ಸೂಪರ್ ಸ್ಟಾರ್ ರಜನಿಕಾಂತ್ ಯಾರಿಗೆ ಗೊತ್ತಿಲ್ಲ ಹೇಳಿ ಅಂಥಹ ಮಹಾನಟನಾಗಲು ಕಾರಣರು ನಮ್ಮ ರಾಘವೇಂದ್ರ ಸ್ವಾಮಿಗಳು.
ಅಂದು ರಜನಿಯವರು ರಾಯರ ಮೇಲೆ ನಂಬಿಕೆಯಿಟ್ಟು ಅವರ ಭಕ್ತ್ರರಾಗಿಲ್ಲವೆಂದರೆ ಇಂದು ಇಂಥ ಉತ್ತುಂಗ ಸ್ಥಿತಿಯಲ್ಲಿ ಇರಲು ಕಂಡಿತಾ ಸಾಧ್ಯವಾಗುತ್ತಿರಲಿಲ್ಲವೇನೋ....
ರಜನಿಯವರು ಇಂದು ಚಿನ್ನದ ಚಮಚದಲ್ಲಿ ಊಟ ಮಾಡುವ ಸಿರಿತನ , ವೈಭೋಗ,ದೊಡ್ಡ ನಟ ಕೀರ್ತಿ, ಗೌರವ ಎಲ್ಲವೂ ರಾಯರಿಂದ.. ಅಂದು ಬಹಳ ಬಡತನ ಊಟಕ್ಕೂ ಇಲ್ಲದಂತಹ ಬಡತನವಂತ್ತೆ ಸಾಮಾನ್ಯ ಜನರಲ್ಲಿ ಸಾಮಾನ್ಯರು.ಅದರೆ ರಜನಿಯವರು ದೈವಭಕ್ತರಾಗಿದ್ದರು. ಜೀವನ ಸಾಗಿಸುವುದಕ್ಕೆ ಮಂಡಿ ಪೇಟೆ,ತರಗು ಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆಗಳಲ್ಲಿ ಮೂಟೆಯನ್ನು ಹೊರುತ್ತಿದ್ದರಂತೆ. ಹೀಗಿದ್ದವರು ವಿಶ್ವ ಮನ್ನಣೆ ಗಳಿಸಲು ರಾಘವೇಂದ್ರ ಸ್ವಾಮಿಗಳ ಕರುಣೆಯೇ ಕಾರಣ.
ರಜನಿಯವರು ಈಗ 75 ವರ್ಷವಾದರೂ ಅದೇ ಉಮ್ಮಸಿನಿಂದ ನಟನೆ ಮಾಡುತ್ತಾರೆ,ಅವರು ಹೊದೆಡೆ ಹಿಂಡು ಹಿಂಡು ಅಭಿಮಾನಿಗಳು ಸನ್ಮಾನ ಶಿಳ್ಳೆಗಳು ಇಷ್ಟೆಲ್ಲಾ ಅವರಿಗೆ ಜೀವನದಲ್ಲಿ ಸಿಕ್ಕಿರುವುದು ಯಾರಿಂದಲೂ ಅಲ್ಲಾ ರಾಯರ ಅನುಗ್ರಹದಿಂದ ರಜನಿಯವರು ರಾಯರ ಮೇಲಿಟ್ಟಿರುವ ಅನನ್ಯ ಭಕ್ತಿ ಅಂಥದ್ದು ಅವರ ಸೇವೆ ಅಂಥದ್ದು.
ರಜನಿಯವರು ಬೆಂಗಳೂರಿನವರು ಅವರಿಗೆ ಹಳೇ ದಿನಗಳು ಆ ನೆನಪುಗಳು ಸ್ನೇಹಿತರು ,ಅಲ್ಲೆಲ್ಲ ಓಡಾಡುವ ಆಸೆ ತುಂಬಾ. ಅದರೆ ಓಡಾಡಲು ಆಗದು ಅಭಿಮಾನಿಗಳ ಗುಂಪು .
ಅವರು ಮಾರುವೇಷದಲ್ಲಿ ಬರುವುದನ್ನು ಅವರ ಆತ್ಮೀಯ ಸ್ನೇಹಿತರು ರಾಜ್ ಬಹದ್ದೂರ್ ಹೇಳಿದ್ದಾರಂತೆ.ಹಾಗೂ ಅವರ ಜೀವನ ಬದಲಾಗಿದ್ದು,ಇಂದು ಉನ್ನತ ಮಟ್ಟದಲ್ಲಿ ಇರಲು ಕಾರಣ,ನಮ್ಮ ಜೀವನದಲ್ಲಿ ಪವಾಡಗಳನ್ನು ಮಾಡುತ್ತಿರುವುದು ರಾಘವೇಂದ್ರ ಸ್ವಾಮಿಗಳು ಎಂದು ಅವರು ಹೇಳಿಕೊಂಡಿದ್ದಾರಂತೆ.
ನಂಬಿದ ಕೋಟ್ಯಂತರ ಭಕ್ತರನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ಯುವ ,ಕರೆದಲ್ಲಿಗೆ ಓಗೊಟ್ಟು ಓಡಿಬರುವ ಕರುಣಾ ಸಾಗರ ಶ್ರೀ ರಾಘವೇಂದ್ರ ಸ್ವಾಮಿಗಳು.ರಾಯರು ರಜನಿಯವರ ಜೀವನದಲ್ಲಿ ದೊಡ್ಡ ಪವಾಡವನ್ನೇ ಮಾಡಿಬಿಟ್ಟಿದ್ದಾರೆ.
ರಜನಿಯವರು ಮಂಡೀಪೇಟೆಯಲ್ಲಿ ಮೂಟೆಯನ್ನು ಹೊತ್ತು ಜೀವನ ಸಾಗಿಸುತ್ತಿದ್ದಾಗ ಒಂದು ಅಚ್ಚರಿ ಎದುರಾಯಿತು ಯಾವ ಜನ್ಮದ ಪುಣ್ಯವೋ ಅದೃಷ್ಟವೋ ಮಂಡಿಪೇಟೆ ಸಮೀಪ ತರಗುಪೇಟೆ ಯ ಹತ್ತಿರ ಚಾಮರಾಜಪೇಟೆ ಸಮೀಪ ವಿರುವ ನಂಜನಗೂಡು ಮಠ ರಾಘವೇಂದ್ರ ಸ್ವಾಮಿಗಳ ಮಠಕ್ಕೇ ರಜನಿಯವರು ಪ್ರತಿನಿತ್ಯವೂ ಕೂಲಿ ಕೆಲಸ ಮುಗಿಸಿ ಈ ಮಠಕ್ಕೆ ರಾಯರ ದರುಶನ ಮಾಡಿ ಪ್ರದಕ್ಷಿಣೆ ನಮಸ್ಕಾರ ಹಾಕಿ ಒಂದು ಕಡೆ ಕೂತು ರಾಯರ ಧ್ಯಾನ ಮಾಡಿ ಹೋಗುತ್ತಿದ್ದರಂತೆ. ಇವರ ಜೀವನದ ದಿಕ್ಕನ್ನೇ ರಾಯರು ಬದಲಾಯಿಸಿಬಿಟ್ಟರು ಅಚ್ಚರಿವೆಂಬಂತೆ ಒಂದು ಪವಾಡವನ್ನು ಮಾಡಿಯೇಬಿಟ್ಟರು ಏನೆಂದರೆ ರಜನಿಯವರಿಗೆ ಕಂಡಕ್ಟರ್ ಕೆಲಸ ದೊರಕಿಸಿದ್ದು.
ಇದೇ ರಾಯರು ಮಾಡಿದ ಮೊದಲ ಪವಾಡ. ಕಂಡಕ್ಟರ್ ಕೆಲಸ ಸಿಕ್ಕಿದ ಕೂಡಲೇ ಪೂರ್ಣವಾಗಿ ರಾಯರಿಗೆ ಸಮಯ ಸಿಕ್ಕಾಗಲೆಲ್ಲ ತನು ಮನ ಧನ ಅರ್ಪಿಸಿ ರಾಯರಿಗೆ ದಾಸರಾಗಿ ಬಿಟ್ಟರು.
ಅದೇ ವೇಳೆ ಅವರ ಡಿಪೋನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ರಾಜ್ ಬಹದ್ದೂರ್ ಪರಿಚಯವಾಗಿ ಒಳ್ಳೆಯ ಗೆಳೆಯರಾದರು. ಹೀಗಿರುವಾಗ ರಾಯರು ಮತ್ತೊಂದು ಪವಾಡ ಮಾಡಿಬಿಟ್ಟರು.ಡಿಪೋನಲ್ಲಿ ನಾಟಕ ಪ್ರಾಕ್ಟಿಸ್ ಮಾಡುತ್ತಿರುವಾಗ ರಜನಿಯವರ ಪ್ರತಿಭೆ ಎಂತ್ತದ್ದು ಎಂದು ಗೊತ್ತಾಗಿದ್ದು.
ಸ್ನೇಹಿತನ ಪ್ರೋತ್ಸಾಹದಿಂದ ಚೆನೈ ನಾ ಫಿಲಂ ಇನ್ಸ್ಟಿಟ್ಯೂಟ್ ಗೆ ಸೇರಿದ್ದು. ಚೆನೈ ಗೆ ಹೋಗುವ ಮುನ್ನ ರಜನಿಯವರು,ರಾಯರ ದರುಶನ ಪಡೆದು ಹೋಗಿದ್ದರು .ಮುಂದೆ ಏನಾಯ್ತು ಅವರ ಜೀವನಾದಲ್ಲಿ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೆ.ರಾಯರ ನಂಬಿದ ರಜನಿಯವರಿಗೆ ಚೆನೈ ನಾ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಟ್ರೇನಿಂಗ್ ಮ್ಮುಗಿಸಿದಾಗಲೇ ನಿರ್ದೇಶಕರು ಬಾಲಚಂದರ್ರವರ ಪರಿಚಯವಾಯಿತು.ಮುಂದೆ ರಜನಿಯವರ್ ಜೀವನದ ದಿಕ್ಕೇ ಬದಲಾಯಿತು.ಜಗತ್ತೇ ಮೆಚ್ಚುವಂತಹ ನಟರಾದರು.ವಿಶ್ವ ವಿಖ್ಯಾತಿ ಗಳಿಸಿದಲ್ಲದೆ ಭಾರತ ದೇಶದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದರು.ಸೂಪರ್ ಸ್ಟಾರ್ ರಜನಿಕಾಂತ್ ಜೀವನವನ್ನೇ ಬದಲಾಯಿಸಿದ ತರಗುಪೇಟ್ ನಲ್ಲಿರುವ ಸೀತಾಪತಿ ಅಗ್ರಹಾರ ರಾಯರ ಮಠವನ್ನು ರಾಯರನ್ನು ಪ್ರತಿಕ್ಷಣವೂ ರಜನಿಯವರು ನೆನೆಯುತ್ತಿರುತ್ತಾರೆ.
ಮೊದಲು ವೇಷ ಬದಲಿಸದೆ ಈ ಮಠಕ್ಕೆ ಬರುತ್ತಿದ್ದರಂತೆ ಈಗೆಲ್ಲಾ ವೇಷ ಬದಲಾಯಿಸಿಕೊಂಡು ಬಂದು ರಾಯರ ದರುಶನ ಮಾಡಿ ಹೋಗುತ್ತಾರಂತೆ. ಸಾಮಾನ್ಯ ಕೂಲಿಯಾಗಿದ್ದವನನ್ನು ಇಂದು ದೊಡ್ಡ ಸ್ಟಾರ್ ನಟನಾಗಿ ಮಾಡಿದವರು ಶ್ರೀ ರಾಘವೇಂದ್ರಸ್ವಾಮಿಗಳು.
ಕೊನೆಗೆ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ಅಮೋಘವಾಗಿ ನಟಿಸಿ ಪಾತ್ರಕ್ಕೆ ಜೀವ ತುಂಬಿದರು ಅವರ ಅದೃಷ್ಟವೇ ಸರಿ.ರಾಯರು ನಂಬಿದ ಭಕ್ತರಿಗೆ ಉತ್ತುಂಗ ಮಟ್ಟಕ್ಕೆ ಕರೆದೊಯ್ಯುತ್ತಾರೆ ಎಂಬುದು ಎಷ್ಟು ಸತ್ಯ. ನಮ್ಮ ರಾಯರು ಮಹಾ ಕರುಣಾಸಾಗರರು ಎಲ್ಲಾ ಜಾತಿಯವರಿಗೂ ಯಾವ ಬೇಧವಿಲ್ಲದೆ ಅನುಗ್ರಹ ಮಾಡುವರು ಎಂಬುದಕ್ಕೆ ರಜನಿಯವರೆ ಸಾಕ್ಷಿ .
ಇಷ್ಟೇ ಅಲ್ಲ.. ರಜನಿಯವರು, ರಾಯರ ಜನ್ಮಸ್ಥಳ ಭುವನಾಗಿರಿಯಲ್ಲಿ ರಾಯರ ಮನೆಯನ್ನು ಪುನರ್ನಿರ್ಮಾಣ ಮಾಡಿದ್ದಾರೆ ಹಾಗೂ ಅಲ್ಲಿ ರಾಯರ ಬೃಂದಾವನವು ಇದೆ ಇದೆಲ್ಲ ಉಸ್ತುವಾರಿ ರಜನಿಯವರದ್ದೆ .ಅವರ ಭಕ್ತಿ ರಾಯರ ಮೇಲೆ ಎಷ್ಟಿದೆ ಎಂದು ಇದರಲ್ಲೇ ಗೊತ್ತಾಗುತ್ತದೆ.
ಎಲ್ಲಾ ಸಧ್ಭಕ್ತರಿಗೂ ರಾಯರ ಅನುಗ್ರಹವಾಗಲಿ ಭಕ್ತಿಯಿಂದ ನಂಬಿಕೆ ಇಡಿ ಗುರುರಾಯರು ಎಂದಿಗೂ ಕೈ ಬಿಡರು ರಾಯರಿಗೆ ಗೊತ್ತು ಯಾವಾಗ ಏನು ಮಾಡಬೇಕು ಎಂದು ನಮ್ಮ ಪೂರ್ವ ಜನ್ಮದ ಕರ್ಮದ ಫಲ, ಕಷ್ಟಗಳು ಅದೆಲ್ಲವನ್ನೂ ಹೋಗಿಸಿ ಒಳ್ಳೆಯ ದಿನಗಳನ್ನು ರಾಯರು ಕೊಡುವರು "ಚಿಂತಿಸದಿರು ಮನವೇ ಗುರು ರಾಯರಿರಲು...".🙏🙏🙏🙏🙏