🏹 ಕೃಷ್ಣ ಚೇತನ ಲೋಕ 🌎 @krishnachetanaloka1 Channel on Telegram

🏹 ಕೃಷ್ಣ ಚೇತನ ಲೋಕ 🌎

@krishnachetanaloka1


ನನಗೆ ಇಷ್ಟ‌ವಾದ ವಿಷಯಗಳೆಲ್ಲವನ್ನೂ ಇಲ್ಲಿ ಪೋಸ್ಟ್ ಮಾಡ್ತೀನಿ ! 😊

🏹 ಕೃಷ್ಣ ಚೇತನ ಲೋಕ 🌎 (Kannada)

🏹 ಕೃಷ್ಣ ಚೇತನ ಲೋಕ 🌎 ಟೆಲಿಗ್ರಾಮ್ ಚಾನಲ್ ಬಗ್ಗೆ ಸ್ವಾಗತಿಸುತ್ತೇವೆ! ಈ ಚಾನಲ್ ನಿಮ್ಮನ್ನು ಅನುವರ್ತಿಸುವವರು 'ಕೃಷ್ಣ ಚೇತನ ಲೋಕ' ಎಂದು ಗೌರವಿಸುವ ಪ್ರೇಮೀಗಳ ಒಳನೋಟದಲ್ಲಿ ಬಿಡಿಸಿದೆ. ಅವರು ತಮ್ಮ ಇಷ್ಟವಾದ ವಿಷಯಗಳನ್ನು ಈ ಚಾನಲ್ ಮೂಲಕ ಹಂಚಿಕೊಳ್ಳುವುದಕ್ಕಾಗಿ ಈ ಸ್ಥಳವನ್ನು ಬಳಸುತ್ತಾರೆ. ಉನ್ನತ ಗುಣಮಟ್ಟದ ವಿಷಯಗಳನ್ನು ಹುಡುಕುತ್ತಿರುವವರಿಗೆ ಈ ಚಾನಲ್ ಅತ್ಯಂತ ಸೂಕ್ತವಾಗಿದೆ. ನಿಮ್ಮ ಕುಶಲಕ್ಕೆ ನಿಮಗೆ ಇಷ್ಟವಾದ ವಿಷಯಗಳನ್ನು ಹುಡುಕುವ ಸುಲಭ ಮಾರ್ಗವಾಗಿ ಉಪಯೋಗಿಸುವುದಕ್ಕೆ ಈ ಚಾನಲ್ ಅತ್ಯಂತ ಉಪಯುಕ್ತವಾಗಿದೆ. ನೀವು ಮುಂದುವರಿಯಬೇಕೆಂದು ಆಶಿಸುವ ವಿಷಯವನ್ನು ಹುಡುಕುವಾಗ, 'ಕೃಷ್ಣ ಚೇತನ ಲೋಕ' ಚಾನಲ್ ನಿಮಗೆ ಉತ್ತಮ ಸಹಾಯಕವಾಗಿರುವುದನ್ನು ಗಮನಿಸಬಹುದು. ಆದ್ದರಿಂದ, ಆತ್ಮೀಯ ವಾತಾವರಣದಲ್ಲಿ ಇಷ್ಟು ಚಿಕ್ಕ ವಿಷಯಗಳನ್ನು ಎಲ್ಲರೂ ಆವಶ್ಯಕವಾಗಿ ಅನುಭವಿಸುತ್ತಾರೆ. ಕೃಷ್ಣ ಚೇತನ ಲೋಕ ಟೆಲಿಗ್ರಾಮ್ ಚಾನಲ್ ಅನೇಕರಿಗೆ ವಿಶೇಷ ಆಸಕ್ತಿಯನ್ನು ಉದಿಸಿಸಿದೆ ಮತ್ತು ನಲಿತವಾಗಿ ಬೆಳಕಿಗೆ ತಂದಿದೆ.

🏹 ಕೃಷ್ಣ ಚೇತನ ಲೋಕ 🌎

08 Feb, 17:05


ದೆಹಲಿಯ ವಿಜಯದೊಂದಿಗೆ NDA ದೇಶದ ಒಟ್ಟು 21 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರ ಹಿಡಿದಿದೆ. ಇದು ಕಮ್ಮಿ ಸಾಧನೆಯಲ್ಲ.

ಆದರೂ ಎಷ್ಟೋ ಜನ ಬಿಜೆಪಿ ಬೆಂಬಲಿಗರೇ ಕಾಂಗ್ರೆಸ್ಸಿಗರೂ ಮಾಡದಷ್ಟು ಟ್ರೋಲ್ ಮಾಡುತ್ತಾರೆ. ಒಂದು ಕಡೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸೋತರೂ "ಮೋದಿಯಿಂದಲೇ ಸೋತಿದ್ದು, ನಿರ್ಮಲಾನ ಇಳಿಸದಿದ್ದೇ ಕಾರಣ" ಅಂತ ಶುರು ಹಚ್ಚಿಕೊಂಡಿದ್ದು ನಾನೇ ನೋಡಿದ್ದೇನೆ.

ಹೋದ ವರ್ಷ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಬಂದಿದ್ದಕ್ಕೆ ಮೋದಿ ಕಾರಣ, ನಿರ್ಮಲಾ ಕಾರಣ ಅಂತ ದಿನಕ್ಕೆ ಒಂದು ಪೋಸ್ಟ್ ಆದರೂ ಹಾಕಿ ಟ್ರೋಲ್ ಮಾಡಿದವರನ್ನು ನೋಡಿ ಹತಾಶಳಾಗಿದ್ದೆ. ಬೇರೆ ಪಕ್ಷದವರಾಗಿದ್ದಿದ್ದರೆ ಬೇಸರವಾಗುತ್ತಿರಲಿಲ್ಲ. ಸೋ-ಕಾಲ್ಡ್ ಬಿಜೆಪಿ ಬೆಂಬಲಿಗರೇ ಯದ್ವಾತದ್ವಾ ಟ್ರೋಲ್ ಮಾಡಿದರು. ಆಕೆಯನ್ನು ಇಷ್ಟು ವರ್ಷ ಮುಂದುವರೆಸಿದ್ದಾರೆ ಅಂದರೆ ಖಂಡಿತಾ ಏನೋ ಲೆಕ್ಕಾಚಾರ ಇರಬೇಕಲ್ವಾ? ನಮ್ಮ ನಾಯಕರ ನಡೆಯ ಮೇಲೆ ನಮಗೆ ಕಿಂಚಿತ್ತಾದರೂ ನಂಬಿಕೆ ಇರಬೇಕು ಅಲ್ವಾ!

ಸಧ್ಯಕ್ಕೆ ಇರುವ ಪರಿಸ್ಥಿತಿಯಲ್ಲಿ ಹ್ಯಾಟ್ರಿಕ್ ಬಾರಿಸುವುದು ಸುಲಭವಿರಲಿಲ್ಲ. ದಶದಿಕ್ಕುಗಳಿಂದ ಒಂದೊಂದು ಪಿತೂರಿ ನಡೆಯಿತಾ! ಆದರೆ ಭಾರತದ ಯಾವುದೋ ಶಕ್ತಿ ಕೈಬಿಡಲಿಲ್ಲ. ಯಾಕೆಂದರೆ ಆ ಶಕ್ತಿಗೆ ಗೊತ್ತಿತ್ತು. ಮೋದಿ ಹಿಂದುಪರ ಏನೇನು ಕೆಲಸ ಮಾಡಿದ್ದಾರೆ ಅಂತ. ಮೋದಿ ಬಂದಮೇಲೆ ಏನೇನಾಗಿವೆ ಅಂತ ನಾನು ಗಮನಿಸುತ್ತಾ ಬಂದಿದ್ದೇನೆ. ಅವರು ಮಾಡಿರುವ / ಮಾಡುತ್ತಿರುವ ದೈತ್ಯಾಕಾರದ ಕೆಲಸಗಳ ಮುಂದೆ ಮಾಡದೇ ಉಳಿದಿರುವ ಕೆಲಸಗಳು ನನಗೆ ನಗಣ್ಯ. ಆತನಿಗೆ ಹತ್ತು ಕೈಗಳಿಲ್ಲ.

ಸಬ್ಕಾ ಸಾಥ್ ಸಬ್ಕಾ ವಿಕಾಸ್ ಅಂದಿದ್ದನ್ನು ಪಾಸಿಟಿವ್ ಆಗಿ ತಗೊಳ್ಳದೆ, ಯೋಚಿಸುವ ಗೋಜಿಗೂ ಹೋಗದೆ, ಆತನಿಗೆ ನೋಬಲ್ ಹುಚ್ವಿದೆ ಅಂತ ಟ್ರೋಲ್ ಮಾಡುವವರನ್ನು ನೋಡಿ ನಕ್ಕಿದ್ದೇನೆ, ಕನಿಕರ ಪಟ್ಟಿದ್ದೇನೆ. ಪಕ್ಷದ ಬೆಂಬಲಿಗರನ್ನು ಎದುರು ಹಾಕಿಕೊಂಡು, ಅಧಿಕಾರ ಕಳೆದುಕೊಂಡು, ಆ ತಗಡು ನೋಬಲ್ ತಗೊಂಡು ಉಪ್ಪಿನಕಾಯಿ ಹಾಕಿಕೊಂಡು ತಿನ್ನೊಕಾಗುತ್ತಾ? ಅಷ್ಟು ದಡ್ಡರಾ ಮೋದಿ?

ಅವರು ಬರುವ ಎಷ್ಟೋ ವರ್ಷಗಳ ಮೊದಲಿಂದಲೂ ಇಲ್ಲಿ ಬೇರೆ ಧರ್ಮದವರು ಅಧಿಕೃತವಾಗಿ ಬೇರೂರಿದ್ದಾರೆ. ಅವರನ್ನು ಒದ್ದೋಡಿಸಲಾಗುತ್ತಾ? ಬೆದರಿಕೆ ಹಾಕಲಾಗುತ್ತಾ? ಹಾಗೆ ಮಾಡಿದರೆ ಮುಂದಿನ ಪರಿಣಾಮ ಏನಾಗಬಹುದು ಅಂತ ನಮ್ಮಂಥ ಮೊಡ್ಡು ತಲೆಗಳಿಗೆ ಹೊಳೆಯದಿರಬಹುದು. ಮೋದಿಯ ತಲೆಗೆ ಹೊಳೆಯದಿರೋಕೆ ಅವರೇನು ಪಪ್ಪೂನಾ? ಬೇರೆ ದೇಶಗಳಲ್ಲೂ ನಮ್ಮವರಿದ್ದಾರೆ. ಅವರ ಗತಿ ಏನಾಗಬಹುದು ಅಂತ ಯೋಚಿಸಲೇಬೇಕಾಗುತ್ತಲ್ವಾ? ಸಬ್ ಕಾ ಸಾಥ್ ಅಂದರೇ ಸಾಕು. ಒಂದು ಗಟ್ಟಿ ಮೆಸೇಜ್ ಅದು - "ನೀವೇನೂ ಸ್ಪೆಷಲ್ ಅಲ್ಲ, ನಿಮ್ಮ ತುಷ್ಟೀಕರಣ ಮಾಡುವುದಿಲ್ಲ" ಅಂತ. ಹಾಗೆ ಭಯದ ವಾತಾವರಣ ಸೃಷ್ಟಿಸಲೂ ಬಾರದು. ನಾಳೆ ಯೋಗಿ ಬಂದರೂ ಹಾಗೆ ಮಾಡಲಾರರು. ಮಾಡಬಾರದು ಸಹ.

ಅಕ್ರಮ ವಲಸೆಗಾರರನ್ನು ಒದ್ದೋಡಿಸುತ್ತಿಲ್ಲ ಅಂತಾರೆ. ಇಲ್ಲಿರುವವರು ಕೋಟ್ಯಂತರ. ಸರಿಯಾಗಿ ಗ್ರೌಂಡ್ವರ್ಕ್ ಮಾಡಿಯೇ ತಾನೇ ಇವರನ್ನು ಆಚೆ ತಳ್ಳಲಾಗುವುದು? ಇವರೇನೂ ವೋಟ್ ಹಾಕಲ್ಲ ಅಂತ ಅವರಿಗೆ ಯಾವತ್ತೋ ಗೊತ್ತು. ಸ್ವಲ್ಪ ಸಮಯ ಬೇಕಲ್ವಾ?

ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಯಾಕೆ ಬಜೆಟ್ಟಲ್ಲಿ ಒಂದಷ್ಟು ಇಡುತ್ತಾರೆ ಅನ್ನುವುದಕ್ಕೂ ಲಾಜಿಕ್ ಇದೆ. ಅದಕ್ಕೂ ವ್ಯಾವಹಾರಿಕ ಲೆಕ್ಕಾಚಾರಗಳಿರ್ತವೆ. ಅವರಿಗೆ ಬೆಣ್ಣೆ ಹಚ್ಚೋಕೆ, ಭಯಕ್ಕೆ ಅಂತ ಕೆಲವರು ತಿಳಿದಿದ್ದಾರೆ. ಅರೇ, ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದವರಿಗೆ ಭಯವಾ!! ಪಾಕಿಸ್ತಾನವನ್ನು ಯುದ್ಧವಿಲ್ಲದೇ ದಿವಾಳಿ ಮಾಡಲಿಲ್ಲವಾ?

"ಮೋದಿ ಬಿಜೆಪಿನ ಸೋಲಿಸೇ ಕೆಳಗಿಳಿಯೋದು" ಅಂತ ಒಂದು ಕಡೆ ಕಮೆಂಟ್ ನೋಡಿದೆ. "ಈ ಜನಗಳಿಗೆ ಎಷ್ಟು ಕೆಲಸ ಮಾಡಿದರೂ ತೃಪ್ತಿ ಇಲ್ಲವಲ್ಲ" ಅನ್ನಿಸಿತು.

ಮೋದೀಜಿಯಿಂದ ಒಂದು ಪಾಠ ಕಲಿತಿದ್ದೇನೆ. ಟೀಕಿಸೋರಿಗೆ ಕೆಲಸದಿಂದಲೇ ಉತ್ತರಿಸಬೇಕು.

ನನ್ನನ್ನು "ಅಂಧಭಕ್ತೆ" ಅಂದರೂ ಪರವಾಗಿಲ್ಲ. 👍👍

- *Jyothi Umesh* ( ಫೇಸ್ಬುಕ್ )

*PS:* ಮೋದಿ ಮತ್ತು ಯೋಗಿ ಭಗವಂತ ವಿಷ್ಣುವಿನ ಅಂಶವಿರುವ ಆತ್ಮರು ಅವರು 😍 ಈ ಗಂಜಿನೋಣಗಳು ನಮ್ಮನ್ನು. ಅಂಧಭಕ್ತರೆಃದರೂ, ಮಂದ ಭಕ್ತರು ಎಂದರೂ ಸರಿಯೇ..‌. ನಾವು ಈ ದೈವಾಂಶರ ಹಿಃಬಾಲಕರು ಆಗಿರುವುದು ನಮ್ಮ ಪುಣ್ಯವೆ ಅಲ್ವೆನು ಅಕ್ಕ..‌ 🥰

🏹 *ಕೃಷ್ಣ ಚೇತನ* 🚩

🏹 ಕೃಷ್ಣ ಚೇತನ ಲೋಕ 🌎

08 Feb, 15:56


Document from 🏹 ಕೃಷ್ಣ ಚೇತನ 🚩

🏹 ಕೃಷ್ಣ ಚೇತನ ಲೋಕ 🌎

08 Feb, 08:33


ದೆಹಲಿಯಲ್ಲಿ EVM ಮ್ಯಾಜಿಕ್ ಮಾಡಿಲ್ವೋ ( Love ) ...?! 🤣

🏹 ಕೃಷ್ಣ ಚೇತನ ಲೋಕ 🌎

08 Feb, 06:52


Do you remember this ? 😁

🏹 ಕೃಷ್ಣ ಚೇತನ ಲೋಕ 🌎

08 Feb, 06:51


5ನಿಮಿಷದ ಈ ವಿಡಿಯೋ...

ಸ್ನೇಹದ ಬಗ್ಗೆ ಅದರಲ್ಲೂ ಬಾಲ್ಯದ ಆಟೋಪಗಳ ಬಗ್ಗೆ,
ಮರೆಯಲಾಗದ ಸಂಗತಿಗಳನ್ನು ಈ ಕಲಾವಿದರು ಹಂಚಿಕೊಂಡಿದ್ದಾರೆ 🙏.

🏹 ಕೃಷ್ಣ ಚೇತನ ಲೋಕ 🌎

08 Feb, 02:01


😛

🏹 ಕೃಷ್ಣ ಚೇತನ ಲೋಕ 🌎

08 Feb, 01:01


😂😂😂😂😂

🏹 ಕೃಷ್ಣ ಚೇತನ ಲೋಕ 🌎

08 Feb, 01:00


*Part 10 - ಬಾಲ್ಯದ ತಪ್ಪುಗಳು ಹೀಗಿದ್ದರು ನಮ್ಮ ಬಾಪು part 10 Dr. Gururaj Karajagi*

🏹 ಕೃಷ್ಣ ಚೇತನ ಲೋಕ 🌎

07 Feb, 06:09


"ಅಮೆರಿಕಾದಿಂದ ಭಾರತೀಯರನ್ನು ಅಮಾನವೀಯವಾಗಿ ಗಡಿಪಾರು ಮಾಡಿದರು ಅಂತ ಬೊಬ್ಬೆ ಹೊಡೆಯುವ ಗಾಂಡ್ ಗುಲಾಮರು, ಲದ್ದಿಜೀವಿಗಳ ಗಮನಕ್ಕೆ:"

_ಈ ಅಕ್ರಮ ವಲಸಿಗರು ಯಾರೂ ಬಡವರೂ ಅಲ್ಲ, ಮದ್ಯಮ ವರ್ಗದವರೂ ಅಲ್ಲ. ಕೆಲಸಕ್ಕೆಂದು ಹೋದವರಂತು ಅಲ್ಲವೇ ಅಲ್ಲ.

_ಇವರೆಲ್ಲರೂ ಕೋಟ್ಯಾದಿಪತಿಗಳು. ಅಮೆರಿಕಾದಲ್ಲಿ ವಾಸ ಮಾಡಿದ್ರೆ ತಮ್ಮ ಪ್ರತಿಷ್ಠೆ ಹೆಚ್ಚುತ್ತದೆ ಎಂಬ ಉದ್ದೇಶದಿಂದ ಅಕ್ರಮವಾಗಿ ಕಳ್ಳ ದಾರಿಯಲ್ಲಿ ಅಮೆರಿಕಾಗೆ ಪ್ರವೇಶಿಸಿದವರು.

_ಎರಡು ಕೋಟಿ ಕೊಟ್ಟರೆ ಕೆನಡಾ ಮುಖಾಂತರ ಅಕ್ರಮವಾಗಿ ಅಮೇರಿಕಾಗೆ ಪ್ರವೇಶಿಸಲು ಇರುವ ಅತ್ಯಂತ ಸುರಕ್ಷಿತ ಮತ್ತು ಸುಲಭದ ದಾರಿ.

_ಒಂದೂವರೆ ಕೋಟಿಗೆ ಮೆಕ್ಸಿಕೋ ಮುಖಾಂತರ ಪ್ರವೇಶ‌. ಇದು ‌ಸ್ವಲ್ಪ ಕಷ್ಟದ ದಾರಿ. ಆದರೂ ಹೆಚ್ಚಿನವರು ಈ ದಾರಿಯಲ್ಲಿ ಪ್ರವೇಶಿಸುತ್ತಾರೆ.

_ಒಂದು ಕೋಟಿ ಕೊಟ್ಟರೆ ಮೊದಲು ಆಫ಼್ರಿಕಾದ ಯಾವುದಾದರೂ ಒಂದು ದೇಶದಲ್ಲಿ ಒಂದೆರಡು ತಿಂಗಳು ತಂಗಿ ಅಲ್ಲಿಂದ ದಕ್ಷಿಣ ಅಮೆರಿಕಾದ ಕೊಲಂಬಿಯ ಮುಂತಾದ ದೇಶಗಳಿಗೆ ಹೋಗಿ ಅಲ್ಲಿಂದ ಮೆಕ್ಸಿಕೋ ಮುಖಾಂತರ ಅಮೆರಿಕಾ ಪ್ರವೇಶ. ಆದರೂ ಇದು ಅಂದುಕೊಂಡಷ್ಟು ಸುಲಭವಲ್ಲ.‌ ಕಾಡಿನಲ್ಲಿ, ಮಂಜಿನ ಮೇಲೆ ಗುಡ್ಡಗಾಡು ಪ್ರದೇಶದಲ್ಲಿ ನೂರಾರು ಕಿ.ಮಿ. ನಡೆಯಬೇಕು.

_ಇನ್ನೂ ಕೆಲ ಪ್ಯಾಕೇಜುಗಳಲ್ಲಿ ಅತ್ಯಂತ ಹೆಚ್ಚು ಅಪಾಯ ಇದ್ದು ಇಲ್ಲಿಂದ ಹೊರಟ ನಂತರ ಮಲೇಶಿಯ, ದುಬೈ, ಆಫ಼್ರಿಕಾ, ದಕ್ಷಿಣ ಅಮೆರಿಕ, ಟರ್ಕಿಗೆ ಹೋಗಿ ಅಲ್ಲಿಂದ ಯುರೋಪಿಯನ್ ದೇಶಗಳು ಹೀಗೆ ಸುತ್ತಾಟ ನಡೆಸಿ ಅಮೆರಿಕ ತಲುಪಲು ಕನಿಷ್ಠ ಒಂದು ವರ್ಷ ತಗಲುತ್ತದೆ.

ಈ ಎಲ್ಲಾ ದಾರಿಗಳಲ್ಲಿ ಜನರನ್ನು ಸಾಗಿಸಲು ಭಾರತದಲ್ಲಿ ತುಂಬಾ ಏಜೆಂಟರು ಇದ್ದಾರೆ.

ಹೀಗೆ ಕಳ್ಳದಾರಿಯಲ್ಲಿ ಸಾಗಿ ಹೋಗುವಾಗ ಮೊದಲ ಎರಡು ದಾರಿಗಳನ್ನು ಬಿಟ್ರೆ ಉಳಿದವುಗಳಲ್ಲಿ ಯಾವುದೇ ದೇಶದ ಗಡಿಯಲ್ಲಿ ಗುಂಡಿಗೆ ಬಲಿ ಅಥವಾ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಆಕ್ರಮಣ ಅಥವಾ ಆಯ ತಪ್ಪಿ ಬಿದ್ದು ಸಾವು ಸಂಭವಿಸುವ ಸಾದ್ಯತೆ ಇರುತ್ತದೆ.

ಈಗ ಒಮ್ಮೆ ಆಲೋಚನೆ ಮಾಡಿ. ಕೋಟಿ ಕೋಟಿ ಕೊಟ್ಟು ಕೇವಲ ಪ್ರತಿಷ್ಠೆಯ ಸಲುವಾಗಿ ಭಾರತೀಯ ವಿದೇಶಾಂಗ ಅಥವಾ ರಾಯಬಾರಿ ಕಚೇರಿಗೂ ಗೊತ್ತಿಲ್ಲದೆ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಿದವರನ್ನು ಹೊರ ದಬ್ಬಿದ್ದಲ್ಲಿ ಭಾರತಕ್ಕೆ ಏನಾದರೂ ಸಮಸ್ಯೆ ಇದೆಯಾ?

#usdeport
#IndianMigrants

🏹 ಕೃಷ್ಣ ಚೇತನ ಲೋಕ 🌎

07 Feb, 04:37


*Part 9 - ಬಾಲ್ಯದ ಘಟನೆಗಳು ಹೀಗಿದ್ದರು ನಮ್ಮ ಬಾಪು part 9 Dr. Gururaj Karajagi*

🏹 ಕೃಷ್ಣ ಚೇತನ ಲೋಕ 🌎

07 Feb, 03:25


🤣🤣🤣🤣🤣

🏹 ಕೃಷ್ಣ ಚೇತನ ಲೋಕ 🌎

07 Feb, 02:31


ದೇವತೆಗಳು ಸದಾ 30 ವಯಸ್ಸಿನ‌ವರ ?

🏹 ಕೃಷ್ಣ ಚೇತನ ಲೋಕ 🌎

06 Feb, 18:49


ಕದ್ದ ಕವಿತೆ.😍

🏹 ಕೃಷ್ಣ ಚೇತನ ಲೋಕ 🌎

06 Feb, 12:21


🤣🤣🤣🤣🤣

🏹 ಕೃಷ್ಣ ಚೇತನ ಲೋಕ 🌎

05 Feb, 12:17


🤣🤣🤣🤣🤣

🏹 ಕೃಷ್ಣ ಚೇತನ ಲೋಕ 🌎

05 Feb, 11:42


🌼 ಪ್ರವಚನಗಳು 🌼

ಕನ್ನಡದ ಕಬೀರ ಪದ್ಮಶ್ರೀ ಶ್ರೀ ಇಬ್ರಾಹಿಂ ಸುತಾರ ಅವರ ಪುಣ್ಯ ಸ್ಮರಣೆ 05/02/ 2025,
💐💐💐💐🙏🙏

1) ಲಿಂಗದ ಸ್ವರೂಪ ಎಂತದ್ದು
ಪೂಜ್ಯ ಶ್ರೀ ಇಬ್ರಾಹಿಂ ಸುತಾರ ಅವರ ಪ್ರವಚನ
🌻12:13

2) ವಿಮಲ ಮಾನಸದಿಂದೆ ಶುಭತೀರ್ಥಮುಂಟೆ
(ನಿರ್ಮಲ ಮನಸ್ಸು)
🌻44:33

3) ಕ್ಷಮೆ ಎಂದರೇನು ? ಕ್ಷಮೆ ಏಂತಹ ಸಾಧನ ಮತ್ತು ಅದನ್ನು ಹೇಗೆ ಸಾಧಿಸುವುದು
🌻48:17

4) ಪ್ರಾರಬ್ಧ ಕರ್ಮದ ನಿರ್ಣಯ
ನಮ್ಮ ಆಯಸ್ಸು ಎಷ್ಟು ?
ನಾವು ಸಂಪತ್ತನ್ನು ಎಷ್ಟು ಗಳಿಸಬೇಕು
🌻51:40

5) ಈ ಸಮಾಜದಲ್ಲಿ ಉತ್ತಮರ ಸಂಗಮಾಡು!ಶ್ರೀ ಇಬ್ರಾಹೀಮ ಸುತಾರ ಅವರ ಪ್ರವಚನ ಮಹಾಲಿಂಗಪುರ
🌻56:54

🏹 ಕೃಷ್ಣ ಚೇತನ ಲೋಕ 🌎

05 Feb, 08:39


Uma Ramaswamy ಅವರ ಪೋಸ್ಟ್.

ಸ್ನೇಹಿತರೆ,
ಸುಮಾರು ಜನ ಮನು smriti ತರಗತಿಗಳಿಗೆ ಸೇರಿಕೊಳ್ಳುವುದಕ್ಕೆ ಆಸಕ್ತಿ ತೋರಿಸಿದ್ದೀರಿ. ಹರೀಶ್ ಅವರು ಮತ್ತೆ ಆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ದಿನಾಂಕವನ್ನು ನಾನಿಲ್ಲಿ ಹೇಳಿದ್ದೀನಿ. ಮಿಕ್ಕ ವಿಷಯಗಳಿಗೆ ಆಸಕ್ತರು ಸರ್ ಅವರನ್ನು ಸಂಪರ್ಕಿಸಿ.
🌻Online claases. Feb 13 to 28 ಒಳಗೆ
10 classes with each 60 minutes.
🌻Kannada language.
ಕನ್ನಡ ತರಗತಿ.
🌻Google meet ಬಳಕೆ ಮಾಡುತ್ತೇವೆ.
🌻ಪೂರಕ ಸಾಹಿತ್ಯ

Morning and evening batches available. Min 5 should be in a batch to commence. Timing 10 to 11.10 am, 8 on to 9 pm.

🏹 ಕೃಷ್ಣ ಚೇತನ ಲೋಕ 🌎

05 Feb, 08:38


ತುಂಬಾ ಚೆನ್ನಾಗಿದೆ ! 😊
ಮೊದಲಿಗೆ ಧನ್ಯವಾದಗಳು...
ನಿಮಗೂ ಮತ್ತು ಅವರಿಗೂ... 🙏

ನಮ್ಮ ಧರ್ಮದ ಪುರಾಣಗಳು ಮತ್ತು ವೇದಗಳು ಹೇಳುವುದು ಇದನ್ನೇ ಮತ್ತು ಇದಕ್ಕೂ ಹೆಚ್ಚಿನ ಬೇರೆ ಬೇರೆ ವಿಚಾರಗಳು ಇವೆ. ಓದುವ ಅಥವಾ ಪ್ರವಚನಗಳನ್ನು ಕೇಳುವ ಶ್ರಧ್ಧೆ ನಮಗಿರಬೇಕು !

ಕೇಳಬೇಕು ಅಂತ ಅನಿಸಿದಾಗ ಖಂಡಿತಾ‌ವಾಗಿ ಕೇಳಿ, ಆ ಪ್ರವಚನಗಳನ್ನು ಸೋಷಿಯಲ್ ನೆಟ್ವರ್ಕ್‌ನಲ್ಲಿ ಶೇರ್ ಮಾಡಿಕೊಳ್ಳುತ್ತೇನೆ.

ಒಂದು ಅಂತು ಸತ್ಯ !!

ಪುರಾತನವಾದ ನಮ್ಮ ಧರ್ಮ‌ದಲ್ಲಿ ಹೇಳದ ವಿಷಯಗಳು ಇಲ್ಲ ಎಂದು ತಿಳಿದು ಬೇರೆ ಧರ್ಮದ ಜನರು ಹೊಟ್ಟೆ ಕಿಚ್ಚು ಪಡುವುದು ಆ ಕಾಲದಿಂದ ಹಿಡಿದು ಈಗಿನ ಕಾಲದತನಕ ಜನರು ಇದ್ದಾರೆ. ಇರಲಿ ಬಿಡಿ. ಆದರೆ... ನಮ್ಮ ಧರ್ಮದಲ್ಲಿ ಹುಟ್ಟಿ ನಮ್ಮವೆ ಆಚಾರ - ವಿಚಾರಗಳನ್ನು ಅವಹೇಳನ ಮಾಡುವ ** ( ಬೇಕಾದ ಕೆಟ್ಟ ಪದ / ವಾಕ್ಯ‌ವನ್ನು ಸೇರಿಸಿಕೊಂಡು ಓದಿಕೊಳ್ಳಿ ) ಇವುಗಳನ್ನು ನೋಡಿದರೆ ಕ್ಯಾಕರ್ಸಿ ಉಗಿಯಬೇಕು ಅಂತ ಅನಿಸುತ್ತದೆ ನನಗೆ ಅಷ್ಟೇ.

🏹 ಕೃಷ್ಣ ಚೇತನ 🙏

🏹 ಕೃಷ್ಣ ಚೇತನ ಲೋಕ 🌎

05 Feb, 08:37


Uma Ramaswamy ಅವರ ಬರಹ:

ಮನು ಸ್ಮೃತಿ
**

ಈ ಪುಸ್ತಕ ನಮ್ಮ ಮನೆಯಲ್ಲಿ ಇರಲಿಲ್ಲ. ನನಗೆ ಗೊತ್ತಿರೋ ಯಾರ ಬಳಿಯೂ ಇರಲಿಲ್ಲ. ಆದರೆ ಕಾಲೇಜಿಗೆ ಬಂದ ನಂತರ ಈ ಪದದ ಪರಿಚಯ ಆಯಿತು ಅನ್ನಿಸತ್ತೆ. ಇತ್ತೀಚೆಗಂತೂ ತುಂಬಾ ಅವಹೇಳನಕ್ಕೆ, ಚರ್ಚೆಗೆ ಒಳಗಾದ ಶಬ್ದ ಮನುಸ್ಮೃತಿ.
ಅದರಲ್ಲಿ ಹೆಣ್ಣುಮಕ್ಕಳನ್ನು ಕೀಳಾಗಿ, ಪಂಜರದ ಗಿಣಿಯಂತೆ ಕಾಪಾಡಬೇಕು, ಇತ್ಯಾದಿ ಎಲ್ಲ ಕೇಳಿದಾಗ, ಸ್ವತಃ ಮಹಿಳೆಯದ ನನಗೆ ಇಷ್ಟ ಆಗಲಿಲ್ಲ.
ಹಾಗೇ ಈ ಪುಸ್ತಕದಿಂದಾಗಿಯೇ ಬ್ರಾಹ್ಮಣರು ಸಮಾಜಕ್ಕೆ ಘೋರ ಅನ್ಯಾಯ ಮಾಡಿ ಅಸಮಾನತೆಯನ್ನು ಉಂಟು ಮಾಡಿದ್ದಾರೆ ಎಂದಾಗ ಮಾನವತಾವಾದಿಯಾಗಿ ಈ ಪುಸ್ತಕ ನನಗೆ ಇಷ್ಟವಾಗಿರಲಿಲ್ಲ. ಹೀಗಾಗಿ ಆ ಪುಸ್ತಕದ ಬಗ್ಗೆ ಅಂತ ಏನೂ ಆಸಕ್ತಿ ತೋರಿಸಲಿಲ್ಲ.

ನಂತರದಲ್ಲಿ ಫೇಸ್ ಬುಕ್‌ನಲ್ಲೇ ದೀಪಾ ಪಾಂಡುರಂಗಿ ಜೋಶಿ ಅವರು ಮನುಸ್ಮೃತಿಯ ಕೆಲವು ಶ್ಲೋಕಗಳು, ಅವುಗಳ ಅರ್ಥ ಸಮೇತ ಹಾಕಿದಾಗ, ಎಷ್ಟೊಂದು ಒಳ್ಳೆಯ ವಿಷಯಗಳು ಕೂಡ ಇದರಲ್ಲಿ ಇದೆ ಅನ್ನಿಸಿ, ಅವರ ಗೋಡೆಯಲ್ಲೇ ನನ್ನ ಮೆಚ್ಚುಗೆಯನ್ನು ತಿಳಿಸಿದ್ದೆ. ಆದರೆ ಈ ವಿಷಯದ ಅರಿವಿನ ಕೊರತೆ ಇನ್ನೂ ಇದ್ದೇ ಇತ್ತು. ಅಧಿಕಾರಯುತವಾಗಿ ಮಾತಾಡುವಷ್ಟು ವಸ್ತು ನನ್ನಲ್ಲಿ ಇರಲಿಲ್ಲ.

ಮನು ಸ್ಮೃತಿಯ ಬಗ್ಗೆ ಒಂದು ಸೆಶನ್ ನಡೆಸುತ್ತೇನೆ ಎಂದು ಜಿ ಬಿ. ಹರೀಶ್ ಅವರು ಹೇಳಿದಾಗ, ಮೊದಲನೆಯದಾಗಿ ಅವರ ಕ್ಲಾಸ್‌ಗೆ ನೊಂದಾಯಿಸಿಕೊಂಡು, ಸಮಾನಮನಸ್ಕ ಸ್ನೇಹಿತರಲ್ಲಿ ಕೂಡ ಈ ವಿಷಯ ಹಂಚಿಕೊಂಡೆ.

ಎಂದಿನಂತೆ ಸೆಶನ್‌ಗಳು ಸೊಗಸಾಗಿ ನಡೆಯಿತು. ಶ್ರುತಿ, ಸ್ಮೃತಿ, ಹಾಗೆ ಎಷ್ಟು ಸ್ಮೃತಿಗಳು ಇವೆ, ವರ್ಣಪದ್ಧತಿಗಳು ಹೇಗಿದ್ದವು, ಅವುಗಳ ಪಾಲನೆ ಹೇಗಿರಬೇಕು, ಗ್ರಾಮ, ರಾಜ್ಯಗಳ ವಿಂಗಡಣೆ, ಕೃಷಿ, ದೇವಸ್ಥಾನಗಳು, ಕೋಟೆಗಳನ್ನು ಹೇಗೆ ಕಟ್ಟೋದು, ರಾಜನಲ್ಲಿ ಇರಬೇಕಾದ ಹಾಗು ಇರಬಾರದ ಗುಣಲಕ್ಷಣಗಳು, ಪ್ರತಿಯೊಂದು ವರ್ಣದವರ ಕರ್ತವ್ಯ, ಗುರುಕುಲ, ಗೂಢಚಾರಿಕೆ, ತಪ್ಪಿಗೆ ಶಿಕ್ಷೆಯ ಪ್ರಮಾಣ, ದೇಶಾಚಾರ, ಕಾಲಾಚಾರ ಮೊದಲಾದ ಸುಮಾರು ವಿಷಯಗಳನ್ನು ತಿಳಿಸಿಕೊಟ್ಟರು. ನಾನು ಇಲ್ಲಿ .೦೦೦೧% ಕೂಡ ಹೇಳಿಲ್ಲ. ಅಷ್ಟು ಉತ್ತಮವಾದ ವಿಷಯಗಳು ಇದೆ.
ಇನ್ನು ಚೊಕ್ಕವಾಗಿ ಹೇಳಬೇಕೆಂದರೆ ಈ ಸ್ಮೃತಿಯಲ್ಲಿ ಧರ್ಮ, ರಾಜಶಾಸ್ತ್ರ(ಪಾಲಿಟಿಕ್ಸ್), ಅರ್ಥಶಾಸ್ತ್ರ, ವರ್ಣ, ಆಶ್ರಮಗಳು (ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ), ವ್ಯಭಿಚಾರ ನಿಷಿದ್ಧ ಶಾಸ್ತ್ರಗಳನ್ನು ಒಳಗೊಂಡಿದೆ ಎನ್ನಬಹುದು. ಎಷ್ಟೋ ವಿಷಯಗಳು ಈ ಕಾಲಕ್ಕೂ ಸಲ್ಲುವಂತ ಮಾತುಗಳಿವೆ. ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ ಇದು ಎಂದು ನನ್ನ ಭಾವನೆ.

ಈ ತರಗತಿಯಲ್ಲಿ ಹರೀಶ್ ಅವರು ಹೇಳಿದ ಎಷ್ಟೋ ಮಾತುಗಳು ತುಂಬಾ ಇಷ್ಟವಾಯಿತು. ಅದರಲ್ಲಿ ಒಂದು ಹಳೆಯದೆಲ್ಲ ಶ್ರೇಷ್ಠವಲ್ಲ, ಇಂದಿನದೆಲ್ಲ ಕನಿಷ್ಠವಲ್ಲ ಎಂಬ ಮಾತು ಸಕಾಲಿಕ ಅನ್ನಿಸಿತು. ಮನುಸ್ಮೃತಿಯಲ್ಲಿರುವ ಎಲ್ಲ ವಿಷಯವನ್ನು ನಾವು ತೆಗೆದುಕೊಳ್ಳದಿದ್ದರೂ, ಇಂದಿಗೂ ಉಪಯುಕ್ತವಾಗುವುದನ್ನು ಅನುಸರಿಸುವುದರಲ್ಲಿ ಅಥವಾ ಅದರ ಬಗ್ಗೆ ಮೆಚ್ಚುಗೆ ಸೂಚಿಸುವುದರಲ್ಲೂ ಜನ ಯಾಕೆ ಹಿಂಜರಿಯುತ್ತಾರೋ ತಿಳಿಯದು. ನಾವು ನಮ್ಮ ಎಲ್ಲ ಪುರಾಣ ಪುಣ್ಯಕಥೆಗಳನ್ನು ಆಯ್ದ ಕೆಲವು ಪಾಶ್ಚಾತ್ಯರ ದೃಷ್ಟಿಕೋನದಿಂದ ಓದುವುದನ್ನು ಬಿಟ್ಟಾಗ ಪರಿಸ್ಥಿತಿ ಸುಧಾರಿಸಬಹುದು ಎನ್ನಿಸುತ್ತದೆ.

ನಾನು ಎಷ್ಟೋ ಬಾರಿ ಹೇಳಿದ್ದೇನೆ, ಈಗಿನ ಕಾಲದಲ್ಲಿ ೪ ವರ್ಣಗಳು ಒಬ್ಬರೇ ವ್ಯಕ್ತಿಯಲ್ಲಿ ಅಂದರೆ ನನ್ನಲ್ಲೂ, ಪ್ರತಿಯೊಬ್ಬರಲ್ಲೂ ಇದೆ. ಹೇಗೆಂದರೆ,

ದೇವರ ಪೂಜೆ ಮಾಡುವಾಗ ನಾನು ಬ್ರಾಹ್ಮಣಳು.
ಧರ್ಮ ಅಥವಾ ದೇಶದ ವಿಷಯ ಬಂದಾಗ ಯಾವ ರೀತಿಯ ಹೋರಾಟಕ್ಕೂ ಹಿಂದೆಗೆಯುವುದಿಲ್ಲ, ಆಗ ನಾನು ಕ್ಷತ್ರಿಯಳು, ನಾನೇ ದುಡಿದ ದುಡ್ಡನ್ನು ಹೇಗೆ ಉಪಯೋಗಿಸಬೇಕು ಎಂದು ಲೆಕ್ಕಾಚಾರ ಹಾಕಿದಾಗ, ಗೋವಿನ ರಕ್ಷಣೆಯಲ್ಲಿ ತೊಡಗಿದಾಗ, ವ್ಯಾಪಾರ ಮಾಡುವಾಗ ನಾನು ವೈಶ್ಯಳು, ನನ್ನ ದಿನ ನಿತ್ಯದ ಮನೆ ಕೆಲಸ, ಸ್ವಚ್ಛತೆ, ಅಡುಗೆ, ಆಫೀಸಿನ ಕೆಲಸದಲ್ಲಿ ತೊಡಗಿಸಿಕೊಂಡಾಗ ನಾನು ಶೂದ್ರಳು.

ನಮ್ಮಲ್ಲೇ ಪ್ರತಿಯೊಂದು ವರ್ಣವೂ ಇರುವ ಕಾಲದಲ್ಲಿ ಬದುಕುತ್ತಿದ್ದೇವೆ ನಾವು. ಆ ಕಾರಣದಿಂದ ನಮಗೆ ಯಾವುದು ಒಳ್ಳೆಯದೋ ಅದನ್ನು ತೆಗೆದುಕೊಳ್ಳುವುದರಲ್ಲಿ ತಪ್ಪೇನಿದೆ?

ಅಲ್ಲದೆ ಯಾವುದೇ ಪುಸ್ತಕದಲ್ಲಿ ಬರೆದಂತೆ ಬದುಕಬೇಕೆಂಬ ಕಟ್ಟಳೆ ಹೇರುವುದಕ್ಕೆ ನಮ್ಮದು ರಿಲಿಜನ್ ಅಲ್ಲ.

ನಮ್ಮ ಧರ್ಮ ಕಾಲದಿಂದ ಕಾಲಕ್ಕೆ evolve ಆಗಿದೆ. ಅದರ ಬಗ್ಗೆ ಜಾಣ ಕುರುಡು ಇರುವವರನ್ನು ನಿರ್ಲಕ್ಷಿಸುವುದೇ ಒಳಿತೇನೋ..

ಅಂದಹಾಗೆ ಮನು ಸ್ಮೃತಿಯ ಪ್ರಕಾರ -

ಬ್ರಾಹ್ಮಣರಿಗೆ ಸಂಪತ್ತು ವ್ಯರ್ಜ್ಯ
ಕ್ಷತ್ರಿಯರಿಗೆ ಹೇಡಿತನ ನಿಷಿದ್ಧ,
ವೈಶ್ಯರಿಗೆ ಬಡತನ ಕೂಡದು
ಶೂದ್ರರಿಗೆ ಸೋಮಾರಿತನ ಸಲ್ಲದು.

ಹೀಗೆ ಯಾರಾದರೂ ಬದುಕುವುದಕ್ಕೆ ಆಗತ್ತಾ...

ಖಂಡಿತ ಇಲ್ಲ. ಅಲ್ಲದೆ ಮನು "ಹೀಗೇ ಬದುಕಿ" ಅನ್ನುವುದಿಲ್ಲ. ಇದು ಮಾನವ ಧರ್ಮ, ಹೀಗೆ ಬದುಕಿದರೆ ಒಳ್ಳೆಯದು ಅಂತ ಅಷ್ಟೇ ಹೇಳಿರುವುದು.
ತರಗತಿಗಳಲ್ಲಿ ಸಮಯ ಹೋಗುತ್ತಿದ್ದದ್ದೇ ತಿಳಿಯುತ್ತಿರಲಿಲ್ಲ. ಹರೀಶ್ ಅವರು ಬರಿ ಮನುಸ್ಮೃತಿಯ ಶ್ಲೋಕಗಳು, ಅವುಗಳ ಅರ್ಥ ಮಾತ್ರ ತಿಳಿಸದೆ, ಪ್ರಸಕ್ತ ಜೀವನ ಶೈಲಿ, ರಾಜಕಾರಣ ಮುಂತಾದ ಎಲ್ಲ ವಿಷಯಗಳನ್ನು ಹೋಲಿಕೆ ಮಾಡುತ್ತ ,ವಿಷಯಗಳನ್ನು ಮಂಡಿಸಿ, ನಮ್ಮನ್ನು ಚಿಂತನೆಗೆ ಹಚ್ಚುತ್ತಿದ್ದರು. ಎಂದಿನಂತೆ ಈ ತರಗತಿಯ ಕೊನೆಯಲ್ಲಿ, ಮುಂದಿನ ದಿನಗಳಲ್ಲಿ ಯಾವ ಯಾವ ವಿಷಯಗಳ ಬಗ್ಗೆ ನಮಗೆ ಆಸಕ್ತಿ ಇದೆ ಎಂದು ಕೇಳಿದಾಗ, ನಾವು ಸುಮಾರು ಜನ ಸುಮಾರು ವಿಷಯಗಳನ್ನು ರಿಕ್ವೆಸ್ಟ್ ಮಾಡಿದ್ದೇವೆ. ಅವರು ಮುಂದಿನ ತರಗತಿಗಳನ್ನು ಘೋಷಿಸಿದಾಗ, ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

🏹 ಕೃಷ್ಣ ಚೇತನ ಲೋಕ 🌎

05 Feb, 03:03


ಎಚ್ಚರಿಕೆ: ಈಗ ಸಿಸಿಟಿವಿ ಕ್ಯಾಮೆರಾಗಳು ಸಹ ಉಪಯುಕ್ತವಾಗುವುದಿಲ್ಲ.

🏹 ಕೃಷ್ಣ ಚೇತನ ಲೋಕ 🌎

05 Feb, 02:01


ದೇವವ್ರತನು ಭೀಷಣವಾದ ಪ್ರತಿಜ್ಞೆಯಿಂದ ಭೀಷ್ಮ‌ನಾಗಿ ಪ್ರಸಿದ್ಧ‌ನಾದನು.

🏹 ಕೃಷ್ಣ ಚೇತನ ಲೋಕ 🌎

05 Feb, 01:59


*Part 7 - ಗಾಂಧಿಜೀ ಅವರ ಬಾಲ್ಯ ಹೀಗಿದ್ದರು ನಮ್ಮ ಬಾಪು part 7 Dr. Gururaj Karajagi*

🏹 ಕೃಷ್ಣ ಚೇತನ ಲೋಕ 🌎

31 Jan, 04:07


ದಯವಿಟ್ಟು ಶೇರ್ ಮಾಡಿ !

🏹 ಕೃಷ್ಣ ಚೇತನ ಲೋಕ 🌎

31 Jan, 03:21


Title: N/A
Released On: N/A
Genre: N/A
Rating: N/A (N/A)
Language: Hindi
Season: Season 1

🏹 ಕೃಷ್ಣ ಚೇತನ ಲೋಕ 🌎

31 Jan, 01:54


ನಮಗೆ ಚಂದ ಇರುವುದು ಮುಖ್ಯ

🏹 ಕೃಷ್ಣ ಚೇತನ ಲೋಕ 🌎

31 Jan, 01:51


*Part 2 - ಹೀಗಿದ್ದರು ನಮ್ಮ ಬಾಪು part 2 Mahatma Gandhi Dr. Gururaj Karajagi*

🏹 ಕೃಷ್ಣ ಚೇತನ ಲೋಕ 🌎

30 Jan, 14:02


https://t.me/kcmwindia1/3554

🏹 ಕೃಷ್ಣ ಚೇತನ ಲೋಕ 🌎

30 Jan, 04:33


https://t.me/kcmwindia1/3551

🏹 ಕೃಷ್ಣ ಚೇತನ ಲೋಕ 🌎

30 Jan, 02:05


ಚತುರ್ಮುಖ‌ನ ಲೋಕ ಮೋಕ್ಷ‌ದಾಯಕ.

🏹 ಕೃಷ್ಣ ಚೇತನ ಲೋಕ 🌎

28 Jan, 01:30


https://t.me/kcmwindia1/3518

🏹 ಕೃಷ್ಣ ಚೇತನ ಲೋಕ 🌎

28 Jan, 01:22


*Part 30 - ಆನುಭಾವಿಕ್ ಚಿಂತನೆಗಳು part 2 ಬಸವಣ್ಣವರ ವಚನಗಳು - 21 Dr. Gururaj Karajagi*

🏹 ಕೃಷ್ಣ ಚೇತನ ಲೋಕ 🌎

28 Jan, 01:13


*ಯಾವಾಗಲೂ ಹಿಂದೂ ಧರ್ಮಕ್ಕೆ ಬಯುತ್ತಾ ದೇವರ ಮೇಲೆ ನಂಬಿಕೆ ಇಲ್ಲ ಅಂತ ಹೇಳುತ್ತಿದ್ದ ದೇಶಕ್ಕೆ ಬಯ್ಯುತ್ತಿದ್ದ ಕಳ್ಳ ಪ್ರಕಾಶ್ ರೈ ಅವರು ಕುಂಭಮೇಳಕ್ಕೆ ಹೋಗಿದ್ದಾನೆ ನೋಡಿ.*

🏹 ಕೃಷ್ಣ ಚೇತನ ಲೋಕ 🌎

27 Jan, 15:14


ಕಾಟನ್ ಸೀರೆ, ಸದಾ ಹೆಗಲು ಮುಚ್ಚುವ ಸೆರಗು, ಹಣೆಯಲ್ಲಿ ಕುಂಕುಮ, ಮುಖದಲ್ಲೊಂದು ಮಾಸದ ನಗು. ಸದಾಸೀದ ಹೆಣ್ಣು ಮಗಳು. ಹಮ್ಮು, ಬಿಮ್ಮು‌ ಬಿಡಿ, ಗಟ್ಟಿಯಾಗಿ ‌ಮಾತನಾಡಿದ್ದು ಕೇಳದವರಿಲ್ಲ. ಸಣ್ಣ ಮನೆಯೊಂದರಲ್ಲಿ ಸರಳ ಜೀವನ. ಕೃಷ್ಣನ ಪರಮಭಕ್ತೆ.
ಕೈಯಲ್ಲಿ ಸ್ಟೆತಾಸ್ಕೋಪ್ ಹಿಡಿದು ಆಕೆ ನಡೆದು ಬರುತ್ತಿದ್ದರೆ,‌ ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳ ಕಣ್ಣಲ್ಲಿ ಭರವಸೆಯ ಬೆಳಕು. ಕ್ಯಾನ್ಸರ್ ‌ರೋಗಿಗಳ ಪಾಲಿನ ಆಶಾಕಿರಣವೇ ಡಾ. ವಿಜಯಲಕ್ಷ್ಮಿ ‌ದೇಶಮಾನೆ.
ಕಲಬುರಗಿ ಮೂಲದ ಹೆಸರಾಂತ ಕ್ಯಾನ್ಸರ್‌ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿದೆ.
ತರಕಾರಿ ಮಾರಾಟ ಮಾಡುವ ಕುಟುಂಬದಿಂದ ಕ್ಯಾನ್ಸರ್‌ ಸರ್ಜನ್‌ , ಪದ್ಮಶ್ರೀ ಪುರಸ್ಕಾರವರೆಗೆ ವಿಜಯಲಕ್ಷ್ಮೀ ಸಾಗಿದ ದಾರಿಯುದ್ದಕ್ಕೂ ಬರೀ‌ ಕಷ್ಟಗ ಸರಮಾಲೆ ಹೊತ್ತೆ ಸಾಧಿಸಿದವರು.
ಕ್ಯಾನ್ಸರ್‌ ರೋಗಿಗಳ ಪಾಲಿನ ಧನ್ವಂತರಿ ಎಂದೇ ಖ್ಯಾತಿ ಗಳಿಸಿದ್ದರು. ಅದಕ್ಕೆ ಕಾರಣ ಅವರ ಶ್ರದ್ಧೆ, ಶ್ರಮ, ತ್ಯಾಗ, ಮಾನವೀಯ ಕಳಕಳಿ, ವೈದ್ಯ ವೃತ್ತಿಯನ್ನೇ ಉಸಿರಾಗಿಸಿಕೊಂಡು ಬದುಕಿದ ಅಪರೂಪದ ವೈದ್ಯೆ.
ಎಂ ಬಿ ಬಿ ಎಸ್, ಎಂ ಎಸ್ (ಜನರಲ್ ಸರ್ಜರಿ) ಎಫ.ಎ. ಐ. ಎಸ್‌. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್‌ ಎನ್ನಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದ ಅವರು ‌ಕಿದ್ವಾಯಿ‌‌ ನಿರ್ದೇಶಕಿಯಾಗಿಯೂ ಕೆಲಸ ನಿರ್ವಹಿಸಿದ್ದರು.
ಕಲಬುರಗಿಯ ಕೊಳಗೇರಿ ಪ್ರದೇಶದಲ್ಲಿ ವಾಸವಾಗಿದ್ದರು ವಿಜಯಲಕ್ಷ್ಮಿ ‌ಹೆತ್ತವರು. ತಂದೆ ಬಾಬುರಾವ್ ಕಟ್ಟಿಗೆ ಕಡಿಯುವುದು, ಕೂಲಿ ಮಾಡುತ್ತಾ ಮಿಲ್ ಒಂದರಲ್ಲಿ ಕಾರ್ಮಿಕನಾಗಿ ಸೇರಿದರು. ತಾಯಿ ರತ್ನಮ್ಮ ತರಕಾರಿ ಮಾರಾಟದಿಂದ ಕುಟುಂಬಕ್ಕೆ ನೆರವಾಗಿದ್ದರು.. ಬಾಬುರಾವ್- ರತ್ನಮ್ಮ ದಂಪತಿಗೆ ವಿಜಯಲಕ್ಷ್ಮಿಸೇರಿದಂತೆ ಏಳು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಕುಟುಂಬದಲ್ಲಿ ವಿಜಯಲಕ್ಷ್ಮಿ ಅವರು ವೈದ್ಯೆಯಾಗಿ ಬಡವರಿಗೆ ಒಳ್ಳೆಯ ಸೇವೆ ಒದಗಿಸಬೇಕು ಎಂಬುದು ಹೆತ್ತವರ ಕನಸು.

ಕಲಬುರಗಿಯ ಚಕ್ರಕಟ್ಟಾ ಮಾರುತಿ ಮಂದಿರದ ಬಳಿ ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದ ತಾಯಿಯೊದಿಗೆ ತರಕಾರಿ ಮಾರುತ್ತಲೇ ಹೈಸ್ಕೂಲ್‌ ಶಿಕ್ಷಣ ಕನ್ನಡ ಪೂರೈಸಿದ ವಿಜಯಲಕ್ಷ್ಮೀ ನಂತರ ಹುಬ್ಬಳ್ಳಿಯಿಂದ ವೈದ್ಯಕೀಯ ಪದವಿ ಪಡೆದರು. ಮಗಳು ವೈದ್ಯಳಾಗಬೇಕೆಂಬ ಆಸೆಗೆ ತಾಯಿ ರತ್ನಮ್ಮ ತಮ್ಮ ಮಂಗಳಸೂತ್ರ ಮಾರಿ ಅದರಿಂದ ಬಂದ ಹಣದಿಂದಲೇ ವಿಜಯಲಕ್ಷ್ಮೀಯವರ ವೈದ್ಯಕೀಯ ಶಿಕ್ಷಣದ ಶುಲ್ಕ ಭರಿಸಿದ್ದರು.
ತರಕಾರಿ ಮಾರುತ್ತಲೇ ಓದುತ್ತಾ, ಡಾಕ್ಟರ್ ಪದವಿ ಪಡೆದ ಬಂದ ಡಾ. ವಿಜಯಲಕ್ಷ್ಮೀ ದೇಶಮಾನ್ಯೆ ಕ್ಯಾನ್ಸರ್‌ ಸರ್ಜನ್‌ ಆಗಿ ಮಾಡಿರುವ ಸಾಧನೆ, ಸಾಗಿದ ದಾರಿ, ಏರಿದ ಎತ್ತರ ಮಾದರಿ. ರೋಗಿಗಳ ಸೇವೆಯೇ ಪರಮ‌ ಧ್ಯೇಯವಾಗಿಸಿಕೊಂಡಿದ್ದ ಡಾ. ವಿಜಯಲಕ್ಷ್ಮಿ, ದಿನದ ಬಹುತೇಕ ‌ಸಮಯ ಆಸ್ಪತ್ರೆಯಲ್ಲೇ ಕಳೆಯುತ್ತಿದ್ದರು. ಸಮಯದ ಪರಿವೆಯೇ ಇಲ್ಲದೇ ಚಿಕಿತ್ಸೆ ನೀಡಬೇಕೆಂಬ ಉದ್ದೇಶಕ್ಕೆ ಡಾ.ವಿಜಯಲಕ್ಷ್ಮಿ ವಾಚ್ ಕಟ್ಟುತ್ತಲೇ ಇರಲಿಲ್ಲವಂತೆ. ಅವರು ಗಳಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ದೇಶ, ವಿದೇಶಗಳಲ್ಲೂ ಅವರ ಸಾಧನೆ ಗುರುತಾಗಿದೆ. ತಮ್ಮ ಬದುಕನ್ನೇ ವೈದ್ಯ ವೃತ್ತಿಗೆ ಸಮರ್ಪಿಸಿದ ಡಾ. ವಿಜಯಲಕ್ಷ್ಮಿ, ರಾತ್ರೋರಾತ್ರಿ ‌ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ವೈದ್ಯರ ನಡುವೆ, ಸೇವೆಯಿಂದಲೇ ಫೇಮಸ್ ಆದ ಡಾ.ವಿಜಯಲಕ್ಷ್ಮಿ.

ಲೇಟಾದರೂ ಪರವಾಗಿಲ್ಲ ಡಾ. ವಿಜಯಲಕ್ಷ್ಮಿ ಅವರಿಂದ‌
ಪದ್ಮಶ್ರೀ ಪ್ರಶಸ್ತಿಗೆ ಗೌರವ ಬಂದಂತಾಯ್ತು.

🏹 ಕೃಷ್ಣ ಚೇತನ ಲೋಕ 🌎

27 Jan, 14:50


Damsel ( 2024 ) English - Telugu + Tamil_kcmwindia1.mkv

🏹 ಕೃಷ್ಣ ಚೇತನ ಲೋಕ 🌎

27 Jan, 10:56


ಚಂದ್ರಗುಪ್ತ ಮೌರ್ಯನಿಗೆ ವಯಸ್ಸು ಆದಾಗ ತನ್ನ ಪುತ್ರ ಬಿಂದುಸಾರನನ್ನು ತನ್ನ ವಾರಸುದಾರನೆಂದು ಪ್ರಕಟಿಸಿ, ಕರ್ನಾಟಕದ ಶ್ರವಣಬೆಳಗೊಳಕ್ಕೆ ಬಂದು, ಜೈನಮತಕ್ಕೆ ಸೇರಿ, ಆಧ್ಯಾತ್ಮಿಕ ಗುರು ಭದ್ರಬಾಹು ಸೂಚನೆಯ ಮೇರೆಗೆ ಸಲ್ಲೇಖನ ತೆಗೆದುಕೊಂಡರು. ಸಲ್ಲೇಖನ ಅಂದರೆ ಅನ್ನಪಾನೀಯಗಳನ್ನು ಬಿಟ್ಟು, ಹಸಿವಿನಿಂದ 2 . ( BHADRA BAHU-SALLEKANA started fast- ing for self starvation. SHRAVANABELAGOLA - Hassan dis- trict 144 kms from Bangalore.)

ಚಂದ್ರಗುಪ್ತ ಮೌರ್ಯ ಶ್ರವಣಬೆಳಗೊಳಕ್ಕೆ ಹೊರಡುವ ಮೊದಲು ತನ್ನನ್ನು ಕಾಪಾಡಿದಂತೆಯೇ, ತನ್ನ ಮಗ ಬಿಂದುಸಾರನನ್ನೂ ಕಾಪಾಡುವಂತೆ ಚಾಣಕ್ಯನನ್ನು ಪ್ರಾರ್ಥಿಸಿದ. ಅದಕ್ಕೆ ಚಾಣಕ್ಯ ಒಪ್ಪಿದ. ಆ ದಿನದಿಂದಲೇ ಅಲ್ಲ ಬಿಂದುಸಾರನಿಗೆ ಚಿಕ್ಕಂದಿನಿಂದಲೂ ವಿಷಾಹಾರವನ್ನು ನೀಡುತ್ತಾ, ವಿಷಬೇಧಿಯಾಗಿ ಬದಲಾಯಿಸುತ್ತಾನೆ ಚಾಣಕ್ಯ ನಮ್ಮ ವಂಶಸ್ಥರ ಸಹಕಾರದೊಂದಿಗೆ.

( ANTI DOTE )

ಬಿಂದುವು ರೂಪದಲ್ಲಿ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ವಿಷವನ್ನು ಆಹಾರವಾಗಿ ತೆಗೆದುಕೊಂಡನಾದ್ದರಿಂದ ಚಂದ್ರಗುಪ್ತ ಮೌರ್ಯನ ಮಗನಿಗೆ ಬಿಂದುಸಾರನೆಂಬ ಹೆಸರಿಟ್ಟರೆಂದು ಚರಿತ್ರಕಾರರ ಅಭಿಪ್ರಾಯ.

ಹೀಗೆ ಪ್ರತಿ ಕಡೆಯೂ ನಮ್ಮ ವಂಶಸ್ಥರ ಪ್ರಮೇಯವಿರುತ್ತಿತ್ತು.

Damsell ಅಂದರೆ ಗೊತ್ತಾ ? ಸಂಸ್ಕೃತದಲ್ಲಿ ವಿಷಕನ್ಯೆ ಎಂದರ್ಥ.

ಆ ದಿನಗಳಲ್ಲಿ ಇದಕ್ಕಿಂತಲೂ ಮುಂದಕ್ಕೆ ಹೋದರೆ...,

*ಅಲೆಗ್ಲಾಂಡರ್* ಗ್ರೀಕ್ ದೇಶದಿಂದ ಪ್ರಪಂಚ ದಂಡಯಾತ್ರೆಗೆ ಹೊರಡುವ ಮೊದಲು ಕ್ರಿ.ಪೂ. 384 ರಲ್ಲಿ ಜನಿಸಿದ ಅವನ ಗುರು, ತತ್ವಶಾಸ್ತ್ರಜ್ಜನಾದ *ಅರಿಸ್ಟಾಟಲ್* ಒಂದು ಎಚ್ಚರಿಕೆ ಕೊಟ್ಟಿದ್ದ. ಹಿಮಾಲಯ ತಪ್ಪಲಿನಲ್ಲಿ ಏರ್ಪಾಟಾದ - ಷೋಡಷ ಜನಪಥಗಳು - 16 ರಾಜ್ಯಗಳ ಮೇಲೆ ದಂಡಯಾತ್ರೆಗೆ ಹೊರಟರೆ ತುಂಬಾ ಜಾಗ್ರತೆಯಿಂದಿರಬೇಕೆಂದು ಹತ್ತು ಸಲ ಎಚ್ಚರಿಸಿದ್ದ. ಆಗ ತನ್ನ ಗುರುವಾದ ಅರಿಸ್ಟಾಟಲನನ್ನು ಕೇಳುತ್ತಾನೆ... ಏಕಷ್ಟು ಭಯಪಡುತ್ತಿದ್ದೀರೆಂದು?

ಭಯವೇ.... *ಭಾರತೀಯ ಮೇಧಾವಿತನವೆಂದರೆ ಹೆದರಿಕೆ.... 64 ಕಲೆಗಳು ಅವರ ಸ್ವಂತ. ಅಪಾರವಾದ ಆಲೋಚನಾ ರೀತಿ, ಶಿಸ್ತು, ಬದ್ಧತೆ, ನಿಯತ್ತು, ನೀತಿ, ಆಯುರ್ವೇದ, ಸಂಖ್ಯಾಶಾಸ್ತ್ರ, ಖಗೋಳ‌ಶಾಸ್ತ್ರ, ರಸಾಯನ ಶಾಸ್ತ್ರ, ಕೌಟಿಲ್ಯನ ಅರ್ಥಶಾಸ್ತ್ರ, ತಕ್ಷಶಿಲ, ನಳಂದ, ಕಾಶಿ ವಿಶ್ವ‌ವಿದ್ಯಾಲಯಗಳು... ಒಂದೇ ಏನೂ...*

*ಅನನ್ಯ ಅಸಾಮಾನ್ಯ ಭಾರತೀಯರು ನಿನ್ನನ್ನು ಗೆಲ್ಲಿಸಲು ಬಿಡುವುದಿಲ್ಲ. ಯಾವುದೋ ಒಂದು ರೀತಿಯಲ್ಲಿ ನಿನ್ನನ್ನು ಮುಗಿಸುತ್ತಾರೆ.* ಹುಷಾರಾಗಿರು.

ಮುಖ್ಯವಾಗಿ ಅವರ ಬಳಿ ಮಂತ್ರ, ತಂತ್ರ ವಿದ್ಯೆಗಳು ಅಪಾರ… ಎಂದು ಎಚ್ಚರಿಸುತ್ತಾನೆ ಅರಿಸ್ಟಾಟಲ್.

ಆದರೂ ಲೆಕ್ಕಿಸುವುದಿಲ್ಲ ಅಲೆಗ್ಗಾಂಡರ್. ಗ್ರೀಸ್ ದೇಶದಿಂದ ಹಿಮಾಲಯ ಪರ್ವತ ತಪ್ಪಲಿನವರೆಗೂ 15 ವರ್ಷಗಳ ತನ್ನ ಜೈನ ಯಾತ್ರೆಯಲ್ಲಿ ಸೋಲನ್ನೇ ಕಾಣದ ಅಲೆಗ್ಸಾಂಡರ್ ಭರತಖಂಡದಲ್ಲಿ ಪ್ರವೇಶಿಸಿ ಗಾಬರಿಗೊಳ್ಳುತ್ತಾನೆ. ಅಂದಿ ಎನ್ನುವ ರಾಜನನ್ನು ತನ್ನಡೆಗೆ ತಿರುಗಿಸಿಕೊಂಡು, ಪುರುಷೋತ್ತಮನನ್ನು ಸೋಲಿಸಲು 25,000 ಕೇಜಿಗಳಷ್ಟು ಬಂಗಾರವನ್ನು ಕೊಡುತ್ತಾನೆ. ತುಂಬಾ ಕಷ್ಟದಿಂದ ಪುರುಷೋತ್ತಮನನ್ನು ಸೋಲಿಸುತ್ತಾನೆ.

ಆಗ ಪುರುಷೋತ್ತಮ ಒಬ್ಬ ಅಪರೂಪ ಸೌಂದರ್ಯರಾಶಿಯನ್ನು ಆಲೆಕ್ಟ್ರಾಂಡರ್‌ಗೆ ಬಹುಮಾನವಾಗಿ ಕೊಡುತ್ತಾನೆ. ಅವಳು ನಮ್ಮ ವಂಶಸ್ಥರು ತಯಾರು ಮಾಡಿದ ವಿಷಕನ್ಯೆ ಆ ವಿಷಯ ಮೂರನೆಯ ಕಣ್ಣಿಗೆ ಗೊತ್ತಿಲ್ಲ.

ಅಲೆಸ್ಟಾಂಡರ್ ತನ್ನ ದೇಶಕ್ಕೆ ಹಿಂತಿರುಗುತ್ತಿರುವಾಗ, ಬಾಬಿಲೋನಿನಲ್ಲಿ ಗುಣವಾಗದ ಖಾಯಿಲೆಯಿಂದ ತನ್ನ 32ನೇ ವಯಸ್ಸಿನಲ್ಲಿ ಮರಣ ಹೊಂದುತ್ತಾನೆ. ಖಚಿತವಾಗಿ ಹೇಳಬೇಕೆಂದರೆ ಕ್ರಿಸ್ತಪೂರ್ವ 323. ಜೂನ್ ತಿಂಗಳ ಹತ್ತನೇ ತಾರೀಖು ಸಾಯಂಕಾಲದಿಂದ ಜೂನ್ 11 ಸಾಯಂಕಾಲದ ನಡುವೆ ನಿರ್ಜಿವನಾದ ಅಲೆಕ್ಟ್ರಾಂಡರ್.

ನಾವು ತಯಾರು ಮಾಡಿದ ವಿಷಕನ್ಯೆ ಮೂಲದಿಂದಲೇ.
ಎಂದು ದೀರ್ಘವಾಗಿ ಶ್ವಾಸವನ್ನೆಳೆದುಕೊಂಡ ತಾಂತಿಯ ಧೂಮ್ರೆ.

🙏 ಮುಕ್ತಾಯ 🙏

📙 ಪೂರ್ವಜನ್ಮ ಪಾಪಂ``
✒️ *ಸೂರ್ಯ‌ದೇವರ ರಾಮ್ ಮೋಹನರಾವ್*
📝 _ರಾಜಾ ಚೆಂಡೂರ್_
🏹 ~ಕೃಷ್ಣ ಚೇತನ~ 📚

🏹 ಕೃಷ್ಣ ಚೇತನ ಲೋಕ 🌎

27 Jan, 02:15


The Sabarmati Report ( 2024 ) Hindi - Telugu + Tamil_ kcmwindia1.mkv.
https://t.me/kcmwindia1/3521

🏹 ಕೃಷ್ಣ ಚೇತನ ಲೋಕ 🌎

24 Jan, 11:31


🤭🤭🤭🤭🤭

🏹 ಕೃಷ್ಣ ಚೇತನ ಲೋಕ 🌎

24 Jan, 10:35


' ತರಲೆ. ತರಲೆ ಮಾಡುವುದನ್ನು ಬಿಟ್ಟರೆ ಮತ್ತೇನೂ ಬರುವುದಿಲ್ಲ ಇವಳಿಗೆ ' ಅನ್ನುತ್ತಾ ಮಾವ ಹೋರಗೆ ಹೊರಟರು

ರಾಧ ತಲೆತಗ್ಗಿಸಿ ನೋಟ್ ಬುಕ್‌ ನಲ್ಲಿ ಏನನ್ನೋ ಬರೆದು ಕೃಷ್ಣ ಚೇತನನಿಗೆ ಕೊಟ್ಟು ಕೇಳಿದಳು.

"ರೀ, ಈ ಲೆಕ್ಕ ಸರಿಯಾಗಿದೆಯಾ ? ''

ಕೃಷ್ಣ ಚೇತನ ರಾಧ ಬರೆದಿದ್ದನ್ನು ಓದಿದ.

" ಕ್ರಿಟಿ ! "

"ನಮ್ಮಪ್ಪ ಬಂದು ನಮ್ಮ ಟಾಪಿಕ್ ಅನ್ನು ಡಿಸ್ಟರ್ಸ್ ಮಾಡಿದರು. ಆದರೆ ನಾನು ನಿಮ್ಮ ಪತ್ನಿಯಾದರೆ ನಿನಗೆ ಏನಾಗುತ್ತದೆ ಗೊತ್ತೇ ?

*ತಲೆನೋವು*
*ಹಣ*
*ಸಮಸ್ಯೆಗಳು* ✖️
*ಆನಂದ*
-----------------------------------
= *ಶಾಂತಿ* ನಿಲ್
-----------------------------------
ಕೊನೆಗೆ ಬಿದ್ದು ಸಾಯುವುದಕ್ಕೆ ಇಲ್ಲಿಯ ಒಂದು ಕೆರೆಯಲ್ಲೂ ನೀರಿರುವುದಿಲ್ಲ."

ಕೃಷ್ಣ ಚೇತನ ನಸುನಕ್ಕ.

" ಲೆಕ್ಕ ಸರಿಯಾಗಿ ಮಾಡಿದ್ದಾಳೇನಪ್ಪಾ?" ರಾಧಳ ತಂದೆ ಕೇಳಿದರು.

"ಸರಿಯಾಗಿದೆ.''

ಪಕ್ಕನೆ ನಕ್ಕಳು ರಾಧ.

📙 ಯಮಪಾಶ``
✒️ *ಮಲ್ಲಾದಿ ವೆಂಕಟಕೃಷ್ಣಮೂರ್ತಿ*
📝 _ಬೇಲೂರು ಕೃಷ್ಣ ಕುಮಾರ್_
🏹 ~ಕೃಷ್ಣ ಚೇತನ~ 📚

🏹 ಕೃಷ್ಣ ಚೇತನ ಲೋಕ 🌎

24 Jan, 07:12


ರಾಮಮಂದಿರ ಪ್ರತಿಷ್ಠಾಪನೆಯ ಒಂದು ವರ್ಷದ ಸ್ಮರಣೆಗಾಗಿ ಕಿರಿಯ ಸ್ನೇಹಿತರಾದ Prashanth Srikantaiah ರಾಮನ ಬಗ್ಗೆ ಒಂದು ಅತ್ಯಂತ ಸುಂದರವಾದ, ಅರ್ಥಗರ್ಭಿತ ಹಾಡನ್ನು ರಚಿಸಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಮತ್ತೊಬ್ಬ ಕಿರಿಯ ಸ್ನೇಹಿತರಾದ ಶಶಿಕಿರಣ್ ಆನೆಕಾರ್ ಹಾಡಿದ್ದಾರೆ.

ಅಷ್ಟೇ ಅತ್ಯದ್ಭುತವಾಗಿ AI ರಾಮಾಯಣದ ವಿಡಿಯೋ ಮಾಡಿಕೊಟ್ಟಿದೆ. ಇದರಲ್ಲಿರುವ ಪ್ರತಿ ಪಾತ್ರಧಾರಿಗಳೂ ಅದೆಷ್ಟು ಸುಂದರ!! ಅದೆಷ್ಟು ಜೀವಂತ!! ಅದರಲ್ಲೂ ರಾಮ, ಸೀತೆ. 🙏🙏💕💕💕💕👌
ದಯವಿಟ್ಟು ಎಲ್ಲರೂ ಪುರುಸೊತ್ತು ಮಾಡಿಕೊಂಡು ನೋಡಿ. ಇಯರ್ ಫೋನ್ ಹಾಕಿಕೊಂಡು ಕೇಳಿದರೆ ಇನ್ನೂ ಚೆನ್ನ.

ಯೂಟ್ಯೂಬ್ ಚಾನಲ್ ಲಿಂಕ್...

https://youtu.be/C-4qqI4U22g?si=0eiD820wDA56DOc9

ಜೈ ಶ್ರೀರಾಮ್ 💕🙏

*- Jyothy Umesh ( ಫೇಸ್ಬುಕ್ )*
🏹 ~ಕೃಷ್ಣ ಚೇತನ~ 🙏

🏹 ಕೃಷ್ಣ ಚೇತನ ಲೋಕ 🌎

24 Jan, 04:39


ಚಿತ್ರ : ಪರ್ವ (2002)
ರಾಗ ತಾಳ ಸಂಗೀತ ನಾಟ್ಯ ಸೋಲು ಗೆಲುವು ಕಷ್ಟ ಸುಖ ದುಃಖ ಖಿನ್ನತೆ ಎಲ್ಲವನ್ನೂ ಕಲಾವಿದರು ಹೇಗೆ ನಿಭಾಯಿಸುತ್ತಾರೆ. ಮತ್ತು ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ ಕೌಟುಂಬಿಕ ಚಿತ್ರ
ಸಂಗೀತ : ಹಂಸಲೇಖ
ತಾರಾಗಣ : ಡಾ. ವಿಷ್ಣುವರ್ಧನ್, ಪ್ರೇಮ, ರೋಜಾ, ರಾಧಾರವಿ, ಕೆರೆಮನೆ ಶಂಭುಹೆಗ್ಗಡೆ, ಸಂಕೇತ್ ಕಾಶಿ, ಅರುಣ್ ಸಾಗರ್,ಎಚ್.ಜಿ.ದತ್ತಾತ್ರೇಯ, ರಮೇಶ್ ಭಟ್, ಕಾಶಿ, ಶಂಕರ್ ರಾವ್, ಮನದೀಪ್ ರಾಯ್, ಭಾವನಾ, ಅಪರ್ಣಾ ವೈದ್ಯನಾಥನ್, ರೇಖಾ, ಕೃತಿಕಾ, ನವೀನ್ ಮಯೂರ್, ಅರುಣ್ ಸಾಗರ್, ಸಲಾವುದ್ದೀನ್ ಪಾಷಾ, ಡಾ.ಶರ್ಮಾ. , ಕಿಶೋರಿ ಬಲ್ಲಾಳ್, ಜಯಲಕ್ಷ್ಮಿ, ರೇಣುಕಾ ಮುರುಗೋಡು,
ಚಿತ್ರಕಥೆ : ಸಾಗರ್ (ನಾಯಕ) ಉತ್ತಮ ಗಾಯಕ ಮತ್ತು ನೃತ್ಯಗಾರ. ಒಳ್ಳೆಯ ವ್ಯಕ್ತಿಯಾಗಿದ್ದು, ತನ್ನ ಪ್ರೇಮ ಜೀವನದಲ್ಲಿ ವಿಫಲವಾದ ಕಾರಣ ಕುಡಿತಕ್ಕೆ ಶರಣಾಗುತ್ತಾನೆ. ಸಾಗರ್ ಅವರು ಸುಧಾ (ರೋಜಾ) ನಿಂದ ಹೇಗೆ ಹೊರಹಾಕಲ್ಪಟ್ಟರು ? ಸುಮಾ ಅವರ ಮನವೊಲಿಕೆಯ ನಂತರ ಸಾಗರ್ ಅಂತಿಮವಾಗಿ ಹಾಡುವಿಕೆಯನ್ನು ಕೈಗೆತ್ತಿಕೊಂಡರು ಮತ್ತು ಗಾಯನ ಕುಟುಂಬಕ್ಕೆ ಮರಳಿದರು. ಅವರು ಪುನರಾಗಮನ ಕಾರ್ಯಕ್ರಮವನ್ನು ನೀಡಲು ಒಪ್ಪುತ್ತಾರೆ,ಸಿನಿಮಾದಲ್ಲಿ ಏಳೆಂಟು ಹೆಚ್ಚಿನ ಫ್ಲ್ಯಾಷ್‌ಬ್ಯಾಕ್‌ಗಳು ಇರುವುದರಿಂದ ಸಿನಿಮಾ ನೋಡಿದರೆ ಮಾತ್ರ ತಿಳಿಯುತ್ತದೆ.
🌻

🏹 ಕೃಷ್ಣ ಚೇತನ ಲೋಕ 🌎

24 Jan, 03:51


🤣🤣🤣🤣🤣

🏹 ಕೃಷ್ಣ ಚೇತನ ಲೋಕ 🌎

24 Jan, 03:49


https://t.me/kcmwindia1/3473

🏹 ಕೃಷ್ಣ ಚೇತನ ಲೋಕ 🌎

24 Jan, 03:48


ಬಹುಶಃ ಲಕ್ಷ್ಮೀ ಅವರನ್ನು ನೋಡಿಯೇ ಈ ಗೀತೆ ಬರೆದಿರುವ ಹಾಗಿದೆ..🌷💖``

*PS :* ~ನನ್ನ ಬಳಿಯು ಒಂದು ಲಚುಮಿ ಇತ್ತು ! 🥰 ಅದು ಏನಾಯ್ತೋ ಏನೋ, ಮುನಿಸಿಕೊಂಡು ಹಂಗೇ ಹೊಂಟೋಗ್ ಬಿಡೋದಾ...😬~

🏹 *ಕೃಷ್ಣ ಚೇತನ* 😷

🏹 ಕೃಷ್ಣ ಚೇತನ ಲೋಕ 🌎

24 Jan, 02:29


🙏 ನಿಮ್ಮ ದಿನದ ಶುಭಾಶಯಗಳು...! 💐

🏹 ಕೃಷ್ಣ ಚೇತನ ಲೋಕ 🌎

24 Jan, 02:09


ಶಿವಧನಸ್ಸಿಗೆ 2 ವರಗಳೇ...?!

🏹 ಕೃಷ್ಣ ಚೇತನ ಲೋಕ 🌎

24 Jan, 01:25


*Part 26 - ಅಹಂಕಾರ ನಿರಸನ _ ಬಸವಣ್ಣವರ ವಚನಗಳು - 17 _ Dr. Gururaj Karajagi*

🏹 ಕೃಷ್ಣ ಚೇತನ ಲೋಕ 🌎

20 Jan, 15:51


*ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಾಧು ವೇಷದಲ್ಲಿ - "ಆಯೂಬ್ ಖಾನ್" ಎನ್ನುವ ಹೆಸರಿನ ಒಬ್ಬ ಉಗ್ರವಾದಿ ಬಂದು.. ನಮ್ಮ ಸಾಧುಗಳೊಂದಿಗೆ ಬೆರೆತು.‌. ಅತಿದೊಡ್ಡ ದುಷ್ಕೃತ್ಯ ನಡೆಸಲು ಸಂಚು ಮಾಡಿದ್ದನು*.

*ದೈವ ಕೃಪೆಯಿಂದ ನಮ್ಮ ಸಾದೂಗಳು ಆ ಉಗ್ರವಾದಿಯ ನಡವಡಿಕೆಗಳನ್ನು ಗಮನಿಸಿ ಪೊಲೀಸ್ ನವರಿಗೆ ಹಿಡಿದು ಕೊಟ್ಟರು*...

*ನಮ್ಮ ನಾಡಿನ ಅನ್ನ ತಿಂದು.‌ ನಮ್ಮ ನಾಡಿನಲ್ಲೇ ಬಾಳಿ ಬದುಕಿ..‌ ಕೊನೆಯಲ್ಲಿ ನಮಗೂ ನಮ್ಮ ಸಹೋದರ ಸಹೋದರಿಯರಿಗೂ ಹಾಗೂ ನಮ್ಮ ಧರ್ಮಕ್ಕೂ ಬೆಂಕಿಯಿಟ್ಟು... ಸಂತೋಷ ಪಡುವ ಈ ತರಹದ ದೇಶ ದ್ರೋಹಿಗಳನ್ನು ಗುಂಡಿಟ್ಟು ಕೊಲ್ಲ ಬೇಕಾದ ಕಾನೂನು ಬರಲೇಬೇಕು*.‌.
*ಆ ತರಹದ ಕಾನೂನು ಬರುವ ತನಕ > ಈ ರೀತಿಯ ಚಿತ್ರಹಿಂಸೆ ಹಿಂದೂಗಳಿಗೆ ತಪ್ಪಿದ್ದಲ್ಲ*..
😔. 😔. 😡. 😡. 😡.

🏹 ಕೃಷ್ಣ ಚೇತನ ಲೋಕ 🌎

20 Jan, 14:56


ಮೂರನೆ ಸಲ ತಟ್ಟಿದಾಗ ಮಗುವಿನ ಬಾಯಿಂದ ಶಬ್ದ ಕೇಳಿಸಿತು. ಕೂಡಲೇ ವೈದ್ಯರು ಮಗುವನ್ನು ನವ್ಯದಿಶೆಯಲ್ಲಿ ಹಿಡಿದು ಎಚ್ಚರಿಕೆ ಗಂಟೆ ಬಾರಿಸುತ್ತಿದ್ದಂತೆ, ಪರಿಚಾರಿಕೆಯರು ಬಂದ ಕೂಡಲೇ... 'ತಕ್ಷಣವೇ ಮಂಗಳವಾದ್ಯಗಳು ಮೊಳಗಬೇಕು ಮೌರ್ಯಭಾವೀ ಸಾಮ್ರಾಟನಿಗೆ ಶುಭಾಹ್ವಾನ ಹೇಳಬೇಕು. ದೃಷ್ಟಿ ತೆಗೆಯಬೇಕು. ಹೋಮಗಳು, ಅನ್ನಸಂತರ್ಪಣೆಗಳು ನಡೆಯಬೇಕು. ಇದೊಂದು ಕಡೆ ನಡೆಯಬೇಕು. ಮತ್ತೊಂದು ಕಡೆ ವಿಷಾದ ಚಿನ್ನೆಗಳನ್ನು ತೋರ್ಪಡಿಸಬೇಕು' ಎಂದು ಆದೇಶಿಸಿದಾಗ ಪರಿಚಾರಿಕೆಯರು ಆಶ್ಚರ್ಯಪಟ್ಟರು.

ಅನಂತರ... ಒಂದು ಕಡೆ ಭಾವೀ ಸಾಮ್ರಾಟನ ಜನನ ಸಂಭ್ರಮಗಳು, ಮತ್ತೊಂದು ಕಡೆ ಪಟ್ಟಮಹಿಷಿಯ ದಹನ ಸಂಸ್ಕಾರಗಳು.

ಆ ಭಾವೀ ಸಾಮ್ರಾಟನ ಹೆಸರೇ *ಬಿಂದುಸಾರ.*

ಬಿಂದುವು ರೂಪದಲ್ಲಿ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ವಿಷವನ್ನು ಆಹಾರವಾಗಿ ತೆಗೆದುಕೊಂಡನಾದ್ದರಿಂದ ಚಂದ್ರಗುಪ್ತ ಮೌರ್ಯನ ಮಗನಿಗೆ ಬಿಂದುಸಾರನೆಂಬ ಹೆಸರಿಟ್ಟರೆಂದು ಚರಿತ್ರಕಾರರ ಅಭಿಪ್ರಾಯ.

ಎರಡನೆ ಮೌರ್ಯ ಚಕ್ರವರ್ತಿ ಇವನ ಮಗನೇ ಅಶೋಕ ಚಕ್ರವರ್ತಿ.

( ಇನ್ನೂ ಇದೆ... )

📙 `ಪೂರ್ವಜನ್ಮ ಪಾಪಂ```
✒️ *ಸೂರ್ಯ‌ದೇವರ ರಾಮ್ ಮೋಹನರಾವ್*
📝 _ರಾಜಾ ಚೆಂಡೂರ್_
🏹 ~ಕೃಷ್ಣ ಚೇತನ~ 📚

🏹 ಕೃಷ್ಣ ಚೇತನ ಲೋಕ 🌎

20 Jan, 14:56


'ಹೇಳಿ.... ಸಂಕೋಚ ಬೇಡ' ಎಂದು ರಾಜರು ಧೈರ್ಯ ಹೇಳಿದ ಮೇಲೆ- ಅಂತಃಪುರ ವೈದ್ಯ ಹೇಳಲಾರಂಭಿಸಿದ.

'ಮಹಾರಾಜರೇ. ಒಂದು : ನನ್ನ ಅಂದಾಜು.... ಎರಡು : ತಕ್ಷಣ ಕರ್ತವ್ಯ. ಹಿಂದೆ ನಿಮ್ಮ ಮೇಲೆ ವಿಷಕನ್ಯ ಪ್ರಯೋಗ ನಡೆಯುತ್ತಿದ್ದಂತೆ ನಮ್ಮ ಪ್ರಧಾನಮಂತ್ರಿ,

ಸಲಹೆಗಾರರು, ಅಮಾತ್ಯರಾದ ಚಾಣಕ್ಯರವರು, ಭವಿಷ್ಯತ್ತಿನಲ್ಲಿ ಮತ್ತೊಮ್ಮೆನಿನಾ ಮೇಲೆ ಆ ಪ್ರಯೋಗ ನಡೆದರೂ, ತಮಗೆ ಆದರಿಂದ ಪ್ರಾಣಪಾಯವಾಗಬಾರರೊಂದು ನಿಮ್ಮ ಶರೀರವನ್ನು ವಿಷನಿರೋಧಕವನ್ನಾಗಿ ಬದಲಾಯಿಸಿದ್ದಾರಿಂದ ನನ್ನ ಅಂದಾಜಿ ತಕ್ಷಣ ಕರ್ತವ್ಯ : ತಾವು ಮೊದಲು ನನ್ನನ್ನು ಮನ್ನಿಸಬೇಕು' ಎಂದು ವೈದ ಬೇಡಿಕೊಳ್ಳುತ್ತಿದ್ದಂತೆ ಮಹಾರಾಜರು, 'ಪರವಾಗಿಲ್ಲ ಹೇಳು' ಎಂದು ಪ್ರಸನ್ನರಾದರ 'ಮಹಾರಾಣಿಯವರು ತಮ್ಮ ಜೊತೆಗೆ ತಮಗೆ ತಯಾರಿಸಿದ ಆಹಾರ ಸೇವಿಸಿದ್ದರಿಂದ ಅವರ ಶರೀರ ಕೂಡಾ ವಿಷತುಲ್ಕವಾಗಿರುವುದರಲ್ಲಿ ಸಂದೇಹವಿಲ್ಲ ಮಹಾರಾಜಾ, ಅಷ್ಟೇ ಅಲ್ಲ, ಮಹಾರಾಣಿಯವರು ಅವಸಾನದ ಹಂತದಲ್ಲಿದ್ದಾರೆ. ಮಹಾರಾಣಿಯವರ ನಾಡಿ ಒಳಗೆಳೆಯುತ್ತಿದೆ. ಕಂಠಸ್ವರ ಹೀನ ಹಂತಕ್ಕೆ ತಲುಪುತ್ತಿದೆ.

ಮಹಾರಾಜರು ಕ್ಷಮಿಸಬೇಕು. ಒಂದಿಷ್ಟು ತಡಮಾಡಿದರೂ ಹೊಟ್ಟೆಯಲ್ಲಿರುವ ಮೌರ್ಯವಂಶ ಭಾವೀ ಸಾಮ್ರಾಟ್ ಪ್ರಾಣಕ್ಕೆ ಕೂಡಾ ಅಪಾಯವಾಗಬಹುದು. ಅಂತಃಪುರ ನಿಬಂಧನೆಗಳ ಪ್ರಕಾರ ನಾನು ಮಹಾರಾಣಿಯವರ ಗರ್ಭವನ್ನು ಸೀಳಿ, ನಿಮ್ಮ ವಾರಸುದಾರನನ್ನು ಹೊರಗೆ ತೆಗೆಯಬಾರದು. ಮಹಾರಾಣಿಯವರ ನಾಡಿ, ಕಣ್ಣುಗಳು, ನಾಲಿಗೆಯನ್ನು ಮಾತ್ರವೇ ನಾನು ನೋಡಬಹುದು.... ಇನ್ನಿಗ ರಾಜವೈದ್ಯನನ್ನು ಕರೆಸಿ ಚಿಕಿತ್ಸೆ ಕೊಡಿಸುವ ಸಮಯವೂ ಇಲ್ಲ' ಎಂದು ಆ ವೈದ್ಯ ಅತ್ತುಬಿಟ್ಟ.

ರಾಜರು ಚಲಿಸಿಬಿಟ್ಟರು. ವೈದ್ಯನ ಭುಜದ ಮೇಲೆ ಕೈಹಾಕಿ, 'ಪ್ರಾರಬ್ಧಕರ್ಮವನ್ನು ಯಾರು ತಾನೇ ಬದಲಾಯಿಸಬಲ್ಲರು ವೈದ್ಯ ಅಮಾತ್ಯ...? ನನ್ನ ಪ್ರಸ್ತುತ ಕರ್ತವ್ಯವನ್ನು ಕೂಡಲೇ ತಿಳಿಸಿ. ನೀವೇನೂ ಹೆದರಬೇಡಿ' ಎಂದು ಭರವಸೆ ನೀಡಿದ ಮೇಲೆ, ವೈದ್ಯ ಕಣ್ಣೂರೆಸಿಕೊಂಡು, 'ನಾನು ತೆರೆಯ ಹಿಂದಿದ್ದು ನಿಮಗೆ ಸೂಚನೆಗಳನ್ನು ಕೊಡುತ್ತಿರುತ್ತೇನೆ. ನೀವು ಆತ್ಮರಕ್ಷಣೆಗಾಗಿ ನಿಮ್ಮ ನಡುವಿನಲ್ಲಿರಿಸಿಕೊಂಡಿರುವ ಹರಿತವಾದ ಚೂರಿಯಿಂದ ಮಹಾರಾಣಿಯವರ ಹೊಟ್ಟೆಯನ್ನು ಕೊಯ್ದು ಭಾವೀ 'ಸಾಮ್ರಾಟನನ್ನು ಹೊರ ತೆಗೆಯಿರಿ ಮಹಾರಾಜಾ. ಬೇಗ... ಬೇಗ' ಎಂದು ಪರದೆಯ ಹಿಂಬದಿಗೆ ಹೋಗಿ ವೈದ್ಯ ಆತುರಪಡಿಸುತ್ತಿದ್ದಂತೆ-

ಎದುರಿಗಿದ್ದ ಮಹಾರಾಣಿ ಕಿರುಚುತ್ತಿದ್ದ ಪ್ರಯತ್ನ ಮಾಡುತ್ತಿದ್ದರೂ, ಒಂದಿಷ್ಟೂ ಶಬ್ದ ಹೊರಬರುತ್ತಿರಲಿಲ್ಲ. ಏನೋ ಸನ್ನೆಗಳನ್ನು ಮಾಡುತ್ತಿದ್ದಾರೆ ಆಕೆ. ರಾಜರ ಕಣ್ಣಲ್ಲಿ ನೀರು. ಎದೆಯಲ್ಲಿ ದುಃಖ ಒತ್ತರಿಸಿ ಬರುತ್ತಿತ್ತು. ಆಗ ಮಹಾರಾಣಿಯವರ ಸನ್ನೆಗಳು ಮಹಾರಾಜರಿಗೆ ಅರ್ಥವಾಯಿತು.

ತಾನಿನ್ನು ಹೆಚ್ಚು ಹೊತ್ತು ಬದುಕುವ ಅವಕಾಶವಿಲ್ಲವೆಂದು, ಹೊಟ್ಟೆಯನ್ನು ಕೊಯ್ದು ಮಗುವನ್ನು ತೆಗೆಯುವಂತೆ ಆಕೆ ಬೇಡಿಕೊಳ್ಳುತ್ತಿದ್ದರು. ನಿತ್ರಾಣರಾಗಿಬಿಟ್ಟರು
ಮಹಾರಾಜರು.

ಒಂದು ಕಡೆ ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ಹೆಂಡತಿ, ಮತ್ತೊಂದೆಡೆ ಸುವಿಶಾಲ ಮೌರ್ಯ ಸಾಮ್ರಾಜ್ಯದ ವಾರಸುದಾರ.

'ಮಹಾರಾಜರು ಕ್ಷಮಿಸಬೇಕು. ನಡುವೆ ಮಾತಾಡುತ್ತಿದ್ದೇನೆ. ಭಾವೀ ಸಾಮ್ರಾಟರನ್ನು ಕಾಪಾಡಿ.... ಮೃತ್ಯುದೇವತೆ ಬಹು ಕಠಿಣವಾಗಿದೆ. ಒಬ್ಬರಿಗೆ ಇಬ್ಬರನ್ನು ಕರೆದೊಯ್ಯಲು ನೋಡುತ್ತಿರುತ್ತದೆ. ಚೂರಿಯನ್ನು ಶೀಘ್ರವೇ ಹೊರ ತೆಗೆಯಿರಿ.' ವೈದ್ಯ ಜೋರಾಗಿ ಕಿರುಚುತ್ತಿದ್ದ. ಬೇಡಿಕೊಳ್ಳುತ್ತಿದ್ದ. ವಿಷಾದವನ್ನು ಬಲವಂತವಾಗಿ ನುಂಗುತ್ತಿದ್ದ.

ಮಹಾರಾಣಿಯವರ ಕಣ್ಣುಗಳು ತೇಲಾಡುತ್ತಿದ್ದಾವು. ರಾಜರಿಗೆ ಕರ್ತವ್ಯದ ನೆನಪಾಯಿತು. ಕಣ್ಣೀರೊರೆಸಿಕೊಂಡು ನಡುವಿನಲ್ಲಿದ್ದ ಹರಿತವಾದ ಚೂರಿಯನ್ನು ಹೊರತೆಗೆದರು.

'ಅಶುಭದಲ್ಲಿ ಶುಭ... ಮಹಾರಾಜರು.... ತಾಯಿ ಬದುಕಿರುವಾಗಲೇ, ಮಗು ಪ್ರಾಣ ಸಮೇತ ಹೊರಬರಬೇಕು.... ಮೊದಲೇ ತಾಯಿಗೆ ಪುತ್ರೋತ್ಸಾಹ. ಮಕ್ಕು ಸುವಿಶಾಲ ಮಗಧ ಮಹಾ ಸಾಮ್ರಾಜ್ಯಕ್ಕೆ, ಮೌರ್ಯವಂಶ ಪೌರುಷಕ್ಕೆ ವಾರಸುದಾರರು ಬರುವ ಶುಭ ಸಮಯ... 'ಜಯಹೋ... ಶ್ರೀಶ್ರೀಶ್ರೀ ಚಂದ್ರಗುಪ್ತ ಮಾ ಚಕ್ರವರ್ತಿಗೆ ಜಯಹೋ....' ಎನ್ನುತ್ತಾ ವೈದ್ಯರು ಮಹಾರಾಜರನ್ನು ಒಂದು ಕಡೆ ಪ್ರೇರೇಪಿಸುತ್ತಾ, ಮತ್ತೊಂದೆಡೆ ಗಂಟೆಯನ್ನು ಮೂರು ಸಲ ಹೊಡೆದರು.

ಕ್ಷಣದಲ್ಲೇ ಡಜನ್ ಜನ ಶಿಕ್ಷಿತರಾದ ಅಂತಃಪುರ ಪರಿಚಾರಕರು ಓಡಿ ಬಂದು ವೈದ್ಯರ ಮುಂದೆ ತಲೆಬಾಗಿ ನಿಂತರು.

'ಅಪರಾತ್ರಿಯಾದರೂ ಎಚ್ಚರದಿಂದಿರುವುದಕ್ಕೆ ನಿಮಗೆ ಅಭಿನಂದನೆಗಳು. ತಕ್ಷಣವೇ ಅಂತಃಪುರ ಮಂತ್ರ ಸಾನಿಗಳನ್ನು ಕರೆಸಿ' ಎಂದು ಹೇಳಿದರು ವೈದ್ಯರು.

ಅದು ಪರದೆಯ ಆಚೆಗಿದ್ದ ಮಹಾರಾಜರ ಕಿವಿಗೆ ಕೇಳಿಸಿತು. ಅದು ವೈದ್ಯ ತಮಗೆ ಮಾಡಿದ ಅಂತಿಮ ಎಚ್ಚರಿಕೆಯೆಂದು ಭಾವಿಸಿ, ಎದೆ ಗಟ್ಟಿ ಮಾಡಿಕೊಂಡು ಮಹಾರಾಣಿಯವರ ಹೊಟ್ಟೆಯ ಮೇಲಿದ್ದ ವಸ್ತ್ರವನ್ನು ತೊಲಗಿಸಿದರು. ಆದರೂ ಕೆಲವು ಕ್ಷಣ ತಡೆದುಬಿಟ್ಟರು.

ಮಹಾರಾಜರ ದ್ವಂದ್ವವನ್ನು ಗ್ರಹಿಸಿದ ವೈದ್ಯರು ಮತ್ತೊಮ್ಮೆ ಜೋರಾಗಿ- 'ಮಹಾರಾಜಾ, ಸಮಯ ಮಾರುತ್ತಿದೆ.... ಬೇಗ... ಬೇಗ....' ಎಂದು ಕಿರುಚಿದರು.

ಅಷ್ಟೇ.... ಮಹಾರಾಜರ ಕೈಯಲ್ಲಿದ್ದ ಹರಿತವಾದ ಚೂರಿ ಮಹಾರಾಣಿಯವರ ಹೊಟ್ಟೆಯ ಅಡ್ಡವಾಗಿ ಸೀಳಿತು. ಕೂಡಲೇ ಚಿಮ್ಮಿತು ರಕ್ತ. ರಾಜರ ಮುಖವೆಲ್ಲಾ ರಕ್ತಸಿಕ್ತವಾಯಿತು.

'ಬೆಳ್ಳಗೆ ಕಾಣುತ್ತಿರುವ ಕೊಬ್ಬಿನ ಭಾಗವನ್ನು ಕೂಡಾ ಕೊಯ್ದಿರಿ ಮಹಾರಾಜ್ ಎಂದು ಮತ್ತೊಮ್ಮೆ ಕಿರುಚಿದರು ವೈದ್ಯರು.

ರಾಜರ ಕೈಯಲ್ಲಿದ್ದ ಚೂರಿ ಮತ್ತೊಮ್ಮೆ ಇನ್ನೊಂದು ಪೊರೆಯನ್ನು ಸೀ ಆಗಲೇ, ಅಲ್ಲೇ ಕಂಡ ಮೌರ್ಯ ಸಾಮ್ರಾಜ್ಯ ಭಾವೀ ಸಾಮ್ರಾಟ್,

ಬೇಗನೆ ಎರಡು ಕೈಗಳಿಂದ ಭಾವೀ ಸಾಮ್ರಾಟರನ್ನು ಹೊರತೆಗೆದುಬಿಟ್ಟು

'ಕರುಳ ಬಳ್ಳಿಯನ್ನು ಕತ್ತರಿಸಿಬಿಡಿ ಮಹಾರಾಜರೇ' ಕಿರುಚಿದರು ವೈದ್ಯ. ಹಾಗೆಯೇ ಮಾಡಿದರು ಮಹಾರಾಜರು, 'ಈಗೇನು ಮಾಡಬೇಕು. ವೈದ್ಯಶಿಖಾಮಣಿಗಳೇ?' ಎಂದು ರಾಜರು ಪ್ರಶ್ನಿಸಿದರು.

'ತೆರೆಯ ಮರೆಯಲ್ಲಿ ಮಹಾರಾಣಿಯವರನ್ನು ಅಲ್ಲೇ ಬಿಟ್ಟು, ಧಾವಿ ಸಾಮ್ರಾಟರನ್ನು ತೆಗೆದುಕೊಂಡು ಹೊರಬನ್ನಿ' ಹೇಳಿದರು ವೈದ್ಯರು.

ಮರುಕ್ಷಣ ವೈದ್ಯರು ತೆರೆಸರಿಸಿ ರಾಜರ ಬಳಿ ಬಂದು, ಅವರ ಕೈಯಲ್ಲಿ- ಹಸುಗೂಸನ್ನು ತಮ್ಮ ಕೈಗೆ ತೆಗೆದುಕೊಂಡು ಕರುಳ ಬಳ್ಳಿಗೆ ಔಷಧಿ ಲೇಪಿ, ಗಂಟುಹಾಕಿ, ಮಗುವನ್ನು ತಲೆಗೆಳಗಾಗಿ ತೂಗಾಡಿಸಿ. ಬೆನ್ನಿನ ಮೇಲೆ ಮೂರ ಸಲ ತಟ್ಟಿದರು.

🏹 ಕೃಷ್ಣ ಚೇತನ ಲೋಕ 🌎

20 Jan, 06:59


ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರು ಅದರಲ್ಲೂ ಸಿನಿಮಾ ಲೋಕದಲ್ಲಿ ...
ಕನ್ನಡದ ಡಾ.ರಾಜ್ ಮತ್ತು ತಮಿಳಿನಲ್ಲಿ ರಜನಿಕಾಂತ್ ಅವರು ಇಷ್ಟ‌ಪಟ್ಟು ಅಭಿನಯಿಸಿದ ಸಿನಿಮಾಗಳನ್ನು ನನ್ನ ಟೆಲಿಗ್ರಾಂ‌ನಲ್ಲಿ ಅಪ್ಲೋಡ್ ಮಾಡಿದ್ದೀನಿ ! 😊

ಕನ್ನಡ
https://t.me/kcmwindia1/3400

ತಮಿಳು
https://t.me/kcmwindia1/3402

ನೋಡುವ ಸಂಭ್ರಮ ರಾಘವೇಂದ್ರ ಸ್ವಾಮಿಗಳ ಭಕ್ತರಾದ ನನ್ನದು ಮತ್ತು ನಿಮ್ಮದು.... 🙏

🏹 ಕೃಷ್ಣ ಚೇತನ 📽️

🏹 ಕೃಷ್ಣ ಚೇತನ ಲೋಕ 🌎

14 Jan, 14:42


ಯಾವ ಪುಣ್ಯಾತ್ಮ ಈ ಎಡಿಟಿಂಗ್ ಮಾಡಿದ್ದಾನೊ ಗೊತ್ತಿಲ್ಲ ಅದರೆ ಅವರಿಗೆ ದೊಡ್ಡ ನಮನ.. ಗಂಧದ ನಾಡಿನ ಹಿರಿಯ ಕಿರಿಯ ‌ಕಲಾವಿದರನ್ನು ಒಗ್ಗೂಡಿಸಿ ದ ಈ ಕ್ರಿಯೇಟಿವ್ ನೇಚರ್ ಗೆ...💐💐💐👏👆🏿

🏹 ಕೃಷ್ಣ ಚೇತನ ಲೋಕ 🌎

14 Jan, 12:26


Miracle Miracle Miracle

🏹 ಕೃಷ್ಣ ಚೇತನ ಲೋಕ 🌎

14 Jan, 06:57


*' ವಿಷಕನ್ಯೆ ಪ್ರಯೋಗದ ಮೂಲಕ ...*
ಚಂದ್ರಗುಪ್ತ ಮೌರ್ಯನನ್ನು ಮುಗಿಸಬೇಕೆಂದು ಹೆಣೆದ ಹುನ್ನಾರ ವಿಫಲವಾದ ಮೇಲೆ ಚಾಣಕ್ಯ ನಡೆದದ್ದನ್ನು ಸಂಪೂರ್ಣ ತಿಳಿದುಕೊಂಡ, ವಿಷಕನ್ಯೆಯನ್ನು ತಯಾರು ಮಾಡಿಸಿದ್ದು ರಾಕ್ಷಸ ಮಂತ್ರಿಯಾದರೂ, ಮಾಡಿದ್ದು, ಧೂಮ್ರೆ ವಂಶಜರೆಂದು ತಿಳಿದರೂ ನಮ್ಮ ವಂಶಿಕರನ್ನು ಶಿಕ್ಷಿಸಲಿಲ್ಲ. ಅಷ್ಟೇ ಅಲ್ಲ. ಹತ್ತಿರಕ್ಕೆ ಕರೆದುಕೊಂಡ. ಆದರಿಂದ ನೋಡಿಕೊಂಡ ನಮ್ಮ ವಿದ್ಯೆಯನ್ನು ನಮ್ಮನ್ನು ಗೌರವಿಸಿದ. ಆಮೇಲೆ ನಮ್ಮ ಸಹಾಯವನ್ನು ಕೇಳಿದ '

' ನಿಮ್ಮ ವಂಶದವರ ಸಹಾಯವನ್ನಾ !?'

' ಹೌದು. ಭವಿಷ್ಯದಲ್ಲಿ ಚಂದ್ರಗುಪ್ತಮೌರ್ಯ ಚಕ್ರವರ್ತಿಯ ಮೇಲೆ ಮತ್ತೊಮ್ಮೆ ವಿಷಪ್ರಯೋಗ ನಡೆಯದೆಂದು ಹೇಳಲಾಗುವುದಿಲ್ಲ. ಹಾಗಾಗಿ ಚಕ್ರವರ್ತಿ ವಿಷಪ್ರಯೋಗವನ್ನು ಎದುರಿಸಬೇಕು. ಅಂದರೆ ಚಕ್ರವರ್ತಿಗೆ ಪ್ರತಿದಿನವೂ ಆಗುವಷ್ಟು ವಿಷವನ್ನು ಆಹಾರದ ಮೂಲಕ ನೀಡಬೇಕೆಂದು ಆದೇಶಿಸಿದರು. ಹಾಗಾಗಿ ನಮ್ಮವರು ಚಾಣಕ್ಯನ ಮೇಧಾವಿತನಕ್ಕೆ, ಪರಿಣಿತಿಗೆ ಭೇಷ್ ಅಂದರು. ಅಂದಿನಿಂದ ಚಕ್ರವರ್ತಿ ಚಂದ್ರಗುಪ್ತ ಮೌರ್ಯನಿಗೆ ಆಹಾರದಲ್ಲಿ ಅತಿ ಸೂಕ್ಷ್ಮವಾಗಿ ವಿಷವನ್ನು ನೀಡುವ ಜವಾಬ್ದಾರಿ ನಮ್ಮ ವಂಶಸ್ಥರು ನೋಡಿಕೊಳ್ಳುತ್ತಿದ್ದರು. ಆದರೆ ಚಕ್ರವರ್ತಿ ವಿಷವನ್ನು ಸಹಿಸಿಕೊಳ್ಳುವಂತೆ ಮಾಡಿದ ಪ್ರತಿಕ್ರಿಯೆಯಲ್ಲಿ ಒಂದು ವಿಷಾದ ಉಂಟಾಯಿತು.'

' ವಿಷಾದವಾ..?' ವಿಸ್ಮಯದಿಂದ ಕೇಳಿದ

' ಹೌದು ವಿಷಾದವೇ... ಆ ದಿನಗಳಲ್ಲಿ ರಾಜವೈದ್ಯರು ಪರೀಕ್ಷೆ ಮಾಡದೆ ಚಕ್ರವರ್ತಿಗೆ ಆಹಾರ ನೀಡುತ್ತಿದ್ದವರಲ್ಲ, ಆಂತರಿಕ ಭದ್ರತಾ ಸಿಬ್ಬಂದಿ, ಈ ವಿಷಯದಲ್ಲಿ ಚಾಣಕ್ಯ ತುಂಬಾ ಎಚ್ಚರಿಕೆವಹಿಸುತ್ತಿದ್ದ. ನಮ್ಮ ವಂಶಸ್ಥರ ಮೂಲಕ ಸೂಕ್ಷವಾಗಿ ವಿಷವನ್ನು ಚಕ್ರವರ್ತಿ ತೆಗೆದುಕೊಳ್ಳುತ್ತಿದ್ದ ಆಹಾರದಲ್ಲಿ ಬೆರೆಸುತ್ತಿದ್ದಾಗ ರಾಜವೈದ್ಯ ಚಾಣಕ್ಯನಿಗೆ, ನಮ್ಮ ವಂಶಸ್ಥರಿಗೆ ಬಿಟ್ಟು ಬೇರೆಯವರಿಗೆ ತಿಳಿದಿರಲಿಲ್ಲ. ಅಲ್ಲದೆ ಆಹಾರ ತೆಗೆದುಕೊಳ್ಳುತ್ತಿದ್ದ ಚಕ್ರವರ್ತಿಗೇ ಗೊತ್ತಿರಲಿಲ್ಲ.

ಇದು ಹೀಗಿರಲಾಗಿ ಒಂದುಸಲ ಚಕ್ರವರ್ತಿಯ ಪಟ್ಟಮಹಿಷಿ ' ದುದ್ದರ ' ಅಂತಃಪುರಕ್ಕೆ ಹೋಗಿ ಅಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದುದರಿಂದ, ಚಕ್ರವರ್ತಿ ಆಹ್ವಾನಿ ತೆಗೆದುಕೊಳ್ಳುವ ಸಮಯವಾಗಿದ್ದರಿಂದ, ರಾಜವೈದ್ಯರು ಪರೀಕ್ಷಿಸಿದ ಆಹಾರವನ್ನು ಸಾಕಷ್ಟು ರಕ್ಷಣೆಯೊಂದಿಗೆ ಅಡುಗೆಯವರು ಅಲ್ಲಿಗೇ ತೆಗೆದುಕೊಂಡು ಹೋಗುತ್ತಿದ್ದರು

ತಾನು ತಿನ್ನುತ್ತಿರುವ ಆಹಾರದಲ್ಲಿ ಅತಿ ಸೂಕ್ಷ್ಮವಾಗಿ ವಿಷವನ್ನು ಬೆರೆಸುತ್ತಿದ್ದು, ಇತ್ತ ಚಕ್ರವರ್ತಿಗಾಗಲೀ, ಅತ್ತ ಪಟ್ಟಮಹಿಷಿ ದುದ್ಧರಳಿಗಾಗಲೀ ಗೊತ್ತಿರಲಿಲ್ಲ ಹಾಗಾಗಿ ಚಕ್ರವರ್ತಿಗೆ ಪ್ರತ್ಯೇಕವಾಗಿ ತಯಾರಿ ಮಾಡುವ ಆಹಾರವನ್ನು ಮಹಾರಾಣಿ ಕೂಡಾ ತಿನ್ನುತ್ತಿದ್ದಳು.

ಈ ವಿಷಯ ನಮ್ಮ ವಂಶಸ್ಥರಿಗಾಗಲೀ, ರಾಜವೈದ್ಯರಿಗಾಗಲೀ, ಕೊನೆಗೆ ಚಾಣಕ್ಯನಿಗೆ ಕೂಡಾ ಗೊತ್ತಿಲ್ಲ.

ಕ್ರಮೇಣ ಮಹಾರಾಣಿಯವರ ಶರೀರ ವಿಷಪೂರಿತವಾಗತೊಡಗಿತು. ಆಗ ಮಹಾರಾಣಿಯವರು ಗರ್ಭಧರಿಸಿ ಮಂಡಲದಷ್ಟು ಸಮಯವಾಗಿತ್ತು. ಮಹಾರಾಣಿಯವರು ತೆಗೆದುಕೊಳ್ಳುವ ಆಹಾರದಲ್ಲಿಯ ವಿಷ ಸೂಕ್ಷ್ಮಾತಿ ಸೂಕ್ಷ್ಮವಾಗಿ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗು, ಮೌರ್ಯವಂಶ ವಾರಸುದಾರನ ಶರೀರದೊಳಗೆ ಪ್ರವೇಶಿಸುವುದಕ್ಕೆ ಶುರುವಾಯಿತು. ಇದು ಯಾರಿಗೂ ಗೊತ್ತಿಲ್ಲ. ಅಸಂಕಲ್ಪಿತವಾಗಿಯೇ ನಡೆದುಬಿಡುತ್ತಿತ್ತು...! ಹೇಳುವುದನ್ನು ನಿಲ್ಲಿಸಿ ಪಕ್ಕದಲ್ಲಿದ್ದ ಸೋರೆ ಬುರುಡೆಯಲ್ಲಿದ್ದ ನೀರನ್ನು ಕುಡಿದು, ಪಂಚೆಯಿಂದ ಮೂತಿಯನ್ನು ಒರೆಸಿಕೊಂಡ ತಾಂತಿಯಾ ಧೂಮೆ ' ನನ್ನದೊಂದು ದೊಡ್ಡ ಸಂದೇಹ....'

ಹೇಳಿ ಏನು...?'

' ವಿಷಾಹಾರ ತಿನ್ನುತ್ತಿದ್ದ ಚಕ್ರವರ್ತಿಗಳ ಶರೀರ ವಿಷತುಲ್ಯವಾಗಲಿಲ್ಲ. ಮತ್ತೆ ಆದೇ ಆಹಾರವನ್ನು ತಿನ್ನುತ್ತಿದ್ದ ಮಹಾರಾಣಿಯವರ ಏಕೆ ವಿಷಪೂರಿತವಾಯಿತು?'

'ಒಳ್ಳೆಯ ಸಂದೇಹವೇ.... ಚಕ್ರವರ್ತಿ ವಿಷಾಹಾರ ತಿಂದರೂ, ವಿಷಕನೈಯನ್ನು ರಮಿಸಿದ ನಿರ್ಜೀವಿಯಾಗದೆ ಮಾಡುವ ಪ್ರಕ್ರಿಯೆ ಬೇರೆ. ಈ ಪ್ರಕ್ರಿಯೆಯಲ್ಲಿ

ವಿವಿಧ ಹಂತಗಳಿರುತ್ತವೆ. ಪಾಲಿಸುವ ನಿಯಮಗಳು ಬೇರೆ. ಆ ನಿಯಮಗಳನ್ನು ಪಾಲಿಸಿದ ಮೇಲೇ, ಚಕ್ರವರ್ತಿ ತೆಗೆದುಕೊಳ್ಳುವ ಆಹಾರದಲ್ಲಿ ವಿಷವನ್ನು ಬೆರೆಸುವ ಪ್ರಕ್ರಿಯೆ ನಡೆಯುತ್ತದೆ.

ಮಹಾರಾಣಿಯವರು ಆ ಯಾವ ನಿಯಮಗಳನ್ನು ಪಾಲಿಸದೇನೇ ವಿಷಾಹಾರವನ್ನು ತೆಗೆದುಕೊಳ್ಳಲು ಆರಂಭಿಸಿದರು. ಒಬ್ಬ ವ್ಯಕ್ತಿ ವಿಷಾಹಾರವನ್ನು ಎದುರಿಸುವುದು ಬೇರೆ. ಶರೀರ ವಿಷಪೂರಿತವಾಗುವುದು ಬೇರೆ.....'

' ಆರ್ಥವಾಯಿತು. ವಿಷಪೂರಿತವಾದ ಮಹಾರಾಣಿಯವರಗೇನಾಯಿತು ?' ಕುತೂಹಲವನ್ನು ತಡೆದುಕೊಳ್ಳಲಾಗದೆ ಕೇಳಿದ ಭೀಕ್ಯಾ.

ಚಕ್ರವರ್ತಿ ಪ್ರತಿದಿನವೂ ಮಹಾರಾಣಿಯವರ ಅಂತಃಪುರಕ್ಕೆ ಹೋಗುವುದು, ಆಲೇ ಊಟ ಮಾಡುವುದು ಅಭ್ಯಾಸವಾಯಿತು. ಹಾಗಾಗಿ ಮಹಾರಾಣಿಯವರ ಶರೀರ ವಿಷತುಲ್ಕವಾಗಿ ಆಕೆಗೆ ಒಂಭತ್ತು ತಿಂಗಳಾಗುವ ವೇಳೆಗೆ ತೀವ್ರ ಸ್ಥಾಯಿ ತಲುಪಿತು. ಒಂದು ದಿನ ಇದ್ದಕ್ಕಿದ್ದಂತೆ ಮಹಾರಾಣಿಯವರು ಎಚ್ಚರ ತಪ್ಪಿ ಬಿದ್ದರು. ಕೂಡಲೇ ಅಪ್ರಮತ್ತನಾದ ಚಕ್ರವರ್ತಿ ಉಪಚಾರ ಚರ್ಯೆಗಳನ್ನು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಮಹಾರಾಣಿಯವರು ಚೇತರಿಸಿಕೊಂಡರು. ಏಕೋ ಚಕ್ರವರ್ತಿನ ಮಹಾರಾಣಿಯವರ ಮುಖದೆಡೆಗೆ ಸೂಕ್ಷ್ಮವಾಗಿ ನೋಡಿ ಬೆಚ್ಚಿ ಬಿದ್ದರು, ಠಾಣೆಯವರ ಕಣ್ಣುಗಳು ನೀಲಿ ಬಣ್ಣದಿಂದ ಹೊಳೆಯುತ್ತಿತ್ತು. ಆ ವಸ್ತುವನ್ನು ನಂಬಲಾರದವರಂತೆ ತೆರೆದು, ತೆರೆದು ನೋಡಿದರು. ತಮ್ಮ ಅನುಮಾನ ನಿಜವೆಂದು ತಿಳಿದುಕೊಂಡು ದಿಗ್ಧಾಂತಿಗೊಳಗಾದರು ಮಹಾರಾಜರು.

ಕೂಡಲೇ ಪಕ್ಕದಲ್ಲೇ ಇದ್ದು ಎಚ್ಚರಿಕೆ ಗಂಟೆಯನ್ನು ಬಾರಿಸಿದರು. ಪರಿಚಾರಕರು ಓಡೋಡಿ ಬಂದರು. ತಕ್ಷಣ ಅಂತಃಪುರ ವೈದ್ಯರನ್ನು ಕರೆತರುವಂತೆ ಆಜ್ಞೆ ಮಾಡಿದರು. ಕೆಲಕ್ಷಣಗಳಲ್ಲೇ ಅಂತಃಪುರದ ವೈದ್ಯ ರಾಜರ ಮುಂದೆ ಬಂದು ನಿಂತ ವಿನಮ್ರತೆಯಿಂದ.

ರಾಜರು ನಡೆದದ್ದನ್ನು ಹೇಳಿದರು. ಅಂತಃಪುರ ವೈದ್ಯ ರಾಣಿಯವರ ಬಳಿಗೆ ಬಂದು ಅವರ ಕಣ್ಣುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ. ನಾಡಿ ನೋಡಿದ. ಅಷ್ಟೇ-ಕ್ಷಣದಲ್ಲೇ ಎಲ್ಲಾ ಗ್ರಹಿಸಿದ. ಆದರೆ ಹೇಳಲು ಹಿಂದೆಗೆಯುತ್ತಾ ಸುಮ್ಮನಾದ.

' ಹೇಳಿ.... ಸಂಕೋಚ ಬೇಡ' ಎಂದು ರಾಜರು ಧೈರ್ಯ ಹೇಳಿದ ಮೇಲೆ- ಅಂತಃಪುರ ವೈದ್ಯ ಹೇಳಲಾರಂಭಿಸಿದ.

( ಇನ್ನೂ ಇದೆ... )

📙 ಪೂರ್ವಜನ್ಮ ಪಾಪಂ``
✒️ *ಸೂರ್ಯ‌ದೇವರ ರಾಮ್ ಮೋಹನರಾವ್*
📝 _ರಾಜಾ ಚೆಂಡೂರ್_
🏹 ~ಕೃಷ್ಣ ಚೇತನ~ 📚

🏹 ಕೃಷ್ಣ ಚೇತನ ಲೋಕ 🌎

14 Jan, 05:32


ಮಕರ ಸಂಕ್ರಾಂತಿಯ ವೈಶಿಷ್ಟ್ಯ

🏹 ಕೃಷ್ಣ ಚೇತನ ಲೋಕ 🌎

14 Jan, 05:22


🙏 ನಮಸ್ಕಾರ 🙏

🏹 ಕೃಷ್ಣ ಚೇತನ ಲೋಕ 🌎

14 Jan, 05:20


https://t.me/kcmwindia1/3308

🏹 ಕೃಷ್ಣ ಚೇತನ ಲೋಕ 🌎

14 Jan, 03:03


https://t.me/kcmwindia1/3297

🏹 ಕೃಷ್ಣ ಚೇತನ ಲೋಕ 🌎

14 Jan, 02:33


Part 16 - ಸಂಬ್ರಮ, ಅಹಂಕಾರದಲ್ಲಿ ಸತ್ಯದ ನಿಲುವನ್ನು ಮರೆಯದಿರಿ ಬಸವಣ್ಣವರ ವಚನಗಳು - 7 Dr. Gururaj Karajagi.mp3

🏹 ಕೃಷ್ಣ ಚೇತನ ಲೋಕ 🌎

13 Jan, 08:45


Man had an edge over other animals and Conquered the earth with his only Power I That Power is called...

' REASONING '

✒️ Yandamoori Veerendranath

🏹 ಕೃಷ್ಣ ಚೇತನ ಲೋಕ 🌎

12 Jan, 08:18


*ಕೃಷ್ಣ ಚೇತನ* : ಮಸ್ತ ಸೆಲ್ಫಿ ಬಂತ್ ಅಲಾ

*ಜ್ಯೋತಿ ಉಮೇಶ್* : ಹ್ಞುಂ

*ಕೃಷ್ಣ ಚೇತನ* : ಲಿಪ್ಟಿಕ್ ಅಂತೂ ಬಾರಿ ಐತಿ

*ಜ್ಯೋತಿ ಉಮೇಶ್* : ಥ್ಯಾಂಕ್ಸ್

*ಕೃಷ್ಣ ಚೇತನ* : ಫೇಸ್ಬುಕ್ ಸ್ಟೇಟಸ್ ಅಂತು ಖತರನಾಕ

*ಜ್ಯೋತಿ ಉಮೇಶ್* : ಥ್ಯಾಂಕ್ಸ್ ಕಿಸ್ನಾ...

*ಕೃಷ್ಣ ಚೇತನ* : ಆದರೂ ಎನ್ ಚಂದ ಕಾಣವಲ್ಲಿ ಅಕ್ಕೋ...🤭

*ಜ್ಯೋತಿ ಉಮೇಶ್* : 😬😬😬😬😬

🏹 ಕೃಷ್ಣ ಚೇತನ ಲೋಕ 🌎

12 Jan, 06:44


ವಿಷಕನ್ಯ ಪ್ರಯೋಗ ಸಾಧ್ಯವಾ ? '

' ಪ್ರಾಚೀನ ಚರಿತ್ರೆಯಲ್ಲಿ ಎಂದೋ ಸಮಾಧಿಯಾದ ವಿಷಕನ್ಯೆ ಪ್ರಯೋಗ ಈಗಲೂ ಎಲ್ಲೋ ಒಂದು ಕಡೆ ಜೀವಂತವಾಗಿರುತ್ತದೆಂದು ನನ್ನ ನಂಬಿಕೆ. ಕಲ್ಕಿ ಪುರಾಣದಲ್ಲಿ ವಿಷಕನ್ಯೆ ಬಗ್ಗೆ ಉಲ್ಲೇಖವಿದೆ.

ಹಾಗೆಯೇ ಕೌಟಿಲ್ಯ ಬರೆದ ಅರ್ಥಶಾಸ್ತ್ರದಲ್ಲಿ ಕೂಡಾ ಅದರ ಪ್ರಸ್ತಾಪವಿದೆ. ಕಲ್ಕಿ ಪುರಾಣ ...... A Great Mythology mentions that they can kill a person just by looking at them. ಮೊದಲ ವಿಷಕನ್ಯೆ ಯಾರು ಗೊತ್ತಾ ?

ಸುಲೋಚನ.... ಗಂಧರ್ವನಾದ ಚಿತ್ರಗ್ರೀವನ ಪತ್ನಿ.

DAMSELL ಅಂದರೆ ಗೊತ್ತಾ ? ಸಂಸ್ಕೃತದಲ್ಲಿ ವಿಷಕನ್ಯೆ ಎಂದರ್ಥ.

A yount girl was raised on a carefully crafted diet or poison and antidote from young age. A practice referred 'MITHRI- DATISM.'

ವಿಷಕನ್ಯೆ ಒಂದು ಸಲ ಬೇರೆಯವರನ್ನು ಸ್ಪರ್ಶಿಸಿದರೆ ಸಾಕು ಆ ವ್ಯಕ್ತಿಯ ಸಾವು ಖಚಿತ.

ಬೇಕಾದ್ದು ಛಲ, ಆಮೇಲೆ ರೋಷ, ನಿರಂತರ ತಪನ, ಶ್ರಮ.

ಭರತ ಉಪಖಂಡದಲ್ಲಿ ಅತಿದೊಡ್ಡ ಸಾಮ್ರಾಜ್ಯಕ್ಕೆ ಚಕ್ರವರ್ತಿ ಚಂದ್ರಗುಪ್ತ ಮೌರ್ಯ, ಅಷ್ಟೇ ಅಲ್ಲ ಭರತಖಂಡದಲ್ಲೇ ಮೊಟ್ಟಮೊದಲ ಚಕ್ರವರ್ತಿ ಕೂಡಾ ಅವನೇ.

ಕೆಳಗಿನ ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾದಿಂದ ಹಿಮಾಲಯದವರೆಗೂ ಅವನ ಸಾಮ್ರಾಜ್ಯ ವಿಸ್ತರಿಸಲ್ಪಟ್ಟಿತ್ತು. ಅಂತಹ ಸುವಿಶಾಲವಾದ ಸಾಮ್ರಾಜ್ಯವನ್ನು ಪರಿಪಾಲಿಸುವುದು ಸುಲಭದ ವಿಷಯವಲ್ಲ, ಸಾವಿರಾರು ಶತ್ರುಗಳು ಅನುಕ್ಷಣವೂ ಹೊಂಚುಹಾಕುತ್ತಿರುತ್ತಾರೆ. ಅದಕ್ಕೆ ಆಗ ವಿಷಕನ್ನೆಯೆಂಬ ಪ್ರಯೋಗವಿತ್ತು ಅನ್ನುತ್ತಾರೆ.

ಆದರೆ ಚಾರಿತ್ರಿಕ ಆಧಾರದ ಮೇಲೆ, ಮೊಟ್ಟಮೊದಲ ಸಲ ವಿಷಕನೈಯನ್ನು ತಯಾರು ಮಾಡಿದ್ದು ಮಾತ್ರಾ ನಂದ ವಂಶ ಪ್ರಧಾನಮಂತ್ರಿ, ಸಲಹೆಗಾರನಾದ ರಾಕ್ಷಸಮಂತ್ರಿ,

The Visha Kanya were young women reportedly used as assasing during the times of the ancient India. Their body and blood were purported poisons to other humans...

ಶತ್ರುಗಳನ್ನು ನಿಶ್ಯಬ್ದವಾಗಿ, ಮೂರನೆ ಕಣ್ಣಿಗೆ ಕಾಣದಂತೆ, ಅನುಮಾನ ಬರದಂತೆ ಮುಗಿಸಲು ವಿಷಕನ್ಯೆಯರನ್ನು ತಯಾರು ಮಾಡಿ ಸಿದ್ಧವಾಗಿರಿಸಿಕೊಳ್ಳುತ್ತಿದ್ದರು. ಈ ವಿಧಾನದ ಬಗ್ಗೆ ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಬರೆದಂತೆ ಚಾರಿತ್ರಿಕ ಆಧಾರಗಳಿವೆ. ಆದರೆ ಅತ್ತ ಕಲ್ಕಿ ಪುರಾಣವಾಗಲೀ, ಇತ್ತ ಕೌಟಿಲ್ಯನ ಅರ್ಥಶಾಸ್ತ್ರವಾಗಲೀ ಕೆಲವು ನೂರು ವರ್ಷಗಳ ಹಿಂದೆಯೇ ಸಿಗಲಿಲ್ಲ.

ಆ ಗ್ರಂಥಗಳು ತಕ್ಷಶಿಲ ವಿಶ್ವವಿದ್ಯಾಲಯದಲ್ಲಿ ಸಿಗಬಹುದೆಂದು ಹೇಳಿದ್ದನ್ನು ಕೇಳಿದ್ದೇನೆ. ಅಷ್ಟೇ ಆಗಲೀ ಇರುವರೆವಿಗೂ ಯಾರಿಗೂ ಸಿಕ್ಕಿದಂತಿಲ್ಲ. ಅಲ್ಲದೆ ಪ್ರಪಂಚದಲ್ಲೇ ಮೊಟ್ಟಮೊದಲದಾದ ತಕ್ಷಶಿಲ ವಿಶ್ವವಿದ್ಯಾಲಯ ಈಗ ಪಾಕೀಸ್ಥಾನದಲ್ಲಿದೆ. ಅದರ ಮೂಲಕ ಕೂಡಾ ಉತ್ಸಾಹಿಗಳಾರೂ ಆ ಪ್ರಯತ್ನ ಮಾಡಿದಂತಿಲ್ಲ.'

( ಇನ್ನೂ ಇದೆ... )

📙 ಪೂರ್ವಜನ್ಮ ಪಾಪಂ``
✒️ *ಸೂರ್ಯ‌ದೇವರ ರಾಮ್ ಮೋಹನರಾವ್*
📝 _ರಾಜಾ ಚೆಂಡೂರ್_
🏹 ~ಕೃಷ್ಣ ಚೇತನ~ 📚

🏹 ಕೃಷ್ಣ ಚೇತನ ಲೋಕ 🌎

12 Jan, 02:34


*Part 14 - ಬಸವಣ್ಣವರ ವಚನಗಳು - 5 ಕುಲ ಕುಲವೆಂದು ಹೊಡೆದಾಡದಿರಿ Dr. Gururaj Karajagi*

🏹 ಕೃಷ್ಣ ಚೇತನ ಲೋಕ 🌎

12 Jan, 02:30


ಅಶ್ವಪತಿಯ ವಿಡಂಬನೆ.

🏹 ಕೃಷ್ಣ ಚೇತನ ಲೋಕ 🌎

12 Jan, 02:24


Israel does not believe in wasting time and going to courts for removing loudspeakers. 😂

🏹 ಕೃಷ್ಣ ಚೇತನ ಲೋಕ 🌎

11 Jan, 18:22


Viduthalai Part 2 ( 2024 ) Tamil _kcmwindia1.mkv

🏹 ಕೃಷ್ಣ ಚೇತನ ಲೋಕ 🌎

11 Jan, 18:21


Viduthalai Part - 1 Director's Cut ( 2024 ) Tamil _kcmwindia1.mkv

🏹 ಕೃಷ್ಣ ಚೇತನ ಲೋಕ 🌎

11 Jan, 12:46


🤭🤭🤭🤭🤭🤭🤭

🏹 ಕೃಷ್ಣ ಚೇತನ ಲೋಕ 🌎

11 Jan, 08:01


ವೈದ್ಯರು ಹೀಗೂ ಇದ್ದಾರೆ...🙏🙏💐

🏹 ಕೃಷ್ಣ ಚೇತನ ಲೋಕ 🌎

11 Jan, 07:00


https://chat.whatsapp.com/IASQNLMACyH4t0oNkLAce5

🏹 ಕೃಷ್ಣ ಚೇತನ ಲೋಕ 🌎

08 Jan, 12:11


ಭಯಂಕರ ಚಳಿಗೆ ಬೆಂಕಿಗೆ ಬಿದ್ದಾದ್ರೂ ಸರಿಯೇ... ಚಳಿಯನ್ನು ಹೋಗಲಾಡಿಸಕೊಳ್ಳಬೇಕು ಅಂತ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಯೋಚಿಸುತ್ತದೆ !...
ಅಗ್ನಿಗೆ ಅಂಜದ ಆಡು !!

🏹 ಕೃಷ್ಣ ಚೇತನ ಲೋಕ 🌎

08 Jan, 10:57


https://youtu.be/WnPnAYVD6UA?si=Q63XZjhUji5FPq0E

🏹 ಕೃಷ್ಣ ಚೇತನ ಲೋಕ 🌎

08 Jan, 02:28


ಕ್ಯಾನ್ಸರ್‌ - ಸಾಮಾಜಿಕ ಶಸ್ತ್ರಚಿಕಿತ್ಸಾ ಅರಿವು -
ಡಾ.ರಾಜಶೇಖರ್ ಎಸ್ ಜಾಕಾ
ಡಾ.ನಟರಾಜ್ ನಾಯ್ಡು, ಡಾ.ವಿಷ್ಣು ಕುರಪಾದ್
_ಕೃಷ್ಣ ಚೇತನ.mp4

🏹 ಕೃಷ್ಣ ಚೇತನ ಲೋಕ 🌎

08 Jan, 02:23


ಕ್ಯಾನ್ಸರ್‌ - ಸಾಮಾಜಿಕ ಶಸ್ತ್ರಚಿಕಿತ್ಸಾ ಅರಿವು -
ಡಾ.ರಾಜಶೇಖರ್ ಎಸ್ ಜಾಕಾ
ಡಾ.ನಟರಾಜ್ ನಾಯ್ಡು, ಡಾ.ವಿಷ್ಣು ಕುರಪಾದ್
_ಕೃಷ್ಣ ಚೇತನ.mp4

🏹 ಕೃಷ್ಣ ಚೇತನ ಲೋಕ 🌎

08 Jan, 02:10


🎵 ~ಸಿಕ್ಕ ಸಿಕ್ಕ ಹುಡುಗಿಯರನ್ನ ಸಿಕ್ಕಪಟ್ಟೆ...~ 🎶

🏹 ಕೃಷ್ಣ ಚೇತನ ಲೋಕ 🌎

08 Jan, 01:39


ಅಶ್ವಪತಿಯ ವಿಡಂಬನೆ

🏹 ಕೃಷ್ಣ ಚೇತನ ಲೋಕ 🌎

05 Jan, 04:24


🤣🤣🤣🤣🤣

🏹 ಕೃಷ್ಣ ಚೇತನ ಲೋಕ 🌎

05 Jan, 03:44


ಇಲ್ಲಿ ಯಾರು ನಮ್ಮವರು ಅಂತ ಇರಲ್ಲ...!


ಸ್ವಂತ ನಮ್ ಸಾಮಾನ್ ಕೂಡ ಹುಡುಗಿಯರನ್ನು  ನೋಡಿದ ಮೇಲೆಯೇ ಎದ್ದು ನಿಲ್ಲುತ್ತೆ.. 😆😆😆

🏹 ಕೃಷ್ಣ ಚೇತನ ಲೋಕ 🌎

05 Jan, 01:25


ದಶರಥನ ಪುತ್ರ ವ್ಯಾಮೋಹ.

🏹 ಕೃಷ್ಣ ಚೇತನ ಲೋಕ 🌎

05 Jan, 00:51


*Part 7 - Dr. Gururaj Karajagi talking about Vishwaguru Basavanna ವಿಶ್ವಗುರು ಬಸವಣ್ಣ - Copy*

🏹 ಕೃಷ್ಣ ಚೇತನ ಲೋಕ 🌎

05 Jan, 00:38


🎵 ಬಾರೇ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ...🎶 🤭

🏹 ಕೃಷ್ಣ ಚೇತನ 🤭

🏹 ಕೃಷ್ಣ ಚೇತನ ಲೋಕ 🌎

05 Jan, 00:32


ಯಾವ ನಕ್ಷತ್ರದವರು ಯಾವ ಹೆಸರಿನ ನಾಗದೇವತೆಯನ್ನು ಪೂಜೆ ಮಾಡಿದರೆ ಒಳ್ಳೆಯದು.

ಯಾವ ನಕ್ಷತ್ರದವರು ಯಾವ ಹೆಸರಿನ ನಾಗದೇವತೆಯನ್ನು ಪೂಜೆ ಮಾಡಿದರೆ ಒಳ್ಳೆಯದು

🌷 ಅಶ್ವಿನಿ ಮತ್ತು ಚಿತ್ತಾ ನಕ್ಷತ್ರದಲ್ಲಿ ಜನಿಸಿದವರು 'ಕಂಬಂ' ಎಂಬ ನಾಗರಾಜನನ್ನು ಪೂಜೆ ಮಾಡಬೇಕು.

🌷 ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು 'ವಾಸುಕಿ' ಎಂಬ ಸರ್ಪವನ್ನು ಪೂಜೆ ಮಾಡಬೇಕು.

🌷 ಅನುರಾಧ ನಕ್ಷತ್ರದಲ್ಲಿ ಜನಿಸಿದವರು 'ತಕ್ಷಕ' ಎಂಬ ಸರ್ಪವನ್ನು ಪೂಜೆ ಮಾಡಿ ಆರಾಧಿಸಬೇಕು.

🌷 ಕೃತಿಕಾ ಮತ್ತು ಭರಣಿ ನಕ್ಷತ್ರದಲ್ಲಿ ಜನಿಸಿದವರು 'ಶಂಖಪಾಲ' ಎಂಬ ಸರ್ಪವನ್ನು ಪೂಜೆ ಮಾಡಬೇಕು.

🌷 ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರು 'ಐರಾವತ' ಎಂಬ ನಾಗರಾಜನನ್ನು ಪೂಜೆ ಮಾಡಬೇಕು.

🌷 ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು 'ಶಂಖಪಾಲ' ಎಂಬ ಸರ್ಪವನ್ನು ಪೂಜೆ ಮಾಡಬೇಕು.

🌷 ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಜನಿಸಿದವರು 'ಕಾರ್ಕೋಟಕ'ಎಂಬ ಸರ್ಪವನ್ನು ಪೂಜೆ ಮಾಡಬೇಕು.

🌷 ಶ್ರವಣ ನಕ್ಷತ್ರದಲ್ಲಿ ಜನಿಸಿದವರು 'ಅಶ್ವ ಧಾರ' ಎಂಬ ನಾಗದೇವತೆಯನ್ನು ಪೂಜೆ ಮಾಡಬೇಕು.

🌷 ನಕ್ಷತ್ರಗಳಲ್ಲಿ ಒಟ್ಟಾರೆ 27 ನಕ್ಷತ್ರಗಳಿದ್ದು, ಈ ಕೆಲವು ನಕ್ಷತ್ರದಲ್ಲಿ ಜನಿಸಿದವರಿಗೆ ಮಾತ್ರವೇ ಸಾಮಾನ್ಯವಾಗಿ ಕಾಳಸರ್ಪ ದೋಷಗಳು ಅಧಿಕವಾಗಿ ಕಂಡುಬರುತ್ತವೆ.

🌷 ಆದ್ದರಿಂದ ಈ ನಕ್ಷತ್ರಗಳಲ್ಲಿ ಜನಿಸಿದವರು ಖಂಡಿತವಾಗಿಯೂ ಸರ್ಪ ದೇವತೆಗಳನ್ನು ಮತ್ತು ಸರ್ಪಗಳನ್ನು ಪೂಜೆ ಮಾಡಬೇಕು, ಆರಾಧಿಸಬೇಕು. ಆಗಲೇ ಸರ್ಪದೋಷದ ಪ್ರಮಾಣವೂ ಕಡಿಮೆಯಾಗುವುದು.

ಸರ್ಪ ಗಾಯತ್ರಿ ಮಂತ್ರ - ಈ ಮಂತ್ರವನ್ನು ಜಪಿಸಿದರೆ ಒಳ್ಳೆಯದು

'ಓಂ ನಾಗರಾಜಾಯ ವಿದ್ಮಹೇ, ಛಕ್ಯೂಶಸ್ರವನಾಯ ಧೀಮಹಿ, ತನ್ನೋ ಸರ್ಪ ಪ್ರಚೋದಯಾತ್'

*ಮಂಜುಸ್ವಾಮಿ*ಹಿರೇಮಠ*

https://t.me/krishnachetanaloka1/20970

🏹 ಕೃಷ್ಣ ಚೇತನ 🙏

🏹 ಕೃಷ್ಣ ಚೇತನ ಲೋಕ 🌎

04 Jan, 13:13


ಸೌಮ್ಯ : ಏನ್ರಿ ಒಂದು ಪ್ರಶ್ನೆ ಕೇಳ್ತಾ? ನೀವು ರೋಡ್‌ನಲ್ಲಿ ಹೋಗ್ತಾ ಇದ್ದೀರಾ ಒಬ್ಬ ಸುಂದರ ಹುಡುಗಿ ನಿಮ್ಮನ್ನ ನೋಡಿ ನಕ್ಕರೆ ಆ ಹುಡುಗಿಯನ್ನು ನೋಡಿ ನೀವು ಏನ್ಮಾಡ್ತೀರಾ!!

ವೇಣುಗೋಪಾಲ : ಪ್ರಶ್ನೆ ಕ್ಲಿಯರಾಗಿ ಇಲ್ಲ.

ಸೌಮ್ಯ : ಯಾಕೆ ಇಲ್ಲ.

ವೇಣುಗೋಪಾಲ : ಆಗ ನೀನು ಎಲ್ಲಿರ್ತಿಯಾ ಅಂತ ಹೇಳಬೇಕು.

🏹 ಕೃಷ್ಣ ಚೇತನ ಲೋಕ 🌎

04 Jan, 07:29


ಈ ಚಿಕ್ಕ ವಯಸ್ಸಿನಲ್ಲೇ ಚೆನ್ನಾಗಿ ಮೋಸ ಮಾಡುವುದು ಹೇಗೆ ಅಂತ ಕರಗತವಾಗಿರುವ.. ಇರ್ಫಾನ್...

🏹 ಕೃಷ್ಣ ಚೇತನ ಲೋಕ 🌎

22 Nov, 05:33


ಈಗ ಜ್ಞಾನೋದಯ ಆಯ್ತು.... ಸ್ವಾಭಿಮಾನದ ಶತಮಾನದ ಹೆಣ್ಣು ಮಕ್ಲಿಗೆ... 🙄

🏹 ಕೃಷ್ಣ ಚೇತನ ಲೋಕ 🌎

22 Nov, 02:51


https://t.me/kcmwindia1/2821

🏹 ಕೃಷ್ಣ ಚೇತನ ಲೋಕ 🌎

22 Nov, 02:14


https://t.me/kcmwindia1/2818

🏹 ಕೃಷ್ಣ ಚೇತನ ಲೋಕ 🌎

22 Nov, 01:23


*Part 6 - ಬುಧ್ಧನ ಜನನ _ ಗೌತಮ್ ಬುದ್ಧ part-6 _ Dr Gururaj Karajagi*

🏹 ಕೃಷ್ಣ ಚೇತನ ಲೋಕ 🌎

22 Nov, 00:53


https://youtu.be/3bL5023MlsI?si=W9P9uyaldQVqP2Us

🏹 ಕೃಷ್ಣ ಚೇತನ ಲೋಕ 🌎

21 Nov, 16:19


*Student of the year 2*

https://pixeldra.in/api/file/hkamt38x?download

🏹 ಕೃಷ್ಣ ಚೇತನ ಲೋಕ 🌎

21 Nov, 15:03


🏹 ಕೃಷ್ಣ ಚೇತನ 🇮🇳 ರಿಂದ ದೃಶ್ಯ

🏹 ಕೃಷ್ಣ ಚೇತನ ಲೋಕ 🌎

21 Nov, 14:40


*ತಮ್ಮ ನೆಚ್ಚಿನ ಥಿಯೇಟರ್ ನಲ್ಲಿ ಈ ಸಿನಿಮಾ ತಪ್ಪದೇ ನೋಡಿ.*

🏹 ಕೃಷ್ಣ ಚೇತನ ಲೋಕ 🌎

13 Nov, 16:15


ಹಳೆಯ ಜೋಡು
- ನಾಟಕ

🏹 ಕೃಷ್ಣ ಚೇತನ ಲೋಕ 🌎

13 Nov, 16:13


ಹಳೆಯ ಜೋಡು
- ನಾಟಕ

🏹 ಕೃಷ್ಣ ಚೇತನ ಲೋಕ 🌎

13 Nov, 13:08


ಕವಿರತ್ನ ಕಾಳಿದಾಸ ಚಿತ್ರದ ಹಾಡು ಈ ರೀತಿ ಅದ್ಬುತ ಹೊಸರೀತಿಯ ಸಂಯೋಜನೆ. ಕೇಳಿ ಆನಂದಿಸಿ.

🏹 ಕೃಷ್ಣ ಚೇತನ ಲೋಕ 🌎

13 Nov, 06:05


ನದಿಯನ್ನು ವಂದಿಸುವುದು ಎಲ್ಲರ ಕರ್ತವ್ಯ.

🏹 ಕೃಷ್ಣ ಚೇತನ ಲೋಕ 🌎

13 Nov, 05:21


ಲೇಡೀಸ್‌ ಹಾಸ್ಟೆಲ್‌ ಕಾದಂಬರಿಯ ಹಿನ್ನೆಲೆಯ ಬಗ್ಗೆ ಡಾ.ಯಂಡಮೂರಿ ವೀರೇಂದ್ರನಾಥ್

ಲೇಡೀಸ್ ಹಾಸ್ಟೆಲ್‌ ಉದ್ಭವಿಸಲು ಒಂದು ಘಟನೆ ನೆರವು ನೀಡಿತು. ಸುಮಾರು ನಲವತ್ತು ವರ್ಷಗಳ ಕೆಳಗೆ ಒಂದು ರಾತ್ರಿ ಎಂಟು ಗಂಟೆಗೆ ನಾನು, ನಟಕಿರೀಟಿ ರಾಜೇಂದ್ರಪ್ರಸಾದ್‌ ಯಾರನ್ನೋ ಭೇಟಿಯಾಗಲು ಕಾಲೇಜೊಂದಕ್ಕೆ ಹೋದೆವು. ಕಾಲೇಜು ಕಟ್ಟಡ, ಪಕ್ಕದಲ್ಲಿಯೇ ಸ್ವಲ್ಪ ಮೈದಾನ... ಅದಕ್ಕೆ ಆ ಕಡೆ ಒಂದು ಲೇಡೀಸ್‌ ಹಾಸ್ಟೆಲ್‌ ಇತ್ತು.

ಸರಿ. ಸಿನಿಮಾ ನಟ ಎಂದೊಡನೆ ಜನರು ಬರುವರಲ್ಲವೇ. ಬಹಳ ಕತ್ತಲೆ ಇದ್ದಿದ್ದರಿಂದ ಬಹಳ ಜನ ಬರಲಿಲ್ಲ. ಅವರೊಂದಿಗೆ ಪ್ರಸಾದ್‌ ಮಾತಾಡುತ್ತಾ ಇದಾಗ ನನ್ನ ದೃಷ್ಟಿ ಲೇಡೀಸ್‌ ಹಾಸ್ಟೆಲ್‌ ಕಾಂಪೌಂಡಿನ ಪಕ್ಕದಲ್ಲಿ ಅಲುಗಾಡುತ್ತಿದ್ದ ಪೊದೆಗಳ ಮೇಲೆ ಬಿದ್ದಿತು. ಅದರಿಂದ ಎರಡು ಮೂರು ಜೋಡಿಗಳು ಹೊರಗೆ ಬಂದವು. ಇನ್ನೂ ಮೂರು ನಾಲ್ಕು ಜೋಡಿಗಳು ಪೊದೆಗಳ ಹಿಂದೆ ಇದ್ದಂತೆ ಅಸ್ಪಷ್ಟವಾಗಿ ತಿಳಿಯಿತು. ಅದೆಲ್ಲವೂ ಸಾಧಾರಣ ವ್ಯವಹಾರವೆಂಬಂತೆ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಎರಡು ದಿನಗಳ ನಂತರ ನಾನು ಆ ಹಾಸ್ಟೆಲ್‌ ವಾರ್ಡನ್‌‌ರನ್ನು ಭೇಟಿಯಾಗಿ ನನ್ನಕಥಾಂಶವನ್ನು ಹೇಳಿದೆ. “ಕಾಲೇಜು ವಿವರಗಳನ್ನು ಹೊರಹಾಕದೇ ಬರೆಯುವಿರೆಂದು ಮಾತು ಕೊಟ್ಟರೆ ಎಲ್ಲ ರೀತಿಯಲ್ಲಿಯೂ ಸಹಕರಿಸುತ್ತೇನೆ. ಇಲ್ಲಿ ನಡೆಯುತ್ತಿರುವುದು ನನಗೇ ಮೈ ಕಂಪನ ತರುತ್ತದೆ. ಆದರೆ ನಾವೇನೂ ಮಾಡಲಾರೆವು. ಆ ಪೊದೆಗಳನ್ನು ಕಿತ್ತುಹಾಕೋಣವೆಂದುಕೊಂಡ ನನ್ನನ್ನು ಈ ಪದವಿಯಿಂದ ಓಡಿಸುವವರೆಗೂ ಕೆಲವು ವಿದ್ಯಾರ್ಥಿಗಳು ಸುಮ್ಮನಿರಲಿಲ್ಲ. ಎರಡು ಮೂರು ದಿನಗಳಲ್ಲಿ ಹೊಣೆಗಾರಿಕೆಯನ್ನು ಮತ್ತೊಬ್ಬರಿಗೆ ಒಪ್ಪಿಸಿ ಹೊರಟುಹೋಗುತ್ತಿದ್ದೇನೆ,” ಎಂದರಾಕೆ.

ಆಗ ಸಿದ್ಧವಾಯಿತು ಕಾದಂಬರಿ.

ಈ ಕಾಲೇಜು ಸರಿಯಾಗಿ ನಗರದ ನಡುವೆ ಇದೆ. ನಲವತ್ತು ವರ್ಷಗಳ ಹಿಂದಿನ ಪರಿಸ್ಥಿತಿ ಇದು. ಈಗ ಹೇಗಿದೆಯೆಂದು ತಿಳಿಯದು. ಇದು ಈ ಕಾದಂಬರಿಯ ಉದ್ಭವದ ಚರಿತ್ರೆ.

- ಯಂಡಮೂರಿ ವೀರೇಂದ್ರನಾಥ್

🏹 ಕೃಷ್ಣ ಚೇತನ ಲೋಕ 🌎

13 Nov, 05:07


Never eat with spoon... Here see what represents what 👆

🏹 ಕೃಷ್ಣ ಚೇತನ ಲೋಕ 🌎

26 Oct, 05:32


🤣🤣🤣🤣🤣

🏹 ಕೃಷ್ಣ ಚೇತನ ಲೋಕ 🌎

26 Oct, 02:58


https://t.me/kcmwindia1/2515

🏹 ಕೃಷ್ಣ ಚೇತನ ಲೋಕ 🌎

26 Oct, 02:33


https://t.me/kcmwindia1/2505

🏹 ಕೃಷ್ಣ ಚೇತನ ಲೋಕ 🌎

26 Oct, 01:58


https://t.me/kcmwindia1/2512

🏹 ಕೃಷ್ಣ ಚೇತನ ಲೋಕ 🌎

26 Oct, 01:50


Indian philosophy ๒๕ ๘ ๘ limitation. Communication barriers. Language barriers... ಇದನ್ನು Overcome ಮಾಡಿದವರೇ ಇದನ್ನು ಗೌರವಿಸಲು ಸಾಧ್ಯ.

🏹 ಕೃಷ್ಣ ಚೇತನ ಲೋಕ 🌎

26 Oct, 01:20


🤣🤣🤣🤣🤣

🏹 ಕೃಷ್ಣ ಚೇತನ ಲೋಕ 🌎

26 Oct, 01:20


🤣🤣🤣🤣🤣

🏹 ಕೃಷ್ಣ ಚೇತನ ಲೋಕ 🌎

26 Oct, 01:20


ಬೆಳಿಗ್ಗೆ ಎದ್ದು ನನ್ನ ಮುಖನಾ ಕನ್ನಡಿಯಲ್ಲಿ ನೋಡಿದೆ !
ಜ್ಞಾನದೋಯ ಆಗದಿದ್ದರೂ, ನನ್ನ #ಲವರ್ ಯಾಕೆ ಕನ್ನಡಿ ಮುಂದೆ ಗಂಟ್‌ಗಟ್ಲೆ ಇರ್ತಾಳೆ ಅಂತ ನೆನೆದು ನಗು ಬರಲಿಲ್ಲ. ಒಂದು ಕೋತಿಗೆ, ಮತ್ತೊಂದು #ಕೋತಿ ನೇ ಲವ್ ಮಾಡುತ್ತಾ ಅಂತ ಚಕಿತನಾದೆ 😎

🏹 ಕೃಷ್ಣ ಚೇತನ ಲೋಕ 🌎

26 Oct, 00:50


*Part 2 _ ಶ್ರೀ ರಾಮಾನುಜಾಚಾರ್ಯ _ ಉಪನ್ಯಾಸ _ Dr Gururaj Karajagi*

🏹 ಕೃಷ್ಣ ಚೇತನ ಲೋಕ 🌎

25 Oct, 10:34


🇮🇳🙏👌👌👍 *ಅಂತೂ - ಇಂತೂ ಕೊನೆಗೂ ಸಿಕ್ತು ಕ್ರಿಶ್ಚಿಯಾನಿಟಿ ಯ ಅಪ್ಪ ಯಾರೂ ಅಂತ. ಅದುವೇ ನಮ್ಮ "ಹಿಂದುತ್ವ" ದಲ್ಲಿರುವ "ಬ್ರಾಹ್ಮಣ" ಸಮುದಾಯದಿಂದ, ಹೊಡಿರಿ ಚಪ್ಪಾಳೆ ಹಾಗೂ ಇದನ್ನ ಇಡೀ ಪ್ರಪಂಚಕ್ಕೆ ಗೊತ್ತಾಗುವ ಹಾಗೆ ಕಳುಹಿಸಿ,*

🏹 ಕೃಷ್ಣ ಚೇತನ ಲೋಕ 🌎

21 Oct, 09:36


https://t.me/kcmwindia1/2472

🏹 ಕೃಷ್ಣ ಚೇತನ ಲೋಕ 🌎

21 Oct, 08:12


🍿 Series: Snakes & Ladders ( 2024 )
Season: S01 EP ( 01-08 )
🎙 Audio Tami ]+Telugu
Quality: HDRip
#Single_File
♻️JOIN♻️ @ https://t.me/kcmwindia1/2462

🏹 ಕೃಷ್ಣ ಚೇತನ ಲೋಕ 🌎

21 Oct, 03:10


*Part 17 _ ಶ್ರೀ ಮಧ್ವಾಚಾರ್ಯರು _ Dr Gururaj Karajagi*

🏹 ಕೃಷ್ಣ ಚೇತನ ಲೋಕ 🌎

20 Oct, 02:54


https://t.me/kcmwindia1/2457

🏹 ಕೃಷ್ಣ ಚೇತನ ಲೋಕ 🌎

19 Oct, 15:28


https://youtu.be/Br8wFrD72nQ?si=jjxmvR9KJcPONmzv

🏹 ಕೃಷ್ಣ ಚೇತನ ಲೋಕ 🌎

19 Oct, 14:48


🍿 Movie : The Dark Knight ( 2008 )
🎙 Audio : English + Tamil

https://t.me/kcmwindia1/2449

🏹 ಕೃಷ್ಣ ಚೇತನ ಲೋಕ 🌎

19 Oct, 02:21


*Part 15 _ ಶ್ರೀ ಮಧ್ವಾಚಾರ್ಯರು _ Dr Gururaj Karajagi*

🏹 ಕೃಷ್ಣ ಚೇತನ ಲೋಕ 🌎

18 Oct, 12:17


Ten unknown Facts About BSNL

1. The first film ever made was "Roundhay Garden Scene" in 1888, directed by French inventor Louis Le Prince.

2. The first Hollywood film was "The Squaw Man" in 1911, directed by Oscar Apfel and Cecil B. DeMille.

3. The first 3D film was "The Power of Love" in 1922, directed by Nat G. Deverich and Harry K. Fairall.

4. The first film with sound was "The Jazz Singer" in 1927, directed by Alan Crosland.

5. The longest film ever made was "Ambian" in 2016, directed by Anders Weberg, with a runtime of 720 hours.

6. The highest-grossing film of all time is "Avengers: Endgame" in 2019, directed by Anthony and Joe Russo.

7. The most Academy Awards won by a single film is 11, achieved by "Ben-Hur" in 1959, "Titanic" in 1997, and "The Lord of the Rings: The Return of the King" in 2003.

8. The first film to feature a computer-generated image (CGI) was "Westworld" in 1973, directed by Michael Crichton.

9. The first film to use motion capture technology was "The Lord of the Rings: The Fellowship of the Ring" in 2001, directed by Peter Jackson.

10. The highest-paid actor of all time is Keanu Reeves, with a salary of $250 million for "The Matrix" trilogy.Ten unknown Facts About #Films

1. The first film ever made was "Roundhay Garden Scene" in 1888, directed by French inventor Louis Le Prince.

2. The first Hollywood film was "The Squaw Man" in 1911, directed by Oscar Apfel and Cecil B. DeMille.

3. The first 3D film was "The Power of Love" in 1922, directed by Nat G. Deverich and Harry K. Fairall.

4. The first film with sound was "The Jazz Singer" in 1927, directed by Alan Crosland.

5. The longest film ever made was "Ambian" in 2016, directed by Anders Weberg, with a runtime of 720 hours.

6. The highest-grossing film of all time is "Avengers: Endgame" in 2019, directed by Anthony and Joe Russo.

7. The most Academy Awards won by a single film is 11, achieved by "Ben-Hur" in 1959, "Titanic" in 1997, and "The Lord of the Rings: The Return o

🏹 ಕೃಷ್ಣ ಚೇತನ ಲೋಕ 🌎

18 Oct, 08:22


🌻ಒಂದೇ ಚಿತ್ರದ ಗೀತೆಗಳು🌻
ಚಿತ್ರ : ಬಾ ನಲ್ಲೆ ಮಧುಚಂದ್ರಕೆ (1993)
ಸಂಗೀತ : ಹಂಸಲೇಖ

1) ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಸಾಹಿತ್ಯ : ಪ್ರೊ|| ಸಿದ್ದಲಿಂಗಯ್ಯ
ಗಾಯನ : ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ
🌻

2) ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಗಾಯನ : ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ, ಕೆ ಎಸ್ ಚಿತ್ರಾ,
🌻

3) ಓ ಹೋ ಹಿಮಾಲಯ...
ಶೊವನಿಗು ಗಿರಿಜೆಗು ದೇವಾಲಯ ನವ ವಧುವರರಿಗೂ ಪ್ರೇಮಾಲಯ
ಸಾಹಿತ್ಯ : ಹಂಸಲೇಖ
ಗಾಯನ : ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್
🌻

4) ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಸಾಹಿತ್ಯ : ಹಂಸಲೇಖ
ಗಾಯನ : ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ
🌻

🏹 ಕೃಷ್ಣ ಚೇತನ ಲೋಕ 🌎

18 Oct, 08:21


🏹 ಕೃಷ್ಣ ಚೇತನ 🇮🇳 ರಿಂದ ಧ್ವನಿ

🏹 ಕೃಷ್ಣ ಚೇತನ ಲೋಕ 🌎

18 Oct, 08:21


🏹 ಕೃಷ್ಣ ಚೇತನ 🇮🇳 ರಿಂದ ಧ್ವನಿ

🏹 ಕೃಷ್ಣ ಚೇತನ ಲೋಕ 🌎

18 Oct, 08:21


🏹 ಕೃಷ್ಣ ಚೇತನ 🇮🇳 ರಿಂದ ಧ್ವನಿ

🏹 ಕೃಷ್ಣ ಚೇತನ ಲೋಕ 🌎

18 Oct, 08:21


🏹 ಕೃಷ್ಣ ಚೇತನ 🇮🇳 ರಿಂದ ಧ್ವನಿ

🏹 ಕೃಷ್ಣ ಚೇತನ ಲೋಕ 🌎

18 Oct, 08:21


🏹 ಕೃಷ್ಣ ಚೇತನ 🇮🇳 ರಿಂದ ಧ್ವನಿ

🏹 ಕೃಷ್ಣ ಚೇತನ ಲೋಕ 🌎

18 Oct, 08:21


🏹 ಕೃಷ್ಣ ಚೇತನ 🇮🇳 ರಿಂದ ಧ್ವನಿ

3,406

subscribers

11,107

photos

5,427

videos