬಸವಣ್ಣ ಎನಿಸುತ್ತಾನೆ.
ಬಸವಣ್ಣನ ವಚನಗಳಲ್ಲಿ ಆತ್ಮೀಯತೆ, ಆದರ, ಮಧುರತೆ, ಆಪ್ತತೆ ತುಂಬಿ ತುಳುಕಿವೆ.
ಹಾಗಂತ ಇಡೀ ಶರಣರ ವಚನ ಚಳುವಳಿಯೇ ಶಾಂತದ ಸಾಗರವಾಗಿತ್ತೆ? ಎಂದರೆ ಖಂಡಿತವಾಗಿಯೂ ಇಲ್ಲ.
ಶಾಂತಿಯ ಕಡೆ ಗಾಂಧಿ ಇದ್ದರೆ, ಈ ಕಡೆ ಭಗತ್ ಸಿಂಗ್, ಸುಭಾಷರು ಕ್ರಾಂತಿಕಾರಿಗಳಾಗಿದ್ದರು. ಹಾಗೆಯೇ ಆಕಡೆ ಬಸವಣ್ಣ ಇದ್ದರೆ ಈ ಕಡೆ ಅಂಬಿಗರ ಚೌಡಯ್ಯರಂಥಹ ವಚನ ಕ್ರಾಂತಿಕಾರರಿದ್ದರು ಎನ್ನಲಡ್ಡಿಯಿಲ್ಲ!
ಅದಕ್ಕೊಂದು ಉದಾಹರಣೆ ನೋಡಿ,
"ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕೆ ಹೋಗಿ
ಅಡಿ ಮೇಲಾಗಿ ಬೀಳುವ
ಲೊಟ್ಟೆ ಮೂಳರ ಕಂಡರೆ
ಗಟ್ಟಿ ಪಾದರಕ್ಷೆಯ ತೆಗೆದುಕೊಂಡು
ಟೊಕ ಟೊಕನೆ ಹೊಡೆಯೆಂದ
ನಮ್ಮ ಅಂಬಿಗರ ಚೌಡಯ್ಯ!"
ಮುಚ್ಚಿಲ್ಲ, ಮರೆಯಿಲ್ಲ,
ಹೇಳಬೇಕಾದ್ದನ್ನು ನಿರ್ಭಿಡೆಯಿಂದ ಹೇಳುವ ಛಾತಿ! ವ್ಹಾ!
ಇದು ವಚನ ಯುಗದ ವೈಶಿಷ್ಟ್ಯವೂ ಹೌದು,
ವೈವಿಧ್ಯತೆಯೂ ಹೌದು.
ಅಂದಹಾಗೆ ಇಂದು ಅಂಬಿಗರ ಚೌಡಯ್ಯರ ಜನ್ಮದಿನ. ಶುಭಾಶಯಗಳು.
-
ಪ್ರವೀಣ ಮ ಮಗದುಮ್ಮ
__
ಪಾಂಚಜನ್ಯ ಐಎಎಸ್ ನ ಕನ್ನಡ ಸಾಹಿತ್ಯ ತರಗತಿಗಳಿಗೆ ದಾಖಲಾತಿ ಮುಕ್ತವಾಗಿದೆ.
ಆಸಕ್ತರು ನೋಂದಾಯಿಸಿಕೊಳ್ಳಿ.
1. ಒಟ್ಟು 160+ಗಂಟೆ ಅವಧಿಯ ತರಗತಿಗಳಿದ್ದು
2. 3 ತಿಂಗಳಲ್ಲಿ ಮುಗಿಸಬಹುದು.
3. ತರಗತಿಯ ನೋಟ್ಸ್ ಕೊಡಲಾಗುವುದು.
4. Validity 1 ವರ್ಷ
Fee :
(Offer Ends soon)
ಜೂನ್ ತಿಂಗಳಲ್ಲಿ ಕನ್ನಡ ಸಾಹಿತ್ಯ Test series ಆರಂಭವಾಗಲಿದ್ದು ಈಗಲೇ ಪಠ್ಯಕ್ರಮ ಮುಗಿಸಿದರೆ ಒಳಿತು.
(2025 ರ ಪ್ರಿಲಿಮ್ಸ್ ಬರೆಯುವವರು ಈಗ Join ಆಗುವುದು ಬೇಡ)
ಮಾದರಿ ತರಗತಿಗಳು :
https://rb.gy/ih330r
Join course :
https://rb.gy/13nbig
ಹೆಚ್ಚಿನ ಮಾಹಿತಿಗೆ :
WhatsApp 9481837426