ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

@lawafarm


ಇದು, ಅಡಿಕೆ ಬೆಳೆಗಾರರಿಗಾಗಿ ಗೆ ಇರುವ ಪ್ರತ್ಯೇಕ ನ್ಯೂಸ್ ಚಾನೆಲ್.
ಮಾರುಕಟ್ಟೆಯ ಆಗುಹೋಗು,ಏರಿಳಿತ ಮತ್ತು ಹವಾಮಾನ ವರದಿ, ಆಧುನಿಕ ವ್ಯವಸಾಯ ಪದ್ಧತಿಗಳು ಇವೇ ಮೊದಲಾದವುಗಳನ್ನು ಎಲ್ಲರಿಗಿಂತ ಮೊದಲು ತಿಳಿಯಲು ಸಬ್ಸ್ಕ್ರೈಬ್ ಮಾಡಿ 😊
Areca Nut News channel

ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

11 Oct, 05:32


ಮುಂದುವರಿದ ಅಡಿಕೆ ತಳಿ ಮಂಗಳದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು?

- ಚೀನಾ ಮೂಲದ ಈ ತಳಿಯು ತನ್ನ ಉತ್ತಮ ಗುಣಗಳಿಂದಾಗಿ ರೈತರ ಗಮನ ಸೆಳೆದಿದೆ.
- ಇದರ ವಿಶೇಷತೆಗಳಲ್ಲಿ ಆರಂಭಿಕ ಹೂಬಿಡುವಿಕೆ, ಹೆಚ್ಚಿನ ಫಲವತ್ತತೆ, ಹೆಚ್ಚಿನ ಪೋಷಕಾಂಶಗಳ ಹೀರಿಕೊಳ್ಳುವಿಕೆ, ಸಮಗ್ರ ಇಳುವರಿ ಮತ್ತು ಆರಂಭದಿಂದಲೂ ಸ್ಥಿತಿಸ್ಥಾಪಕತ್ವವನ್ನು ಒಳಗೊಂಡಿರುತ್ತದೆ.
ಸಾಸರ್ ಕಿರೀಟದ ವಿಸ್ತಾರವಾದ ವಿಸ್ತಾರದಿಂದ ತುಂಬಿದ ಪ್ರಕಾಶಮಾನವಾದ ಹಸಿರು ಕಿರೀಟವನ್ನು ಮಂಗಳದಲ್ಲಿ ಕಾಣಬಹುದು. ಬಾಚಿಹಲ್ಲುಗಳ ಕೆಳಗಿನ ತುದಿಯಲ್ಲಿ ಹರಳಿನ ಕುಂಡದ ಎಲೆಯ ಚಿತ್ತಾರವನ್ನು ಗುರುತಿಸಬಹುದು.
- ಹೋಲಿಸಿದರೆ, ಇದು ದಕ್ಷಿಣ ಕನ್ನಡದ ಮರಗಳಿಗಿಂತ ಚಿಕ್ಕದಾಗಿದೆ.
ಪ್ರತಿ ಮರಕ್ಕೆ ವಾರ್ಷಿಕ ಇಳುವರಿ ಸರಾಸರಿ 11.808. ಜಿ.ಪಲ್ಲದಡಿ (3.00ಕೆ.ಜಿ ಚಾಲಿ) ದಾಖಲಿಸಿದ್ದಾರೆ.
- 1972 ರಲ್ಲಿ, "ಮಂಗಳ" ಎಂಬ ಶೀರ್ಷಿಕೆಯನ್ನು ವಿಟ್ಲ ಸಂಶೋಧನೆಯಿಂದ ರೈತರಿಗಾಗಿ ಬಿಡುಗಡೆ ಮಾಡಲಾಯಿತು. ಕರಾವಳಿ ಕರ್ನಾಟಕ ಮತ್ತು ಕೇರಳಕ್ಕೆ ಈ ತಳಿಯನ್ನು ಶಿಫಾರಸು ಮಾಡಲಾಗಿದೆ. ಸಮುದ್ರ ಮಟ್ಟದಿಂದ 800 ಮೀ ಎತ್ತರದವರೆಗಿನ ಎಲ್ಲಾ ಪ್ರದೇಶಗಳಲ್ಲಿ ಮಂಗಳ ಅಡಿಕೆಯನ್ನು ಬೆಳೆಯಬಹುದು.
- ಮಧ್ಯಮ ಎತ್ತರ, ತ್ವರಿತ ಮತ್ತು ಹೆಚ್ಚಿನ ಇಳುವರಿ. 3-4 ವರ್ಷಗಳಲ್ಲಿ ಹೂವು ಬಿಡಲು ಪ್ರಾರಂಭಿಸುತ್ತದೆ. ಹೆಚ್ಚು ಕಾಯಿ ಕಟ್ಟುವುದು. ಗಾಢ ಹಸಿರು ವರ್ಣದ ವಿಸ್ತಾರವಾದ ವಿಸ್ತಾರ. ಹುರುಪಿನ ಕೆಳಭಾಗವು ಉಬ್ಬುವುದು, ತೆಳು ಹಳದಿ-ಕಿತ್ತಳೆ, ಮಧ್ಯಮ ಗಾತ್ರ ಮತ್ತು ದುಂಡಾಗಿ ಆಯತಾಕಾರವಾಗಿರುತ್ತದೆ.
-ಇದಲ್ಲದೆ, ಎರಡು ವರ್ಷಗಳಲ್ಲಿ ಕಂಡುಬರುವ ಎರಡು (ಸಾಮಾನ್ಯವಾಗಿ ಶೇಕಡಾ 2) ಮೂಲಿಕಾಸಸ್ಯಗಳನ್ನು ಕಿತ್ತು ಇತರ ಆರೋಗ್ಯ ಸಸ್ಯಗಳೊಂದಿಗೆ ನೆಡಬೇಕು.

ಪ್ರತಿ ಕೆಜಿಗೆ ಸರಾಸರಿ ಚಲ್ಲಿ ಇಳುವರಿ (ಕೆಜಿ): 3.00 ಚಾಲಿ
- ಶಿಫಾರಸು ಮಾಡಲಾದ ಪ್ರದೇಶ: ಕರ್ನಾಟಕ ಮತ್ತು ಕೇರಳ
- ಬಿಡುಗಡೆಯ ವರ್ಷ: 1972

ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

10 Oct, 05:32


ಅಡಿಕೆ ಹಿಂಗಾರು ಒಣಗುವ ರೋಗದ ಹತೋಟಿ ಕ್ರಮಗಳು:

-ಅಡಕೆ ಕೃಷಿಕರು ಕಳೆದ ವರ್ಷ ರೋಗ ಪೀಡಿತ ಒಣಗಿದ ಹಿಂಗಾರಗಳನ್ನು ತೋಟದಿಂದ ತೆಗೆದು ನಾಶ ಪಡಿಸುವುದರಿಂದ ರೋಗದ ಹರಡುವಿಕೆಯನ್ನುಪರಿಣಾಮಕಾರಿಯಾಗಿ ತಡೆಯಬಹುದು.

-ಡೈಥೇನ್‌-ಎಂ-45 – 3.0 ಗ್ರಾಂ ಅಥವಾ ಡೈಥೇನ್‌-ಜೆಡ್‌-782.0 ಗ್ರಾಂ ಹಾಗೂ ರಾಳ 0.5 ಮಿ.ಲೀ. ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಹಿಂಗಾರ ಅರಳುವ ಸಮಯದಲ್ಲಿ (ತೋಟದಲ್ಲಿ ಶೇ. 30-40 ಹಿಂಗಾರಗಳು ಹೊರ ಬಂದಿದ್ದಲ್ಲಿ) ಹಾಗೂ ಸುಮಾರು 25-30 ದಿನಗಳ ನಂತರ ಮತ್ತೊಂದು ಬಾರಿ ಸಿಂಪಡಿಸಬೇಕು.

-ಶಿಲೀಂದ್ರ ನಾಶಕದ ಜೊತೆಯಲ್ಲಿ ಪೆಂಟಾಟೋಮಿಡ್‌ ತಿಗಣೆ ಹಾಗೂ ಮೊದಲನೇ ಬಾರಿಗೆ ಕಂಡು ಬಂದಿರುವಂತಹ ಹಿಂಗಾರವನ್ನು ಕೆರೆದು ತಿನ್ನುವ ಹುಳುವಿನ ನಿಯಂತ್ರಣಕ್ಕಾಗಿ ಕ್ಲೋರೋಪೈರಿಫಾಸ್‌ 2.0 ಮಿ.ಲೀ. ಅಥವಾ ಕ್ವಿನಾಲ್ಫಾಸ್‌ 1.0 ಮಿ.ಲೀ. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು.

-ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಲ್ಲಿ ಅಡಿಕೆ ಬೆಳೆಯನ್ನು ಹಿಂಗಾರ ಒಣಗು ರೋಗ, ಪೆಂಟಾಟೋಮಿಡ್‌ತಿಗಣೆ ಮತ್ತು ಹಿಂಗಾರ ತಿನ್ನುವ ಹುಳುವಿನಿಂದ ಸಮರ್ಪಕವಾಗಿ ರಕ್ಷಿಸಬಹುದು.

ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

09 Oct, 05:32


ಅಡಿಕೆ ತೋಟದ ಸವಕಳಿಗೆ ಪರಿಹಾರ ಈ ‘ಮಲ್ಚಿಂಗ್’ ಪದ್ಧತಿ ಅಥವಾ ‘ಹೊದಿಕೆ ಪದ್ಧತಿ’

ನೂತನ ಪ್ರಯೋಗಗಳು, ಹೊಸ ತಂತ್ರಜ್ಞಾನ, ನೂತನ ಆವಿಷ್ಕಾರಗಳು ಕೃಷಿಯಲ್ಲಿ ಅವಶ್ಯಕ ಮತ್ತು ಅನಿವಾರ್ಯ ಕೂಡ, ಅದಕ್ಕೆ ಕೃಷಿ ರಂಗದಲ್ಲಿ ಮುಕ್ತಾಯ ಎನ್ನುವುದೇ ಇಲ್ಲ. ಅಡಿಕೆ ತೋಟಿಗರಿಗೆ ಭೂಸವಕಳಿ ಎಂಬುದು ಅನಾದಿಕಾಲದಿಂದಲು ಬಳುವಳಿಯಾಗಿ ಬಂದ ಸಮಸ್ಯೆ. ಮಳೆಗಾಲದಲ್ಲಿ ಮಳೆ ನೀರು ತೋಟದ ಮಣ್ಣನ್ನು ಕೊಚ್ಚಿಕೊಂಡು ಹೋಗುವುದರ ಜೊತೆಗೆ, ಹಾಕಿದ ಗೊಬ್ಬರವನ್ನು ಇಲ್ಲದಂತೆ ಮಾಡುತ್ತದೆ. ಅದಕ್ಕೆ ರೈತರು ಅನೇಕ ಪರಿಹಾರಗಳನ್ನು ಕಂಡು ಕೊಂಡರೂ ಸಹ ಈ ಸವಕಳಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಅದಕ್ಕೆ ಅಡಿಕೆ ಬೆಳೆಗಾರ ಕಂಡುಕೊಂಡ ಹೊಸ ಆವಿಷ್ಕಾರ ‘ಮಲ್ಚಿಂಗ್’ ಪದ್ಧತಿ ಅಥವಾ ‘ಹೊದಿಕೆ ಪದ್ಧತಿ’. ಈ ಪದ್ಧತಿ ದಿನದಿಂದ ದಿನಕ್ಕೆ ಅಡಿಕೆ ಬೆಳೆಗಾರನಿಗೆ ಹತ್ತಿರವಾಗುತ್ತಿದೆ, ಅಡಿಕೆ ಬೆಳೆಯುವ ಪ್ರದೇಶಗಳ ಕೃಷಿ ಸಹಕಾರ ಸಂಘಗಳಲ್ಲಿ ಸಾಮಾನ್ಯವಾಗಿ ದೊರೆಯುವ ಮೂರು ಅಡಿ ಅಗಲದಲ್ಲಿ ನಮ್ಮ ಅನುಕೂಲತೆಗೆ ತಕ್ಕಹಾಗೆ ಉದ್ದನೆಯ ಮಲ್ಚಿಂಗ್ ಶೀಟನ್ನು ಭರಣದ ಕಾಲುವೆ ಗುಂಟ ಹಾಸುತ್ತ ಹೋದರೆ ‘ಮಲ್ಚಿಂಗ್’ ಪದ್ಧತಿ ಅಳವಡಿಸಿದಂತಾಗುತ್ತದೆ. ಹೊದಿಕೆ ಸರಿಯದಂತೆ ತೋಟದಲ್ಲಿ ಅನಾಯಾಸವಾಗಿ ಸಿಗುವ ಭಾರವಾದ ವಸ್ತುವನ್ನು ಹೇರಿದರೆ ‘ಮಲ್ಚಿಂಗ್’ ಪದ್ಧತಿ ಮುಗಿದಂತೆ. ಹೆಚ್ಚು ಮಳೆ ಬೀಳುವ ಪ್ರದೇಶಗಳಿಗಂತೂ ಈ ಮಲ್ಚಿಂಗ್ ವರದಾನವೇ ಸರಿ.
ಮಲ್ಚಿಂಗ್ ನ ಅನುಕೂಲತೆಗಳು
-ಈ ಪದ್ಧತಿ ಅಳವಡಿಸಿಕೊಳ್ಳುವುದರಿಂದ ತೋಟದ ಮೂಲ ಮಣ್ಣು, ನಾವು ನೀಡಿದ ಮಣ್ಣು ಹಾಗೂ ಗೊಬ್ಬರವನ್ನೂ ಕೂಡ ರಕ್ಷಿಸಿ ಕೊಳ್ಳಬಹುದಲ್ಲದೆ, ಸಂಪೂರ್ಣ ಕಳೆಯನ್ನು ನಿಯಂತ್ರಿಸ ಬಹುದು.
-ಸದ್ಯ, ಈ ಮಲ್ಚಿಂಗ್ ಹೊದಿಕೆ ಕಿಲೋ ಒಂದಕ್ಕೆ 70 ರೂ. ಇದ್ದು ಎಕರೆಗೆ ಸಾಮಾನ್ಯವಾಗಿ 30 ಕಿಲೋ ಬೇಕಾಗುತ್ತದೆ. ಈ ಪದ್ಧತಿಯಲ್ಲಿ ಕೂಲಿ ಹಾಗೂ ಸಮಯದ ಉಳಿತಾಯವಾಗುತ್ತದೆ. ಮಳೆಗಾಲದ ನಂತರ ಈ ಹೊದಿಕೆಯನ್ನು ಜೋಪಾನವಾಗಿ ತೆಗೆದಿಟ್ಟರೆ ಐದು ವರುಷಗಳವರೆಗೂ ಉಪಯೋಗಿಸಬಹುದು.

ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

01 Oct, 08:04


ಅಡಿಕೆ ಕೃಷಿ: ಅಂದಿಗೂ ಇಂದಿಗೂ ಇರುವ ವ್ಯತ್ಯಾಸ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗ ಅಡಿಕೆ ಬೆಳೆಯುವ ಪ್ರದೇಶ ದುಪ್ಪಟ್ಟಾಗಿದೆ. ರಾಗಿ, ಜೋಳ, ಹುರುಳಿಯಂತಹ ಧಾನ್ಯಗಳನ್ನು ಬೆಳೆದು ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿ ಹತಾಶರಾಗಿರುವ ರೈತರು, ಸಾಂಪ್ರದಾಯಿಕ ಕೃಷಿ ಬೆಳೆಗಳಿಂದ ವಿಮುಖರಾಗುತ್ತಿದ್ದಾರೆ. ಸದ್ಯದಲ್ಲಿ ಉತ್ತಮ ಬೆಲೆ ಇರುವಂತಹ ಅಡಿಕೆ ತೋಟದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲೇ ಅತಿ ಹೆಚ್ಚು ಹಾಗೂ ಗುಣಮಟ್ಟದ ಅಡಿಕೆ ಬೆಳೆಯುವ ಪ್ರದೇಶ ಎನಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯನ್ನೂ ಮೀರಿಸಿ ಇತರ ಜಿಲ್ಲೆಗಳಲ್ಲೂ ಅಡಿಕೆ ವ್ಯಾಪಿಸಿದೆ. ಉದಾಹರಣೆಗೆ, ದಾವಣಗೆರೆ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಅಡಿಕೆ ತೋಟದ ವ್ಯಾಪ್ತಿ ದುಪ್ಪಟ್ಟಾಗಿದೆ. ಇದೇ ರೀತಿ ತುಮಕೂರು, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲೂ ಅಡಿಕೆ ಕೃಷಿ ಬಹಳಷ್ಟು ಹೆಚ್ಚಾಗಿದೆ.
ಇಂದು ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಪ್ರಮುಖವಾದವು, ಕೃಷಿ ಕಾರ್ಮಿಕರ ಸಮಸ್ಯೆ, ಅಡಿಕೆಗೆ ಬರುವ ರೋಗಗಳು, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ, ಕಾಡುಪ್ರಾಣಿ ಮತ್ತು ಪಕ್ಷಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ.
ಮೊದಲನೆಯದಾಗಿ, ಕೃಷಿ ಕಾರ್ಮಿಕರ ಸಮಸ್ಯೆ ಇಂದು ಗಂಭೀರವಾಗಿದೆ. ಯುವ ಕೃಷಿ ಕಾರ್ಮಿಕರು ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರಿದ್ದಾರೆ. ಆದ್ದರಿಂದ ರೈತರು ಅನಿವಾರ್ಯವಾಗಿ ಯಂತ್ರಗಳನ್ನು ಹೆಚ್ಚಾಗಿ ಅವಲಂಬಿಸುವಂತಾಗಿದೆ ಮತ್ತು ಅವರು ಕೃಷಿ ಕಾರ್ಯದಲ್ಲೂ ಬಹಳಷ್ಟು ಬದಲಾವಣೆ ಮಾಡಿಕೊಳ್ಳುವಂತಾಗಿದೆ. ಎರಡನೆಯದಾಗಿ, ಅಡಿಕೆ ಬೆಳೆಗೆ ಕಾಣಿಸಿಕೊಳ್ಳುವ ಪ್ರಮುಖ ರೋಗಗಳಾದ ಹಳದಿಎಲೆ ರೋಗ, ಹಿಡಿಮುಂಡಿಗೆ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಬೇಸರದ ಸಂಗತಿ ಎಂದರೆ, ಈ ಕಾಯಿಲೆಗಳಿಗೆ ಸೂಕ್ತ ಔಷಧ ಕಂಡುಹಿಡಿಯುವ ವಿಜ್ಞಾನಿಗಳ ಪ್ರಯತ್ನ ಈವರೆಗೂ ಫಲ ನೀಡದಿರುವುದು. ಮೂರನೆಯ ಸಮಸ್ಯೆ, ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಅಡಿಕೆ ತಿನ್ನುವುದರಿಂದ ಕ್ಯಾನ್ಸರ್‌ ಬರುತ್ತದೆ ಎಂಬಂತಹ ವರದಿಗಳು ಕೇಂದ್ರ ಸರ್ಕಾರದ ಬಳಿ ಇವೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದಕ್ಕೆ ಪೂರಕವಾದ ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಿ, ಅದನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿ ಮನವರಿಕೆ ಮಾಡಿಕೊಡಬೇಕಾದ ಹೊಣೆ ಈಗ ಕೇಂದ್ರದ ಮೇಲಿದೆ. ಈ ಕೆಲಸ ಈವರೆಗೂ ಆಗಿಲ್ಲ ಎಂಬ ವಿಷಾದ ಅಡಿಕೆ ಬೆಳೆಗಾರರಲ್ಲಿದೆ.
ನಾಲ್ಕನೆಯ ಸಮಸ್ಯೆ, ಕೆಲವೆಡೆ ಬೆಳೆದ ಫಸಲನ್ನು ಕಾಡುಪ್ರಾಣಿಗಳು ಹಾಗೂ ಪಕ್ಷಿಗಳಿಂದ ಉಳಿಸಿಕೊಳ್ಳಲು ರೈತರಿಗೆ ಆಗದಿರುವುದು. ಅಡಿಕೆ ಬೆಳೆಗಾರರು ಅಡಿಕೆ ಜೊತೆಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಕಾಡುಪ್ರಾಣಿ ಹಾಗೂ ಪಕ್ಷಿಗಳ ಕಾಟದಿಂದ ಈಚೆಗೆ ಯಾವ ಫಸಲನ್ನೂ ಉಳಿಸಿಕೊಳ್ಳಲು ಆಗುತ್ತಿಲ್ಲ. ಈ ಪ್ರಮುಖ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ, ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಇಂದು ದೇಶದಲ್ಲಿ ಉತ್ಪಾದನೆಯಾಗುವ ಕೆಂಪು ಅಡಿಕೆಯಲ್ಲಿ ಹೆಚ್ಚಿನ ಪಾಲನ್ನು ಪಾನ್‌ಮಸಾಲಕ್ಕೆ ಬಳಸಲಾಗುತ್ತದೆ. ಪಾನ್‌ಮಸಾಲಕ್ಕೆ ಬಳಸುವ ಉತ್ಪನ್ನ ಗಳಿಗೆ ಶೇ 10ರಷ್ಟು ಹೊಗೆಸೊಪ್ಪನ್ನು ಸೇರಿಸಿದರೆ ಗುಟ್ಕಾ ಆಗುತ್ತದೆ. ದೇಶದಲ್ಲಿ ಗುಟ್ಕಾ ನಿಷೇಧ ಆಗಿರುವುದರಿಂದ ಗುಟ್ಕಾ ತಿನ್ನುವವರು ಪಾನ್‌ಮಸಾಲ ಜೊತೆಗೆ ಹೊಗೆಸೊಪ್ಪನ್ನು ಸೇರಿಸಿ ತಿನ್ನುತ್ತಾರೆ. ಈ ಉತ್ಪನ್ನಗಳು ಹೊರದೇಶಗಳಿಗೆ ಹೆಚ್ಚೆಚ್ಚು ಪ್ರಮಾಣದಲ್ಲಿ ರಫ್ತಾಗುತ್ತಿವೆ. ಈ ಎಲ್ಲ ಕಾರಣಗಳಿಂದ ಅಡಿಕೆಗೆ ಉತ್ತಮವಾದ ಧಾರಣೆ ಇದೆ. ಆದರೆ ಅಡಿಕೆ ತೋಟದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿರುವುದರಿಂದ, ಇದು ಭವಿಷ್ಯದಲ್ಲಿ ಧಾರಣೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರ ಒಪ್ಪಂದದ ಪ್ರಕಾರ, ವಿದೇಶಗಳಿಂದ ಅಡಿಕೆ ಆಮದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಭೂತಾನ್‌ನಿಂದ ಸ್ವಲ್ಪ ಪ್ರಮಾಣದಲ್ಲಿ ಅಡಿಕೆ ಬಂದ ಮಾತ್ರಕ್ಕೆ ಧಾರಣೆಯೇನೂ ಕಡಿಮೆ ಆಗುವುದಿಲ್ಲ. ಆದರೆ ಮ್ಯಾನ್ಮಾರ್‌, ಇಂಡೊನೇಷ್ಯಾ, ಶ್ರೀಲಂಕಾ ಹಾಗೂ ಇತರ ದೇಶಗಳಿಂದ ಹಡಗಿನ ಮೂಲಕ ಕಳ್ಳತನ ದಲ್ಲಿ ಭಾರತಕ್ಕೆ ಬರುವ ಅಡಿಕೆಯನ್ನು ತಡೆಗಟ್ಟಬೇಕು. ಆಮದಾಗುವ ಅಡಿಕೆ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣ ಇರಬೇಕು.
ರಾಜ್ಯದಿಂದ ಸರ್ಕಾರಕ್ಕೆ ತೆರಿಗೆ ವಂಚಿಸಿ ಪ್ರತಿದಿನ ನೂರಾರು ಲಾರಿ ಲೋಡ್‌ ಅಡಿಕೆಯನ್ನು ಉತ್ತರ ಭಾರತಕ್ಕೆ ಸಾಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಧಾರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹಾಗೂ ಸರ್ಕಾರಕ್ಕೂ ನಷ್ಟ ಉಂಟಾಗುತ್ತದೆ. ಜೊತೆಗೆ, ಕಾನೂನಿನ ಪ್ರಕಾರ ಎಪಿಎಂಸಿ ಒಳಗೆ ವ್ಯಾಪಾರ ಮಾಡುವವರಿಗೆ ವ್ಯಾಪಾರ ಮಾಡುವುದೇ ಕಷ್ಟವಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರ ಜಾಗೃತವಾಗಬೇಕು.‌
ಈಗ ಹೊಸದಾಗಿ ಅಡಿಕೆ ಗಿಡ ಹಾಕಿದ ತೋಟ ಗಳು ಫಸಲಿಗೆ ಬರುವ ಹೊತ್ತಿಗೆ ಒಳ್ಳೆಯ ಧಾರಣೆ ಸಿಗಬೇಕೆಂದರೆ ಹೊಸ ಹೊಸ ಉತ್ಪನ್ನಗಳು, ಮೌಲ್ಯವರ್ಧಿತ ಪದಾರ್ಥಗಳು ಇನ್ನೂ ಹೆಚ್ಚಾಗಿ ಮಾರುಕಟ್ಟೆಗೆ ಬರಬೇಕು. ವಿದೇಶಗಳಿಗೆ ರಫ್ತಿನ ಪ್ರಮಾಣ ಹೆಚ್ಚಿಸುವು ದರ ಜೊತೆಗೆ ಆಮದು ಶುಲ್ಕ ಜಾಸ್ತಿ ಮಾಡಿದರೆ ಬೆಳೆಗಾರರ ಹಿತರಕ್ಷಣೆ ಸಾಧ್ಯವಾಗುತ್ತದೆ.

ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

30 Sep, 08:02


ರೈತರಿಗೆ ಮತ್ತೊಂದು ಭಾಗ್ಯ. ಔಷಧಿ ಸಿಂಪಡಣೆಗೆ ಡ್ರೋನ್ ವಿತರಣೆ:

ಈಗ ನಮ್ಮ ದೇಶದಲ್ಲಿಯೂ ಕೂಡ ಕೃಷಿ ಚಟುವಟಿಕೆ ಆಧುನೀಕರಣಗೊಳ್ಳುತ್ತಿದೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ, ಯಂತ್ರೋಪಕರಣ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ರೈತರು ಸಮಯ ಉಳಿತಾಯ ಮಾಡಿಕೊಳ್ಳುವುದರ ಜೊತೆಗೆ ಕಡಿಮೆ ಮಾನವ ಶಕ್ತಿ ಬಳಕೆಯಲ್ಲಿ ಪರಿಣಾಮಕಾರಿಯಾಗಿ ಕೃಷಿ ಚಟುವಟಿಕೆ ಮಾಡಿ ಮುಗಿಸುತ್ತಿದ್ದಾರೆ.
ಸರ್ಕಾರಗಳು ಕೂಡ ಇವುಗಳನ್ನು ಉತ್ತೇಜನ ಮಾಡುವ ಸಲುವಾಗಿ ಸಬ್ಸಿಡಿ ರೂಪದಲ್ಲಿ ಇವುಗಳ ಖರೀದಿಗೆ ಸಾಲ ಸೌಲಭ್ಯ ನೀಡುತ್ತಿದೆ. ಈ ಯಂತ್ರೋಪಕರಣಗಳ ಪಟ್ಟಿಯಲ್ಲಿ ಡ್ರೋನ್ ಕೂಡ ಸೇರುತ್ತದೆ. ಡ್ರೋನ್ ಈಗ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿದೆ, ಡ್ರೋನ್ ಸಹಾಯದಿಂದ ಬೆಳೆಗಳಿಗೆ ನ್ಯಾನೋ ಯೂರಿಯಾದಂತಹ ರಾಸಾಯನಿಕಗಳನ್ನು ಸಿಂಪಡಿಸುವ ಕೆಲಸ ಸರಾಗವಾಗುತ್ತದೆ.
ಆದರೆ ಸದ್ಯಕ್ಕೆ ದೇಶದಲ್ಲಿ ಆರ್ಥಿಕವಾಗಿ ಸದೃಢರಾಗಿರುವ ದೊಡ್ಡ ಗಾತ್ರದ ರೈತ ವರ್ಗಕ್ಕೆ ಮಾತ್ರ ಡ್ರೋನ್ ಕೊಳ್ಳಲು ಮುಂದಾಗಿದ್ದಾರೆ. ಯಾಕೆಂದರೆ ಈ ಡ್ರೋನ್ ಗಳ ಖರೀದಿಗೆ ಕನಿಷ್ಠ 15 ಲಕ್ಷವಾದರೂ ಹಣ ಬೇಕು. ಡ್ರೋನ್ ಬಳಕೆಯನ್ನು ಕೃಷಿ ಕ್ಷೇತ್ರದಲ್ಲಿ ಮನಗಂಡಂತಹ ಸರ್ಕಾರ ಡ್ರೋನ್ ಖರೀದಿ ಮಾಡುವವರಿಗೆ ನೆರವಾಗಿದೆ. ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿಮಿಟೆಡ್ (IFFCO) ದಿಂದ ರೈತರಿಗೆ ಉಚಿತ ಡ್ರೋನ್‌ಗಳನ್ನು ನೀಡಲಾಗುತ್ತಿದೆ.
ಈ ರೀತಿ ಡ್ರೋನ್ ಗಳನ್ನು ಪಡೆದರೆ ದುರುಪಯೋಗ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ರೈತರಿಂದ 1 ಲಕ್ಷ ಭದ್ರತಾ ಠೇವಣಿ ಪಡೆಯುತ್ತಿದೆ. ರೈತನು ಡ್ರೋನ್ ಮರಳಿಸುವ ಸಮಯದಲ್ಲಿ ಈ ಹಣವನ್ನು ಹಿಂತಿರುಗಿಸುತ್ತದೆ. ಉಚಿತವಾಗಿದ್ದರೂ ಕೂಡ ರೈತರಿಗೆ ಅತ್ಯುತ್ತಮ ಗುಣಮಟ್ಟದ ಡ್ರೋನ್‌ಗಳನ್ನು ನೀಡಲಾಗುವುದು ಎಂದು ಕಂಪನಿ ಹೇಳಿದೆ.
ಈ ಕಂಪನಿಗಳಿಂದ ಡ್ರೋನ್ ಬಳಸಿ ಈ ಮೂಲಕ ಕೃಷಿ ಬೆಳೆಗಳಿಗೆ ಔಷಧಿ ಸಿಂಪಡಿಸುವ ರೈತರಿಗೆ ಸರ್ಕಾರ ಸಹಾಯಧನ ಕೂಡ ನೀಡುತ್ತಿದೆ, ಬಿಹಾರ ರಾಜ್ಯ ಸರ್ಕಾರವು 10:26:10, ಯೂರಿಯಾ ಮತ್ತು ಇತರ ರಾಸಾಯನಿಕಗಳನ್ನು ಹೊಲಗಳಲ್ಲಿ ಸಿಂಪಡಿಸಲು ಡ್ರೋನ್‌ಗಳನ್ನು ಬಳಸುವ ರೈತರಿಗೆ ಪ್ರತಿ ಎಕರೆಗೆ 250 ರೂಪಾಯಿ ಸಹಾಯಧನ ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲೇ ಇದು ಎಲ್ಲ ರಾಜ್ಯಗಳಲ್ಲೂ ಜಾರಿಗೆ ಬರುವ ಸಾಧ್ಯತೆ ಇದೆ.
ಈ ಯೋಜನೆ ಕುರಿತು ಕೆಲ ಪ್ರಮುಖ ಅಂಶಗಳು:-
● ಕೆಲವು ತೋಟಗಾರಿಕಾ ಬೆಳೆಗಳಿಗೆ ಸರಳವಾಗಿ ರಾಸಾಯನಿಕ ಸಿಂಪಡಿಸುವುದು ಕಷ್ಟ, ಡ್ರೋನ್ ಮೂಲಕ ಇದು ಸರಾಗವಾಗುತ್ತದೆ ಮತ್ತು ಡ್ರೋನ್ ಮೂಲಕ ರಾಸಾಯನಿಕ ಸಿಂಪಡಣೆಗೆ ಕಡಿಮೆ ನೀರು, ವ್ಯಯವಾಗುತ್ತದೆ ಎನ್ನುವುದು ಗಮನಾರ್ಹ.
ಈ ಉಚಿತ ಡ್ರೋನ್ ವಿತರಣೆ ಯೋಜನೆಯಡಿ ಡ್ರೋನ್ ಪಡೆದ ರೈತರಿಗೆ ಕಂಪೆನಿಯಿಂದ ಸ್ಪ್ರೇಯರ್ ಕೂಡ ಸಿಗಲಿದೆ, ಇದರ ಜೊತೆಗೆ ಒಂದು ವಾರಗಳ ಕಾಲ ಉಚಿತವಾಗಿ ಪ್ರಾಯೋಗಿಕ ತರಬೇತಿ ಕೂಡ ಸಿಗುತ್ತದೆ.
ರಾಸಾಯನಿಕ ಸಿಂಪಡಣೆ ಮಾಡುವುದರಿಂದ ರೈತನು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದ ಈಗ ಡ್ರೋನ್ ಬಳಕೆಯಿಂದ ರೈತನ ಆರೋಗ್ಯವು ಸುಧಾರಿಸಲಿದೆ.
● ಪಾಸ್‌ಪೋರ್ಟ್ ಹೊಂದಿರುವ ರೈತರಿಗೆ ಮಾತ್ರ ಈ ಯೋಜನೆಯಡಿ ಡ್ರೋನ್ ಪಡೆಯಲು ಅವಕಾಶವಿರುತ್ತದೆ.
IFFCO ಈ ಡ್ರೋನ್ ಅನ್ನು ರೈತರು, ಸಹಕಾರ ಸಂಘಗಳು, FPO ಗಳು ಅಥವಾ ರೈತ ಉತ್ಪಾದಕ ಸಂಸ್ಥೆಗಳು ಮತ್ತು ರಾಜ್ಯದ ನೋಂದಾಯಿತ ಪ್ಯಾಕ್‌ಗಳಿಗೆ ಒದಗಿಸಲಿದೆ. ನೋಂದಾಯಿತ FPO ಗಳು ಮತ್ತು ಇತರ ರೈತ ಸಂಘಟನೆಗಳಿಗೆ ಸೇರುವ ಮೂಲಕ ರೈತರು ಈ ಸರ್ಕಾರದ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದುದಾಗಿದೆ.
● ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಬಹುದು.

ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

28 Sep, 08:03


ಅಡಿಕೆ ಬೆಳೆ ಕಾಂಡ ಸೀಳುವಿಕೆ ತಡೆಗಟ್ಟುವ ಕ್ರಮ ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ..
ಅಡಿಕೆ ಬೆಳೆ ಬೇಸಿಗೆಯಲ್ಲಿ ಕಾಂಡ ಸೀಳುವ ಸಂಭವ ಹೆಚ್ಚಾಗಿ ಕಂಡು ಬರುತ್ತಿದೆ. ಈ ಬಗ್ಗೆ ರೈತರು ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ತೋಟಗಾರಿಕೆ ಇಲಾಖೆ ಕೆಲವೊಂದು ಸಲಹೆ-ಸೂಚನೆ ನೀಡಿದೆ.
ಸೂರ್ಯನ ಕಿರಣಗಳು ನೈರುತ್ಯ ದಿಕ್ಕಿನಿಂದ ನೇರವಾಗಿ ಅಡಿಕೆ ಮರಗಳ ಮೇಲೆ ಬೀಳುವುದರಿಂದ ಕಾಂಡಗಳು ಸುಟ್ಟಂತಾಗಿ ಸೀಳುತ್ತವೆ. ಕಾಂಡದ ಎಳೆಯ ಭಾಗ ಬಂಗಾರದ ಹಳದಿ ಬಣ್ಣಕ್ಕೆ ಮಾರ್ಪಟ್ಟು ನಂತರದಲ್ಲಿ ಬಿರುಕುಗಳು ಕಾಣಿಸಿಕೊಂಡು ಕಾಂಡಗಳು ಬಲಹೀನವಾಗುತ್ತದೆ. ಇಂತಹ ಬಿರುಕುಗಳ ಮೂಲಕ ರೋಗಾಣುಗಳು ಒಳಗೆ ಸೇರಿಕೊಂಡು ರೋಗ ತಗಲುವ ಸಾಧ್ಯತೆ ಹೆಚ್ಚಾಗಿದ್ದು, ಬಲವಾದ ಗಾಳಿ ಬೀಸಿದಾಗ ಮರಗಳು ಮುರಿದು ಬೀಳಿತ್ತವೆ.
ಮಂಜಾಗ್ರತಾ ಕ್ರಮಗಳು:
ಸೂರ್ಯನ ಬೇಗೆಯಿಂದ ಮರದ ಕಾಂಡಗಳು ಸೀಳುವುದನ್ನು ತಪ್ಪಿಸಲು ತೋಟದ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎತ್ತರಕ್ಕೆ ಬೆಳೆಯುವ ನೆರಳು ಸಸ್ಯಗಳು ಬೆಳಸಬೇಕು.
ಸಸಿಗಳನ್ನು ನೆಡುವಾಗ ಸರಿಯಾದ ದಿಕ್ಕಿನಲ್ಲಿ ನಾಟಿ ಮಾಡಿ ನೆರಳನ್ನು ಒದಗಿಸಬೇಕು.
10 ಕೆ.ಜಿ ಸುಣ್ಣ, 2ಕೆ.ಜಿ ಬೆಲ್ಲ ಮತ್ತು ಅರ್ಧ ಕೆ.ಜಿ.ಮೈದಾ ಹಿಟ್ಟನ್ನು ನೀರಿನಲ್ಲಿ ಬೆರೆಸಿ ಮಿಶ್ರಣವನ್ನು ಕಾಂಡಗಳಿಗೆ ಬಳಿಯುವುದರಿಂದ ಮರಗಳನ್ನು ರಕ್ಷಿಸಬಹುದು.

ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

27 Sep, 08:02


ಅಡಿಕೆ ಸಿಪ್ಪೆಯಿಂದಲೂ ತಯಾರಿಸಬಹುದು ಸಾವಯವ ಗೊಬ್ಬರ:


ಒಂದು ಎಕರೆ ಅಡಿಕೆ ತೋಟದಲ್ಲಿ ನಮಗೆ ಅಂದಾಜು 600-700 ಕೆ.ಜಿ. ಒಣ ಅಡಿಕೆ ಸಿಪ್ಪೆ ದೊರೆಯುತ್ತದೆ. ರಾಜ್ಯದಲ್ಲಿ ಸುಮಾರು 12.75 ಲಕ್ಷ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಪ್ರತಿವರ್ಷ 8.9 ಲಕ್ಷ ಟನ್‍ನಷ್ಟು ಅಡಿಕೆ ಸಿಪ್ಪೆ ಉತ್ಪಾದನೆ ಆಗುತ್ತದೆ. ಇದರಲ್ಲಿ ಹೆಚ್ಚಿನ ಭಾಗ ಸಿಪ್ಪೆಯು ಯಾವ ಉಪಯೋಗಕ್ಕೂ ಬಾರದೆ ನಷ್ಟವಾಗುತ್ತದೆ.


ಅಡಿಕೆ ಸಿಪ್ಪೆಯು ಒಂದು ಸಾವಯವ ಪದಾರ್ಥವಾಗಿದ್ದು, ಅಡಿಕೆ ಬೆಳೆಗೆ ಬೇಕಾದ ಪೋಷಕಾಂಶಗಳ ಆಗರವಾಗಿದೆ. ಹೀಗಾಗಿ, ಅದನ್ನು ವ್ಯರ್ಥ ಮಾಡುವ ಬದಲಿಗೆ ಕಾಂಪೋಸ್ಟೀಕರಣಗೊಳಿಸಿ (ಗೊಬ್ಬರವಾಗಿ ಕಳಿಸುವಿಕೆ) ತೋಟದ ಮಣ್ಣಿಗೆ ಸೇರಿಸಿದ್ದೇ ಆದಲ್ಲಿ, ನೀರು ಹಾಗೂ ಪೋಷಕಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಶಕ್ತಿ ಸುಧಾರಣೆಗೊಳ್ಳುವುದರ ಜೊತೆಗೆ ಸೂಕ್ಷ್ಮಾಣುಜೀವಿಗಳ ಚಟುವಟಿಕೆಯೂ ಹೆಚ್ಚುತ್ತದೆ. ಇದರಿಂದ ಗಿಡಗಳಿಗೆ ಸುಲಭವಾಗಿ ಪೋಷಕಾಂಶಗಳು ದೊರೆಯುವಂತೆ ಆಗುತ್ತದೆ. ಇಷ್ಟೆಲ್ಲಾ ಉಪಯೋಗಗಳನ್ನು ಹೊಂದಿರುವ ಸಾವಯವ ಪದಾರ್ಥವಾದ ಅಡಿಕೆ ಸಿಪ್ಪೆಯನ್ನು ಸುಟ್ಟುಹಾಕಿದರೆ ಅಥವಾ ತೋಟದಿಂದ ಹೊರಕ್ಕೆ ಎಸೆದರೆ, ಪೋಷಕಾಂಶ ನಷ್ಟ ಆಗುವುದರ ಜೊತೆಗೆ ವಾತಾವರಣವೂ ಕಲುಷಿತಗೊಳ್ಳುತ್ತದೆ.


ಅಡಿಕೆ ಸಿಪ್ಪೆಯಿಂದ ಇಷ್ಟೊಂದು ಉಪಯೋಗಗಳು ಇದ್ದರೂ ಅದನ್ನು ಎಲ್ಲೆಂದರಲ್ಲಿ ಬಿಸಾಡುವುದಕ್ಕೆ ಕಾರಣಗಳು ಇಲ್ಲವೆಂದಿಲ್ಲ. ರೈತರು ಹೇಳುವ ಪ್ರಕಾರ, ಅಡಿಕೆ ಸಿಪ್ಪೆಯು ಹೆಚ್ಚು ನಾರಿನಿಂದ ಕೂಡಿದ್ದು ಕಳಿಯುವಿಕೆ ತುಂಬಾ ನಿಧಾನ, ಹಾಗೆಯೇ ಬಿಟ್ಟರೆ ಅದು ಕರಗಲು ಎರಡು ವರ್ಷ ಬೇಕಾಗುತ್ತದೆ. ಆದ್ದರಿಂದ ರೈತರು ಅದನ್ನು ಕಾಂಪೋಸ್ಟ್ ತೊಟ್ಟಿಗೆ ಹಾಕಲು ಹಿಂಜರಿಯುತ್ತಾರೆ. ಕೆಲವೊಮ್ಮೆ ಅಡಿಕೆ ಸಿಪ್ಪೆಯ ರಾಶಿಗೆ ಬೆಂಕಿಯನ್ನು ಹಾಕುತ್ತಾರೆ. ಅಡಿಕೆ ಸಿಪ್ಪೆಯಲ್ಲಿ ಯಥೇಚ್ಛವಾಗಿ ಲಿಗ್ನಿನ್, ಸೆಲ್ಯುಲೋಸ್, ಹೆಮಿ ಸೆಲ್ಯುಲೋಸ್ ಇರುವುದರಿಂದ ಕಳಿಯುವಿಕೆ ನಿಧಾನ. ವೈಜ್ಞಾನಿಕವಾಗಿ, ಒಂದು ವಸ್ತು ಬೇಗ ಕಳಿಯಬೇಕಾದರೆ, ಅದರಲ್ಲಿನ ಸಾರಜನಕ ಹಾಗೂ ಇಂಗಾಲದ ಅನುಪಾತ 1:30ರ ಆಸುಪಾಸಿನಲ್ಲಿ ಇರಬೇಕು. ಆದರೆ ಅಡಿಕೆ ಸಿಪ್ಪೆಯಲ್ಲಿ ಈ ಅನುಪಾತವು 1:80ರ ಆಸುಪಾಸಿನಲ್ಲಿದೆ. ಅಂದರೆ, ಇಂಗಾಲದ ಪ್ರಮಾಣವು ಸಾರಜನಜಕದ ಪ್ರಮಾಣಕ್ಕಿಂತ ಅಧಿಕವಾಗಿರುವುದರಿಂದ ಕಳಿಯುವಿಕೆ ನಿಧಾನ.
ಈ ರೀತಿ ಅಡಿಕೆ ಸಿಪ್ಪೆ ಕಳಿಸುವಿಕೆಯಲ್ಲಿರುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿರುವ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಬರೀ ಆರು ತಿಂಗಳಲ್ಲಿ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಪರಿವರ್ತಿಸುವ ಪದ್ಧತಿಯನ್ನು ಅಬಿವೃದ್ಧಿಪಡಿಸಿದ್ದಾರೆ. ಈ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಾದರೆ, ಪ್ರತಿ ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಈ ರೀತಿ ವೈಜ್ಞಾನಿಕವಾಗಿ ತಯಾರಿಸಿದ ಅಡಿಕೆ ಸಿಪ್ಪೆಯ ಕಾಂಪೋಸ್ಟ್‌ನಲ್ಲಿ ಸಾರಜನಕ, ಪೊಟ್ಯಾಷ್, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಇನ್ನುಳಿದ ಕಾಂಪೋಸ್ಟ್‌ಗಳಿಗೆ ಹೋಲಿಸಿದರೆ ಅಧಿಕವಾಗಿರುವುದರಿಂದ, ಅಡಿಕೆ ಬೆಳೆಗೆ ಅಡಿಕೆ ಸಿಪ್ಪೆ ಕಾಂಪೋಸ್ಟ್‌ ಉತ್ತಮ ಸಾವಯವ ಗೊಬ್ಬರ ಆಗಬಲ್ಲದು.
ರೈತರು ಇತ್ತೀಚಿನ ದಿನಗಳಲ್ಲಿ ಪಶುಸಂಗೋಪನೆಯನ್ನು ಕಡೆಗಣಿಸಿದ್ದು, ಕೃಷಿಗೆ ಅಗತ್ಯವಾದ ಗುಣಮಟ್ಟದ ಸಾವಯವ ಗೊಬ್ಬರ ಸಿಗುವುದು ದುರ್ಲಭವಾಗುತ್ತಿದೆ. ಹೀಗಾಗಿ, ಇಂತಹ ಕೃಷಿ ತ್ಯಾಜ್ಯಗಳನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಅಡಿಕೆ ಸಿಪ್ಪೆ ಮಾತ್ರವಲ್ಲ ಯಾವುದೇ ಬೆಳೆಯ ತ್ಯಾಜ್ಯವನ್ನು ವ್ಯರ್ಥ ಮಾಡದೆ, ತಮ್ಮ ಹೊಲದಲ್ಲಿಯೇ ಕಳಿಯುವಂತೆ ಮಾಡಿ ಹೊಲದ ಮಣ್ಣಿನಲ್ಲಿ ಬಹಳಷ್ಟು ಸಾವಯವ ವಸ್ತುಗಳು ಇರುವಂತೆ ನೋಡಿಕೊಂಡರೆ ಮಾತ್ರ ಮಣ್ಣಿನ ಆರೋಗ್ಯ ಸುಧಾರಿಸಿ ಕೃಷಿಯಲ್ಲಿ ಹೆಚ್ಚು ಸುಸ್ಥಿರತೆ ಸಾಧಿಸಲು ಸಾಧ್ಯ. ಹೀಗಾಗಿ, ರೈತರು ಅಡಿಕೆ ಸಿಪ್ಪೆ ಸೇರಿದಂತೆ ಯಾವುದೇ ಕೃಷಿ ತ್ಯಾಜ್ಯವನ್ನು ಸುಡದೆ, ವ್ಯರ್ಥ ಮಾಡದೆ ತಮ್ಮ ಹೊಲದ ಮಣ್ಣಿನ ಆರೋಗ್ಯ ವೃದ್ಧಿಸಲು ಬಳಸಬೇಕಾಗಿದೆ.

ಲಾವಾ ಫಾರ್ಮ್ - ಅಡಿಕೆ ಮಾರುಕಟ್ಟೆ ನ್ಯೂಸ್ ಚಾನೆಲ್ (Areca Nut News Channel)

26 Sep, 08:02


ಚಳಿಗಾಲದಲ್ಲಿ ಅಡಿಕೆ ಬಗ್ಗೆ ಕಾಳಜಿ ವಹಿಸುವುದು ಹೇಗೆ?

ಅಕ್ಟೋಬರ್‌ನಿಂದ ಫೆಬ್ರವರಿವರೆಗಿನ ಚಳಿಗಾಲದಲ್ಲಿ ಅಣಬೆಗಳು ಹಾಗೂ ಇತರ ಚಳಿಗಾಲ ಸಂಬಂಧಿತ ರೋಗಗಳಿಂದ ಅಡಿಕೆ ಬೆಳೆಗಳು ನಾಶವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಅವಧಿಯಲ್ಲಿ ಮರದ ಮೇಲೆ ಆವರಿಸಿಕೊಳ್ಳುವ ಮಂಜು ಸೂಕ್ಷ್ಮಾಣು ಜೀವಿಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುವ ಕಾರಣ, ಬೆಳೆಗಳು ಹೆಚ್ಚು ನಾಶವಾಗುತ್ತವೆ. ಇದರ ಪರಿಣಾಮವಾಗಿ ಎಲೆಗಳ ಕೆಳಭಾಗವು ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಕೊಳೆಯುವುದು ಉಂಟಾಗುತ್ತದೆ.
ಇದನ್ನು ತಡೆಗಟ್ಟಲು ರೋಗ ಪೀಡಿತ ಅಡಿಕೆಗಳು, ಒಣಗಿದ ಹೂವುಗಳು ಹಾಗೂ ಎಲೆಗಳನ್ನು ಸುಡಬೇಕು ಅಥವಾ ಗುಂಡಿ ತೆಗೆದು ಹೂತುಹಾಕಿ ಮಣ್ಣಿನಿಂದ ಮುಚ್ಚಬೇಕು ಎಂದು ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸೂಚಿಸಿದ್ದಾರೆ.
ತೋಟದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ನೀರು ಮುಕ್ತವಾಗಿ ಹರಿಯಲು ಸರಿಯಾದ ವ್ಯವಸ್ಥೆ ಮಾಡಬೇಕು. ಹೊಗೆ ಹರಡಿಸಲು ಕಸ ಹಾಗೂ ಭತ್ತದ ಸಿಪ್ಪೆಯನ್ನು ಸಂಗ್ರಹಿಸಿ ಸುಡಬೇಕು. ರೋಗ ಬಾಧಿತ ಮರಗಳ ಮೇಲೆ ಬೋರ್ಡೋ ದ್ರವ, ಮೆಟಾಕಾಕ್ಸಿಲ್ MZ ಅಥವಾ ಕಾಪರ್ ಆಕ್ಸಿಕ್ಲೋರೈಡ್ ನ್ನು ನಿಯತಕಾಲಿಕವಾಗಿ ಸಿಂಪಡಿಸುವ ಮೂಲಕ ಕೊಳೆ ರೋಗವನ್ನು ತಡೆಗಟ್ಟಬಹುದು.
ವಿಶೇಷವಾಗಿ ವರ್ಷದ ಕೆಲವು ಅವಧಿಗಳಲ್ಲಿ ಹೆಚ್ಚು ಕಾಳಜಿ ವಹಿಸುವ ಮೂಲಕ, ಕೊಳೆ ರೋಗಗಳಿಂದ ಅಡಿಕೆ ಕೃಷಿಯನ್ನು ಉಳಿಸಬಹುದು. ಹಾಗಾಗಿ ತಡವಾಗುವ ಮುನ್ನ ಕ್ರಮಗಳನ್ನು ಕೈಗೊಳ್ಳಿ.