ಬದುಕಿನಲ್ಲಿ ಯಶಸ್ವಿಯಾಗಬೇಕು ಅಂದರೆ ನಿಮ್ಮ ಕೆಲಸಗಳನ್ನು ಹುಚ್ಚರಂತೆ ಪ್ರೀತಿಸಿ. ನಿಂತಾಗ, ಕುಳಿತಾಗ, ಊಟ ಮಾಡುವಾಗ, ಹಾಗೆಯೇ ಮಲಗಿದಾಗ ಕೂಡ ಅದೇ ಧ್ಯಾನ ಇರಲಿ.
—ವಾಲ್ಟರ್ ಸಿಡ್ನಿ.
(ಟಾಟಾರವರಿಗೆ ಇಷ್ಟವಾದ ಮಾತು)
★ ನಾವು ಪ್ರೀತಿಸುವ ಕೆಲಸದಲ್ಲಿ ಮುಳುಗಿ ಹೋಗಬೇಕು. ಅದರಲ್ಲಿಯೇ ಸಾಧನೆ ಮಾಡಬೇಕು. ದೊಡ್ಡ ಸಂಶೋಧನೆಗಳನ್ನು ಮಾಡಿದವರು, ಸಾಹಿತ್ಯ, ಸಂಗೀತ, ಕಲೆ, ಅಭಿನಯದಲ್ಲಿ ಮಹಾನ್ ಎತ್ತರವನ್ನು ಮುಟ್ಟಿದವರೆಲ್ಲ ತಮ್ಮ ಕೆಲಸಗಳಲ್ಲಿ ಹುಚ್ಚರಂತೆ ಮಗ್ನರಾಗಿದ್ದರು. ಕೆಲಸದಲ್ಲಿ ಬರೀ ಪ್ರೀತಿ ಬೆಳೆಸಿಕೊಂಡರೆ ಸಾಲದು, ಅದರೊಂದಿಗೆ ಕುಶಲತೆ ಬೆಳೆಸಿಕೊಳ್ಳಬೇಕು. ತಾದ್ಯಾತ್ಮತೆ ಹೊಂದಬೇಕು''
★ ನಿಮ್ಮ ಅಂತರಾತ್ಮ ಮತ್ತು ಉದ್ದೇಶಗಳು ಶುದ್ಧವಾಗಿದ್ದರೆ ಚಮತ್ಕಾರಗಳು ಸಂಭವಿಸುತ್ತವೆ. ಸಹಾಯ ಮಾಡಬಹುದು ಎಂದು ನಂಬಿದವರು ಕೈ ಕೊಡಬಹುದು. ಆದರೆ, ನೀವು ಕನಸು ಮನಸ್ಸಿನಲ್ಲಿಯೂ ಯೋಚಿಸದವರು ಸಹಾಯಕ್ಕೆ ಧಾವಿಸಬಹುದು. ಸೋಲಿಗೆ ಹೆದರಬಾರದು. ಜಗತ್ತು ಮತ್ತೆ ಮತ್ತೆ ನಮಗೆ ಅವಕಾಶಗಳನ್ನು ನೀಡುವುದೇ ಬದುಕಿನ ವೈಭವ. 70-80 ವರ್ಷಗಳ ಅವಧಿಯ ಈ ಬದುಕು ಸಣ್ಣದು. ಬದುಕಿನಲ್ಲಿ ನಂಬಿಕೆ ಉತ್ಸಾಹಗಳೇ ನಮ್ಮ ಶಕ್ತಿ. ಪ್ರಯತ್ನ ಮಾಡುತ್ತಲೇ ಇರಬೇಕು.
★ ಭಯ ದೊಡ್ಡ ಶತ್ರು. ನೀವು ಭಯದ ಕೋಣೆಯಲ್ಲಿ ಕುಳಿತರೆ ಹೊರಗೆ ಬರಲಾರಿರಿ. ಆದರೆ ಜಗತ್ತು ಹೊರಗೆ ಇದೆ. ಅದು ವಿಶಾಲ ಮೈದಾನ. ನಿರ್ಭಯವಾಗಿ ಓಡುತ್ತಲೇ ಇರಬೇಕು.